Asianet Suvarna News Asianet Suvarna News

ರಮೇಶ್ ಜಾರಕಿಹೊಳಿ ಭೇಟಿ : ಮಹತ್ವ ಪಡೆದುಕೊಂಡ ಚರ್ಚೆ

ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಬಾರಿ ಚರ್ಚೆಗೆ ಒಳಗಾದ ವಿಚಾರದ ಬಗ್ಗೆ ಇದೀಗ ಸಚಿವ ರಮೇಶ್ ಜಾರಕಿಹೊಳಿ ಚರ್ಚೆ ನಡೆಸಿದ್ದಾರೆ. ಶೀಘ್ರದಲ್ಲೇ ಮೇಕೆದಾಟು ಡ್ಯಾಂ ನಿರ್ಮಾಣದ ಬಗ್ಗೆ ಮಹತ್ವದ ತೀರ್ಮಾನ ಹೊರಬೀಳುವ ಸಾದ್ಯತೆ ಇದೆ. 

Minister Ramesh Jarkiholi Discuss over Soon Mekedatu Dam Project
Author
Bengaluru, First Published Sep 13, 2020, 3:31 PM IST

ಎಂ.ಅಫ್ರೋಜ್ ಖಾನ್‌

 ರಾಮ​ನ​ಗರ (ಸೆ.13):  ದಶ​ಕ​ಗ​ಳಷ್ಟುಹಳೆ​ಯ​ದಾದ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಮೇಕೆದಾಟು ಯೋಜನೆಯ ಚರ್ಚೆ ಮತ್ತೊಮ್ಮೆ ಮುನ್ನೆ​ಲೆಗೆ ಬಂದಿದೆ.

ಜಲ​ಸಂಪ​ನ್ಮೂಲ ಸಚಿವ ರಮೇಶ್‌ ಜಾರ​ಕಿ​ಹೊಳಿ ಸೆ. 14ರಂದು ಮೇಕೆ​ದಾಟು ಸಮತೋಲನಾ ಜಲಾಶಯ ನಿರ್ಮಿಸಲು ಉದ್ದೇ​ಶಿ​ಸಿ​ರುವ ಪ್ರದೇ​ಶ​ವನ್ನು ವೀಕ್ಷಿಸಿ, ಅಧಿ​ಕಾ​ರಿ​ಗ​ಳೊಂದಿಗೆ ಚರ್ಚೆ ನಡೆ​ಸುವ​ರು.

ಈ ಯೋಜ​ನೆಗೆ ಕೇಂದ್ರ ಜಲ​ಶಕ್ತಿ ಇಲಾಖೆಯಿಂದ ಒಪ್ಪಿಗೆ ದೊರ​ಕಿದ್ದು, ಕೇಂದ್ರ ಅರ​ಣ್ಯ​ ಇ​ಲಾ​ಖೆಯ ಅನು​ಮತಿಯಷ್ಟೇ ಬಾಕಿ ಉಳಿ​ದಿದೆ. ಹೀಗಾಗಿ ಸಚಿ​ವ ರಮೇಶ್‌ ಜಾರ​ಕಿ ​ಹೊ​ಳಿ​ರ​ವರ ಭೇಟಿ ಮಹತ್ವ ಪಡೆ​ದು​ಕೊ​ಂಡಿದೆ.

