Asianet Suvarna News Asianet Suvarna News

ಈ ರೀತಿಯ ರಾಜಕಾರಣ ಮಾಡಲ್ಲ: ಶ್ರೀ ರಾಮುಲು ಅಸಮಾಧಾನ

ಎಂದಿಗೂ ಈ ರೀತಿಯ ರಾಜಕಾರಣ ಮಾಡಲ್ಲ ಎಂದು ಶ್ರೀ ರಾಮುಲು ಅಸಮಾಧಾನ ಹೊರಹಾಕಿದ್ದಾರೆ. 

Minister Sriramulu Slams DK Shivakumar snr
Author
Bengaluru, First Published Oct 18, 2020, 8:09 AM IST

ಚಿತರ್ದುರ್ಗ (ಅ.18): ವಿಧಾನಸಭೆ ಉಪ ಚುನಾವಣೆಯಲ್ಲಿ ಆರ್‌.ಆರ್‌. ನಗರದ ಕಾಂಗ್ರೆಸ್‌ ಅಭ್ಯರ್ಥಿ ಮೇಲೆ ಕೇಸ್‌ ಹಾಕಿರೋದು ಚುನಾವಣಾ ಆಯೋಗ. 

ಈ ಸಂಬಂಧ ಸೇಡಿನ ರಾಜಕಾರಣ ಪ್ರಶ್ನೆಯೇ ಎದುರಾಗದು. ಸೇಡಿನ ರಾಜಕಾರಣ ಬಿಜೆಪಿ ಜಾಯಮಾನವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಕ್ಕೆ ಸಚಿವ ಬಿ.ಶ್ರೀರಾಮುಲು ತಿರುಗೇಟು ನೀಡಿದ್ದಾರೆ.

'ನಾಯಕ ಸಮುದಾಯ ರಾಜಕೀಯವಾಗಿ ತುಳಿಯಲು ಬಿಜೆಪಿ ಯತ್ನ' ...

ಹಿರಿಯೂರಿನಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ನಿಷ್ಪಕ್ಷಪಾತ ಕ್ರಮ ಇದಾಗಿದೆ. ಚುನಾವಣೆಯಲ್ಲಿ ಸೋಲುವ ಹತಾಶೆಯಿಂದ ಡಿಕೆಶಿ ಇಂತಹ ಮಾತುಗಳನ್ನು ಆಡುತ್ತಿದ್ದಾರೆ.

ಮತದಾರರ ಬಳಿ ಅನುಕಂಪ ಗಿಟ್ಟಿಸಿಕೊಳ್ಳುವ ಅವರ ಪ್ರಯತ್ನ ಫಲಿಸದು. ವಿಧಾನ ಪರಿಷತ್‌ ಹಾಗೂ ವಿಧಾನಸಭೆ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.

ಈಗಾಗಲೇ ರಾಜ್ಯದಲ್ಲಿ ಉಪಚುನಾವಣೆ ಅಬ್ಬರವೂ ಜೋರಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

Follow Us:
Download App:
  • android
  • ios