Asianet Suvarna News Asianet Suvarna News

ಕಾಂಗ್ರೆಸ್‌ - ಬಿಜೆ​ಪಿಯಿಂದ ಜೆಡಿ​ಎಸ್‌ ಮನೆಗೆ ಕನ್ನ ! ಪಕ್ಷ ಬಿಟ್ಟು ತೆರಳಿದ ಮುಖಂಡರು

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಇದೇ ವೇಳೆ ಪಕ್ಷಾಂತರ ಪರ್ವವೂ ಜೋರಾಗಿದೆ. ಇತ್ತ ಹಲವು ಮುಖಂಡರು ದಳಕ್ಕೆ ಕೈ ಕೊಟ್ಟು ತೆರಳಿದ್ದಾರೆ. 

Many Leaders quit JDS in Ramanagara snr
Author
Bengaluru, First Published Dec 7, 2020, 1:23 PM IST

ರಾಮ​ನ​ಗರ (ಡಿ.07):   ಗ್ರಾಮ ಪಂಚಾ​ಯಿತಿ ಚುನಾ​ವ​ಣೆಯ ಮೂಲಕ ಜಿಲ್ಲೆ​ಯಲ್ಲಿ ಪಕ್ಷ ಸಂಘ​ಟ​ನೆಗೆ ಮುಂದಾ​ಗಿ​ರುವ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯ​ಕರು ಜೆಡಿ​ಎಸ್‌ ಮನೆಗೆ ಕನ್ನ ಹಾಕು​ತ್ತಿ​ದ್ದಾರೆ.

ಹಳ್ಳಿ ಫೈಟ್‌ ಎಂದೇ ಬಿಂಬಿ​ತ​ವಾ​ಗಿ​ರುವ ಗ್ರಾಮ ಪಂಚಾ​ಯಿತಿ ಚುನಾ​ವಣೆ ಕಾರ್ಯ​ಚ​ಟು​ವ​ಟಿಕೆ ಜಿಲ್ಲೆ​ಯಲ್ಲಿ ಚಳಿ​ಗಾ​ಲ​ದ​ಲ್ಲಿಯೂ ರಾಜ​ಕೀಯ ನಾಯ​ಕ​ರಿಗೆ ಬೆವರುವಂತೆ ಮಾಡು​ತ್ತಿದೆ. ಇನ್ನೇನು ಚುನಾ​ವ​ಣೆಗೆ ಕೆಲವೇ ದಿನ​ಗಳು ಮಾತ್ರ ಬಾಕಿ ಇರುವ ಹಿನ್ನೆ​ಲೆ​ಯಲ್ಲಿ ಜಿಲ್ಲೆ​ಯಲ್ಲಿ ಪಕ್ಷಾಂತರ ಪರ್ವ ಜೋರಾಗಿ ನಡೆ​ಯು​ತ್ತಿದೆ.

ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿ​ಎಸ್‌ ಪಕ್ಷ​ಗ​ಳಲ್ಲಿ ಕೆಲವು ಮುಖಂಡರು, ಕಾರ್ಯ​ಕ​ರ್ತರು ಅತ್ತಿಂದ ಇತ್ತ, ಇತ್ತಿಂದ ಅತ್ತ ಹಾರು​ತ್ತಿ​ದ್ದಾರೆ. ಕಾಂಗ್ರೆಸ್‌ ಹಾಗೂ ಬಿಜೆಪಿಯ ನಾಯ​ಕರು ಪೈಪೋ​ಟಿಗೆ ಬಿದ್ದ​ವ​ರಂತೆ ಜೆಡಿ​ಎಸ್‌ನ ಮುಖಂಡರು - ಕಾರ್ಯ​ಕ​ರ್ತ​ರನ್ನು ಹೆಚ್ಚಾಗಿ ಸೆಳೆ​ಯು​ತ್ತಿ​ದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಯಾರನ್ನು ಮದುವೆ ಆಗಿದ್ರು..?

ಜಿಲ್ಲೆ​ಯಲ್ಲಿ ನೆಲೆ ಕಂಡು​ಕೊ​ಳ್ಳಲು ಶ್ರಮಿ​ಸು​ತ್ತಿ​ರುವ ಬಿಜೆಪಿಯವರು ಕಾಂಗ್ರೆಸ್‌ - ಜೆಡಿ​ಎಸ್‌ ಪಕ್ಷ​ಗಳ ಮುಖಂಡರು , ಕಾರ್ಯ​ಕ​ರ್ತ​ರನ್ನು ಕರೆ​ದು​ಕೊಂಡು ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡು​ತ್ತಿ​ದ್ದಾರೆ. ಕೆಲ​ವು ಗ್ರಾಮ ಪಂಚಾ​ಯಿ​ತಿ​ಗ​ಳಲ್ಲಿ ಪಕ್ಷಾಂತರ ಮಾಡಿ​ದ​ವ​ರನ್ನೇ ಅಭ್ಯ​ರ್ಥಿ​ಗ​ಳ​ನ್ನಾಗಿಯೂ ಮಾಡು​ತ್ತಿ​ದ್ದಾರೆ.