ಜೆಡಿ​ಎಸ್‌ -ಕಾಂಗ್ರೆಸ್‌ ​ಮೈ​ತ್ರಿ ಸರ್ಕಾ​ರ​ದಲ್ಲಿ ಮೇಕೆ​ದಾಟು ಯೋಜನೆ ಅನು​ಷ್ಠಾ​ನಕ್ಕೆ ಸಾಕಷ್ಟುಕಸ​ರತ್ತು ನಡೆ​ಸಿ​ದ್ದ ಜಲ​ಸಂಪ​ನ್ಮೂಲ ಸಚಿ​ವ​ರಾ​ಗಿದ್ದ ಡಿ.ಕೆ.​ಶಿ​ವ​ಕು​ಮಾರ್‌, 2019ರಲ್ಲಿ ಯೋಜ​ನಗೆ ಚಾಲನೆ ನೀಡಲು ಪ್ರಯ​ತ್ನಿ​ಸಿ​ದ್ದರು. ಆದರೆ, ದೋಸ್ತಿ ಸರ್ಕಾರ ಪತ​ನ​ಗೊಂಡ ತರು​ವಾಯ ಯೋಜನೆ ಚರ್ಚೆ ತಣ್ಣ​ಗಾ​ಗಿತ್ತು. ಬಿಜೆಪಿ ಸರ್ಕಾರ ಅಸ್ತಿ​ತ್ವಕ್ಕೆ ಬಂದ ನಂತರ ಕೇಂದ್ರ ಸರ್ಕಾರ ತಮಿ​ಳು​ನಾ​ಡಿನ ಆಕ್ಷೇ​ಪಣೆ ಹಿನ್ನೆ​ಲೆ​ಯಲ್ಲಿ ಯೋಜ​ನೆ​ಯನ್ನು ಮರು ಪರಿ​ಶೀ​ಲಿ​ಸು​ವಂತೆ ರಾಜ್ಯ ಸರ್ಕಾ​ರಕ್ಕೆ ಸೂಚಿಸಿತ್ತು. ಕೇಂದ್ರ ಜಲ​ಶಕ್ತಿ ಇಲಾ​ಖೆ​ ರಾಜ್ಯ ಸರ್ಕಾರ ಸಲ್ಲಿ​ಸಿದ ಮನ​ವಿಗೆ ಸ್ಪಂದಿ​ಸಿ ಯೋಜನೆ ಅನು​ಷ್ಠಾ​ನಕ್ಕೆ ಅನು​ಮತಿ ನೀಡಿದೆ.

ರಾಯಣ್ಣ ಪ್ರತಿಮೆ ವಿವಾದ ಇತ್ಯರ್ಥಗೊಳ್ಳುತ್ತಿದ್ದಂತೆಯೇ ಬೆಳಗಾವಿಗೆ ಮಂತ್ರಿಗಳ ದಂಡು

ಕೇಂದ್ರ ಅರ​ಣ್ಯ​ಇ​ಲಾಖೆಯಿಂದ ಹಿಂದೇಟು ಏಕೆ?

ಮೇಕೆ​ದಾಟು ಯೋಜ​ನೆ​ಯಿಂದ 3,181 ಹೆಕ್ಟೇರ್‌ ವನ್ಯ​ಜೀವಿ ಸಂರ​ಕ್ಷಿತ ಅರ​ಣ್ಯ ​ಸೇ​ರಿ​ದಂತೆ 5,051 ಹೆಕ್ಟೇರ್‌ ಅರಣ್ಯ ಪ್ರದೇಶ ಮುಳು​ಗ​ಡೆ​ಯಾ​ಗು​ತ್ತದೆ. ಇದರಲ್ಲಿ ಶೇಕಡ 90 ರಷ್ಟುಅರಣ್ಯ ಭೂಮಿ ಮತ್ತು ಉಳಿದ ಕಂದಾಯ ಭೂಮಿ ಸೇರಿದೆ. ಆನೆ, ಜಿಂಕೆ ಸೇರಿದಂತೆ ಇನ್ನಿತರ ವನ್ಯ ಸಂಕುಲ ನೆಲೆ ಕಳೆದುಕೊಳ್ಳಲಿವೆ.

ಸಂಗಮ ಅರಣ್ಯ ಪ್ರದೇಶದಲ್ಲಿನ ಆನೆ ಕಾರಿಡಾರ್‌ ಕರ್ನಾಟಕ ಮತ್ತು ತಮಿಳುನಾಡುಗಳನ್ನು ಸಂಪರ್ಕ ಕಲ್ಪಿಸುತ್ತದೆ. ಈ ಅರಣ್ಯ ಪ್ರದೇಶದಳಲ್ಲಿ ಆನೆಗಳು ಹೆಚ್ಚಾಗಿದ್ದು, ಆನೆ ಕಾರಿಡಾರ್‌ಗೂ ಧಕ್ಕೆಯಾಗಲಿದೆ. ಭವಿಷ್ಯದಲ್ಲಿ ಮಾನವ -ಪ್ರಾಣಿ ಸಂಘರ್ಷ ಹೆಚ್ಚಳಕ್ಕೆ ಕಾರಣವಾಗಬಹುದು. ಹೀಗಾ​ಗಿ ಕೇಂದ್ರ ಅರ​ಣ್ಯ​ಇ​ಲಾಖೆ ಯೋಜನೆ ಅನು​ಷ್ಠಾ​ನಕ್ಕೆ ಗ್ರೀನ್‌ ಸಿಗ್ನಲ್‌ ನೀಡಲು ಮೀನಾ​ಮೇಷ ಎಣಿ​ಸು​ತ್ತಿದೆ ಎನ್ನ​ಲಾಗಿದೆ.

