* ಮೇ. 24ರಂದು ಮದುವೆಗೆ ಪರವಾನಗಿ ಪಡೆದಿದ್ದ 300ಕ್ಕೂ ಅಧಿಕ ಕುಟುಂಬಗಳು* ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಮದುವೆ ರದ್ದು* ಆಯಾ ತಾಲೂಕಾಡಳಿತಕ್ಕೆ ಪರವಾನಗಿ ವಾಪಾಸ್‌ ಸಲ್ಲಿಸಬೇಕಿರುವ ಕುಟುಂಬಗಳು

ಹೂವಿನಹಡಗಲಿ(ಮೇ.12): ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಮದುವೆ ಸಮಾರಂಭಗಳಿಗೆ ಆಯಾ ತಾಲೂಕು ಆಡಳಿತ ನೀಡಿದ್ದ ಪರವಾನಗಿ ರದ್ದು ಪಡಿಸುವ ಮೂಲಕ ಪರವಾನಗಿ ಹಿಂಪಡೆಯುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಾರದ ಹಿಂದೆಯೇ ಮೇ. 14, ಮೇ. 24ರಂದು ಮದುವೆಗೆ 300ಕ್ಕೂ ಅಧಿಕ ಕುಟುಂಬಗಳು ಪರವಾನಗಿ ಪಡೆದಿದ್ದರು. ಈಗ ಆ ಕುಟುಂಬಗಳು ತಾಲೂಕಾಡಳಿತಕ್ಕೆ ಪರವಾನಗಿ ವಾಪಾಸ್‌ ಸಲ್ಲಿಸಬೇಕಿದೆ.

"

ಮಾನವೀಯತೆಯನ್ನೇ ಮರೆತ ಜನ: ಸೋಂಕಿತ ತಂದೆ-ತಾಯಿಯೊಂದಿಗೆ ಮಗು..!

ಜಿಲ್ಲಾಡಳಿತ ಹೊರಡಿಸಿರುವ ಆದೇಶದಂತೆ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಮದುವೆಗೆ ಅವಕಾಶ ನೀಡದಿರುವ ಹಿನ್ನೆಲೆಯಲ್ಲಿ ಆಯಾ ತಾಲೂಕಾಡಳಿತ ನೀಡಿದ್ದ ಮದುವೆ ಪರವಾನಗಿಯನ್ನೇ ರದ್ದುಪಡಿಸಿ ಅವರಿಗೆ ನೀಡಿದ್ದ 50 ಜನರ ಪಾಸ್‌ಗಳನ್ನು ಹಿಂಪಡೆಯುತ್ತಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona