Asianet Suvarna News Asianet Suvarna News

ಶೀಘ್ರವೇ ಮಂಡ್ಯದಲ್ಲಿ ಮತ್ತೊಂದು ಚುನಾವಣೆ

ಮಂಡ್ಯದಲ್ಲಿ ಶೀಘ್ರವೇ ಮತ್ತೊಂದು ಚುಣಾವಣೆ ನಡೆಯುತ್ತಿದೆ. ಈಗಾಗಲೇ ಚುನಾವಣೆಗೆ ದಿನಾಂಕವನ್ನೂ ನಿಗದಿ ಮಾಡಲಾಗಿದೆ. ಅಷ್ಟಕ್ಕೂ ಯಾವುದಕ್ಕೆ ಈ ಮತದಾನ? ಓದಿ ಈ ಸುದ್ದಿ....

Mandya MANMUl Election Will Be Held On september 8
Author
Bengaluru, First Published Aug 24, 2019, 11:22 AM IST

ಮಂಡ್ಯ:  ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಸೆಪ್ಟೆಂಬರ್‌ 8 ರಂದು ಚುನಾವಣೆ ನಡೆಯಲಿದೆ. ಚುನಾವಣಾ ವೇಳಾಪಟ್ಟಿಪ್ರಕಟಕೊಂಡಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸುವ ಅಭ್ಯರ್ಥಿಗಳು ನಾಮಪತ್ರಗಳನ್ನು ಆಗಸ್ವ್‌ 24 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಿಟರ್ನಿಂಗ್‌ ಅಧಿಕಾರಿಗಳಿಗೆ ಸಲ್ಲಿಸಬೇಕು.

ನಾಮಪತ್ರ ಸಲ್ಲಿಸಲು ಆಗಸ್ವ್‌ 31 ಕೊನೆ ದಿನ. ಸೆಪ್ಟೆಂಬರ್‌ 1 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಿಟರ್ನಿಂಗ್‌ ಅಧಿಕಾರಿಗಳಿಂದ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳ ಪರಿಶೀಲನೆ ನಂತರ ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿಪ್ರಕಟವಾಗಲಿದೆ. ನಾಮಪತ್ರಗಳನ್ನು ವಾಪಸ್‌ ಪಡೆಯಲು ಸೆಪ್ಟೆಂಬರ್‌ 2ರ ಮಧ್ಯಾಹ್ನ 3 ಗಂಟೆಯವರೆಗೆ ಕಾಲಾವಕಾಶವಿದೆ.

ವಿವಿಧ ಜಿಲ್ಲೆಗಳ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಮಧ್ಯಾಹ್ನ 3 ಗಂಟೆಯ ನಂತರ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಮನ್‌ಮುಲ್ ಕಚೇರಿಯ ನೋಟೀಸ್‌ ಬೋರ್ಡಿನಲ್ಲಿ ಅರ್ಹತೆ ಪಡೆದವರ ಅಂತಿಮ ಪಟ್ಟಿಪ್ರಕಟಿಸಲಾಗುವುದು. ಚುನಾವಣೆ ನಡೆಸಬೇಕಾದಲ್ಲಿ ಅರ್ಹತೆ ಪಡೆದವರಿಗೆ ನಂತರ ಚಿಹ್ನೆ ನೀಡಲಾಗುವುದು. ಸೆಪ್ಟೆಂಬರ್‌ 4 ರಂದು ಬೆಳಗ್ಗೆ 11 ಗಂಟೆಗೆ ಚುನಾವಣೆ ಸ್ಪರ್ಧಿಸಲು ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ಪಟ್ಟಿಚಿಹ್ನೆ ಸಮೇತ ಪ್ರಕಟಿಸಲಾಗುತ್ತದೆ. 

ವಿದ್ಯಾನಗರದ ಶ್ರೀ ಲಕ್ಷ್ಮೀಜನಾರ್ಧನ ಶಾಲೆಯಲ್ಲಿ ಚುನಾವಣೆ ಮತದಾನವು ಸೆಪ್ಟೆಂಬರ್‌ 8 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ನಡೆಯಲಿದೆ. ಮತದಾನ ಮುಕ್ತಾಯವಾದ ನಂತರ ಮತ ಎಣಿಕೆ ನಡೆಯಲಿದೆ. ನಂತರ ಫಲಿತಾಂಶ ಪ್ರಕಟಿಸಲಾಗುವುದು ಎಂದು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ರಿಟರ್ನಿಂಗ್‌ ಅಧಿಕಾರಿಗಳಾದ, ಅಪರ ಜಿಲ್ಲಾಧಿಕಾರಿ ಟಿ.ಯೊಗೇಶ್‌ ತಿಳಿಸಿದ್ದಾರೆ.

Follow Us:
Download App:
  • android
  • ios