ಈ ಕಾರ​ಣ​ದಿಂದಾಗಿಯೇ ಜಲ​ಸಂಪ​ನ್ಮೂಲ ಸಚಿವ ರಮೇಶ್‌ ಜಾರ​ಕಿ​ಹೊಳಿ ಖುದ್ದಾಗಿ ಮೇಕೆ​ದಾಟು ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಯೋಜನೆ ಅನು​ಮ​ತಿ​ಗಾಗಿ ಕೇಂದ್ರ​ದೊಂದಿಗೆ ಚರ್ಚಿ​ಸಿ ಯೋಜ​ನೆಗೆ ಒಪ್ಪಿಗೆ ಪಡೆ​ಯಲು ನಿರ್ಧ​ರಿ​ಸಿ​ದ್ದಾರೆ.

ಜಲಾಶಯ ಯೋಜನೆಯ ತಾಂತ್ರಿಕ ಮಾಹಿತಿ

ಮೇಕೆ​ದಾಟು ಅಣೆಕಟ್ಟೆಯನ್ನು ಮುಗ್ಗೂರು ಅರಣ್ಯ ವಲಯದ ವಾಚಿಂಗ್‌ ಟವರ್‌ ಗುಡ್ಡೆಯಿಂದ ಹನೂರು ಅರಣ್ಯ ವಲಯದ ಗುಡ್ಡೆಯ ನಡುವಿನ ಒಂಟಿಗುಂಡು ಬಳಿ ನಿರ್ಮಿ​ಸಲು ಸ್ಥಳ ಗುರು​ತಿ​ಸ​ಲಾ​ಗಿದೆ.

ಅಣೆಕಟ್ಟೆಯ ಎತ್ತರ 441.20 ಮೀಟರ್‌, ಅಗಲ 674.5 ಮೀಟರ್‌ ಇರಲಿದೆ. ಹೊರ ಹರಿವಿಗಾಗಿ 15* 12 ಮೀಟರ್‌ ಎತ್ತರದಷ್ಟು17 ಗೇಟ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಒಟ್ಟು ನೀರಿನ ಶೇಖರಣಾ ಸಾಮರ್ಥ್ಯ 66.85 ಟಿಎಂಸಿ ನೀರು. 64 ಟಿಎಂಸಿ ನೀರು ತುಂಬಿದರೆ ಜಲಾಶಯ ಭರ್ತಿ ಎಂದರ್ಥ. ಅಣೆಕಟ್ಟಿನ 370.48 ಮೀಟರ್‌ ವರೆಗೆ 7.7 ಟಿಎಂಸಿ ನೀರು​ ಡೆಡ್‌ ಸ್ಟೋರೇಜ್‌ನಲ್ಲಿ ಸಂಗ್ರಹವಾಗಿರುತ್ತದೆ.

ಒಂಟಿಗುಂಡು ಸ್ಥಳದಿಂದ 1.5 ಕಿ.ಮೀ ದೂರದಲ್ಲಿ ಮೇಕೆದಾಟು ಸಿಗಲಿದೆ. ಅಲ್ಲಿ ಅಣೆಕಟ್ಟೆಯಿಂದ ಹೊರ ಬರುವ ನೀರನ್ನು ಬಳಸಿಕೊಂಡು 400 ರಿಂದ 440 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯದ ಘಟಕ ಸ್ಥಾಪಿಸಲು ಉದ್ದೇ​ಶಿ​ಸ​ಲಾ​ಗಿ​ದೆ. 2018ರಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು 5,912 ಕೋಟಿ ರುಪಾಯಿ ವೆಚ್ಚ ತಗಲುವ ಅಂದಾಜಿತ್ತು. ಇದ​ಕ್ಕಾಗಿ ಇಂಧನ ಇಲಾಖೆಯಿಂದ 2 ಸಾವಿರ ಕೋಟಿ ಹಾಗೂ ಜಲಸಂಪನ್ಮೂಲ ಇಲಾಖೆಯಿಂದ 3,912 ಕೋಟಿ ವಿನಿಯೋಗಿಸಲು ನಿರ್ಧರಿಸಲಾಗಿತ್ತು. ಆದ​ರೀಗ ಯೋಜನೆ ವೆಚ್ಚ ಹೆಚ್ಚಾ​ಗುವ ಸಾಧ್ಯ​ತೆ​ಗ​ಳಿವೆ.

Follow Us:
Download App:
  • android
  • ios