Asianet Suvarna News Asianet Suvarna News

ವ್ಯಕ್ತಿ ಮೃತಪಟ್ಟ ಬಳಿಕ ಆಸ್ಪ​ತ್ರೆಗೆ ದಾಖ​ಲಾಗಲು ಕರೆ!

ವ್ಯಕ್ತಿಯೋರ್ವ ತೀವ್ರ ಅನಾರೋಗ್ಯದಿಂದ ಮೃತಪಟ್ಟ ಬಳಿಕ ಆತನ ಮನೆಗೆ ಕರೆ ಮಾಡಿದ ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ.

mims hospital call covid patient house for admission after his death
Author
Bengaluru, First Published Aug 27, 2020, 8:29 AM IST

ಮಂಡ್ಯ (ಆ.27): ಕೊರೋನಾ ಸೋಂಕಿನ ಜೊತೆಗೆ ಬಹು ಅಂಗಾಂಗ ವೈಫ​ಲ್ಯ​ದಿಂದ ವ್ಯಕ್ತಿಯೊಬ್ಬರು ಮೃತ​ಪಟ್ಟ3 ದಿನ​ದ ಬಳಿಕ ಆಸ್ಪ​ತ್ರೆಗೆ ದಾಖ​ಲಾ​ಗು​ವಂತೆ ಮಿಮ್ಸ್‌ ಕೋವಿಡ್‌ ಕೇಂದ್ರ​ದಿಂದ ದೂರ​ವಾಣಿ ಕರೆ ಬಂದಿರುವ ವಿಲ​ಕ್ಷಣ ಪ್ರಸಂಗ​ವೊಂದು ಜರುಗಿದೆ. 

ಕಿಡ್ನಿ, ಲಿವರ್‌ ವೈಫಲ್ಯ, ಶ್ವಾಸ​ಕೋ​ಶದ ತೊಂದ​ರೆ​ಯಿಂದ ಕಳೆದ ಬುಧ​ವಾರ ಮಂಡ್ಯದ ಶ್ರೀನಿ​ವಾ​ಸಲು ಮಿಮ್ಸ್‌ ಆಸ್ಪ​ತ್ರೆಗೆ ದಾಖ​ಲಾ​ಗಿ​ದ್ದರು. ಚಿಕಿತ್ಸೆ ಫಲ​ಕಾ​ರಿ​ಯಾ​ಗದೆ ಶನಿ​ವಾರ ಮುಂಜಾನೆ ಆಸ್ಪ​ತ್ರೆ​ಯಲ್ಲಿ ಅವರು ಮೃತ​ಪ​ಟ್ಟಿದ್ದರು. ರೋಗಿಯ ಸಂಬಂಧಿಕರು ಗಲಾಟೆ ಮಾಡಿದ ಬಳಿ​ಕ​ವಷ್ಟೇ ಸಂಜೆ ವೇಳೆಗೆ ಶವ​ವನ್ನು ನೀಡಿದರು. ತಾಲೂ​ಕಿನ ಸುಂಡ​ಹಳ್ಳಿ ಬಳಿ ಕೊರೋನಾ ಸೋಂಕಿ​ನಿಂದ ಮೃತ​ಪ​ಟ್ಟ​ವ​ರಿ​ಗಾಗಿ ಗುರು​ತಿ​ಸ​ಲಾ​ಗಿದ್ದ ಸ್ಥಳ​ದಲ್ಲಿ ಅಂತ್ಯ ​ಸಂಸ್ಕಾರವನ್ನೂ ನೆರ​ವೇ​ರಿ​ಸ​ಲಾ​ಗಿತ್ತು. 

ಬೆಂಗಳೂರು: 17 ದಿನದಲ್ಲಿ 50 ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ...

ಸೋಮ​ವಾರ ಮಧ್ಯಾಹ್ನ ಮೃತ ಶ್ರೀನಿ​ವಾ​ಸಲು ಅವರ ಮನೆ​ಯ​ವ​ರಿಗೆ ಮಿಮ್ಸ್‌ನ ಕೋವಿಡ್‌ ಸಿಬ್ಬಂದಿ ದೂರ​ವಾಣಿ ಕರೆ ಮಾಡಿ ಶ್ರೀನಿ​ವಾ​ಸಲು ಅವ​ರಿಗೆ ಸೋಂಕು ದೃಢ​ಪ​ಟ್ಟಿದೆ. ತಕ್ಷಣವೇ ಕೋವಿಡ್‌ ಆಸ್ಪ​ತ್ರೆಗೆ ದಾಖ​ಲಾ​ಗು​ವಂತೆ ಸೂಚಿ​ಸಿ​ದ್ದು ಅಚ್ಚ​ರಿಗೆ ಕಾರ​ಣ​ವಾ​ಯಿತು.

ಇದ​ರಿಂದ ಸಿಡಿ​ಮಿ​ಡಿ​ಗೊಂಡ ಮನೆ​ಯ​ವರು ಅವ​ರಾ​ಗಲೇ ಮೃತಪಟ್ಟು ಮೂರು ದಿನ ಕಳೆ​ದಿದೆ. ಈಗ ಎಲ್ಲಿಂದ ಕರೆ​ತಂದು ಆಸ್ಪ​ತ್ರೆಗೆ ದಾಖಲು ಮಾಡು​ವುದು ಎನ್ನು​ವ​ಷ್ಟ​ರಲ್ಲಿ ಸಿಬ್ಬಂದಿ ಮೊಬೈಲ್‌ ಸಂಪರ್ಕ ಕಡಿ​ತ​ಗೊ​ಳಿ​ಸಿ​ದರು.

ಸೆಪ್ಟಂಬರ್‌ ಅಂತ್ಯದೊಳಗೆ ರಾಜ್ಯದಲ್ಲಿ ಕೊರೋನಾ ಸೋಂಕಿರ ಸಂಖ್ಯೆ 6 ಲಕ್ಷಕ್ಕೆ?

"

Follow Us:
Download App:
  • android
  • ios