ಕೈ- ಕಮ​ಲ​ದ ಎದುರು ಮಂಕಾದ ದಳ:  ಒಂದು ಹೋಬಳಿ ಅಥವಾ ಗ್ರಾಮ​ದಲ್ಲಿ ಬಿಜೆಪಿಯವರು ಕಾಂಗ್ರೆಸ್‌ನವರನ್ನು ಪಕ್ಷಕ್ಕೆ ಸೆಳೆ​ದು​ಕೊಂಡರೆ, ಇದಕ್ಕೆ ಪ್ರತಿ​ಯಾಗಿ ಕಾಂಗ್ರೆಸ್‌ನವರು ಬಿಜೆ​ಪಿ ಹಾಗೂ ಜೆಡಿ​ಎಸ್‌ ಮುಖಂಡ​ರನ್ನು ಪಕ್ಷಕ್ಕೆ ಆಹ್ವಾ​ನಿ​ಸಿ​ಕೊ​ಳ್ಳು​ತ್ತಿ​ದ್ದಾರೆ. ಕಾಂಗ್ರೆಸ್‌-ಬಿಜೆ​ಪಿಯ ಸೆಳೆ​ದಾ​ಟ​ದ ಎದುರು ಜೆಡಿ​ಎಸ್‌ ಮಂಕಾ​ಗಿದೆ.

ಸಂಸದ ಡಿ.ಕೆ.​ಸು​ರೇಶ್‌ ನೇತೃ​ತ್ವ​ದಲ್ಲಿ ಕಾಂಗ್ರೆಸ್‌ ನಾಯ​ಕರು ಜಿಲ್ಲೆ​ಯಾದ್ಯಂತ ಗ್ರಾಮ ಪಂಚಾ​ಯಿತಿ ಚುನಾ​ವ​ಣೆಯ ಪೂರ್ವ ಸಿದ್ಧತಾ ಸಭೆ​ಗ​ಳನ್ನು ನಡೆ​ಸು​ತ್ತಿ​ದ್ದಾರೆ. ಪ್ರತಿ​ಯೊಂದು ಸಭೆ​ಯಲ್ಲಿ 15ರಿಂದ 20 ಮಂದಿ ಜೆಡಿ​ಎಸ್‌ ಮುಖಂಡರು - ಕಾರ್ಯ​ಕ​ರ್ತರು ಪಕ್ಷ ತೊರೆದು ಕಾಂಗ್ರೆಸ್‌ ಸೇರ್ಪ​ಡೆ​ಯಾ​ಗು​ತ್ತಿ​ದ್ದಾರೆ.

ಗ್ರಾಮ​ ಸ್ವ​ರಾಜ್ಯ ಸಮಾ​ವೇಶ ನಡೆ​ಸಿದ ಬಿಜೆಪಿ ನಾಯ​ಕರು ಕೂಡ ಕಾಂಗ್ರೆಸ್‌- ಜೆಡಿ​ಎಸ್‌ನವ​ರನ್ನು ಪಕ್ಷಕ್ಕೆ ಸೇರಿ​ಸಿ​ಕೊಂಡಿ​ದ್ದರು. ಅಲ್ಲದೆ, ಜಿಲ್ಲಾ​ಧ್ಯಕ್ಷ ಹುಲು​ವಾಡಿ ದೇವ​ರಾಜು, ಮುಖಂಡ​ರಾ​ದ ಡಿ.ನ​ರೇಂದ್ರ ಸೇರಿದ ಯುವ ಪಡೆಯ ಗುಂಪೊಂದು ವಿಪ​ಕ್ಷ​ಗಳ ಕೋಟೆಗೆ ಲಗ್ಗೆ​ಯಿಟ್ಟು ಆ ಪಕ್ಷದ ಮುಖಂಡ​ರ ಕೈಗೆ ಕಮಲ ಹಿಡಿ​ಯು​ವಂತೆ ಮಾಡು​ತ್ತಿ​ದ್ದಾರೆ.

ಇನ್ನು ಮಾಜಿ ಸಿಎಂ ಕುಮಾ​ರ​ಸ್ವಾಮಿ ಚನ್ನ​ಪ​ಟ್ಟಣ, ಶಾಸಕಿ ಅನಿತಾ ಕುಮಾ​ರ​ಸ್ವಾಮಿ ರಾಮ​ನ​ಗರ ಹಾಗೂ ಶಾಸಕ ಎ.ಮಂಜು​ನಾಥ್‌ ಮಾಗಡಿ ಕ್ಷೇತ್ರ​ದಲ್ಲಿ ಅನ್ಯ ಪಕ್ಷದ ಕಾರ್ಯ​ಕ​ರ್ತ​ರನ್ನು ಸೆಳೆ​ಯುವ ಪ್ರಯತ್ನ ಮಾಡು​ತ್ತಿಲ್ಲ. ಬದ​ಲಿಗೆ ಗ್ರಾಮ ಪಂಚಾ​ಯಿತಿ ಚುನಾ​ವ​ಣೆಯಲ್ಲಿ ಬೆಂಬ​ಲಿತ ಅಭ್ಯ​ರ್ಥಿ​ಗಳ ಗೆಲು​ವಿಗೆ ಬಿರು​ಸಿನ ಪ್ರಚಾರ ನಡೆ​ಸು​ತ್ತಿ​ದ್ದಾರೆ.

Follow Us:
Download App:
  • android
  • ios