ಮತ್ತೆ ಬಂದಿದೆ ನರಹಂತಕ ಚಿರತೆ! ಈವರೆಗೆ ಜಿಲ್ಲೆಯಲ್ಲಿ ಐದು ಬಲಿ
ಒಂದಲ್ಲ, ಎರಡಲ್ಲ ಭರ್ತಿ ನಾಲ್ಕು ಮಂದಿಯನ್ನು ಬಲಿ ಪಡೆದು ಕಳೆದ 4 ತಿಂಗಳಿನಿಂದ ಕಣ್ಮರೆಯಾಗಿದ್ದ ನರಹಂತಕ ಚಿರತೆ ಮತ್ತೊಂದು ಮಗುವಿನ ರಕ್ತ ಹೀರುವುದರೊಂದಿಗೆ ಗ್ರಾಮೀಣ ಜನರನ್ನು ಬೆಚ್ಚಿ ಬೀಳಿಸಿದೆ.
ತುಮಕೂರು(ಜು.12): ಒಂದಲ್ಲ, ಎರಡಲ್ಲ ಭರ್ತಿ ನಾಲ್ಕು ಮಂದಿಯನ್ನು ಬಲಿ ಪಡೆದು ಕಳೆದ 4 ತಿಂಗಳಿನಿಂದ ಕಣ್ಮರೆಯಾಗಿದ್ದ ನರಹಂತಕ ಚಿರತೆ ಮತ್ತೊಂದು ಮಗುವಿನ ರಕ್ತ ಹೀರುವುದರೊಂದಿಗೆ ಗ್ರಾಮೀಣ ಜನರನ್ನು ಬೆಚ್ಚಿ ಬೀಳಿಸಿದೆ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಬಿನ್ನಿಕುಪ್ಪೆಯಲ್ಲಿ ಮಹಿಳೆಯೊಬ್ಬಳನ್ನು ಕೊಲ್ಲುವುದರೊಂದಿಗೆ ಜಿಲ್ಲೆಯಲ್ಲಿ ನರಹಂತಕ ಚಿರತೆ ಭೀತಿ ಹುಟ್ಟಿಸಿತು. ಇದಾದ ಬಳಿಕ ಕುಣಿಗಲ್ ತಾಲೂಕು ದೊಡ್ಡಮಳಲಾಡಿಯಲ್ಲಿ ವೃದ್ಧರೊಬ್ಬರ ರಕ್ತ ಹೀರಿತು. ನಂತರ ಮಣಕುಪ್ಪೆಯಲ್ಲಿ 9 ವರ್ಷದ ಬಾಲಕನನ್ನು ಕೊಂದು ಹಾಕಿತು. ಫೆಬ್ರವರಿ ತಿಂಗಳಿನಲ್ಲಿ ಬೈಚಾಪುರದಲ್ಲಿ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಹೆಣ್ಣು ಮಗುವನ್ನು ಕೊಲ್ಲುವುದರೊಂದಿಗೆ ಮತ್ತಷ್ಟುಬೆಚ್ಚಿ ಬೀಳಿಸಿತ್ತು ಈ ನರಹಂತಕ ಚಿರತೆ.
ವಿಕ್ಟೋರಿಯಾ ಆಸ್ಪತ್ರೆ ICUನಲ್ಲಿದ್ದ 70 ವರ್ಷದ ಕೊರೋನಾ ಸೋಂಕಿತ ಆತ್ಮಹತ್ಯೆ
ಅಂದು ಬೈಜಾಪುರಕ್ಕೆ ಅರಣ್ಯ ಸಚಿವರು ಆಗಮಿಸಿ ನರಹಂತಕ ಚಿರತೆಯನ್ನು ಕಂಡಲ್ಲಿ ಗುಂಡು ಹೊಡೆಯುವಂತೆ ಆದೇಶಿಸಿದರು. ಚಿರತೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹುಡುಕಿದರೂ ನರಹಂತಕ ಜಾಡು ಸಿಗಲಿಲ್ಲ. ಕಡೆಗೆ ನಾಗರಹೊಳೆಯಿಂದ ಆನೆಗಳನ್ನು ಕರೆಸಿ ಕಾರ್ಯಾಚರಣೆ ನಡೆಸಲಾಯಿತು. ಆದರೂ ನಿರೀಕ್ಷೆ ಮಟ್ಟದಷ್ಟುಯಶಸ್ಸು ಕಾಣಲಿಲ್ಲ.
8 ಚಿರತೆಗಳ ಸೆರೆ:
ತುಮಕೂರು, ಗುಬ್ಬಿ ಹಾಗೂ ಕುಣಿಗಲ್ ತಾಲೂಕುಗಳಲ್ಲಿ ಕಳೆದ 5 ತಿಂಗಳಿನಿಂದ ಬೆಂಬಿಡದೆ ಕಾಡುತ್ತಿದ್ದ ಚಿರತೆಯನ್ನು ಕಡೆಗೂ ಅರಣ್ಯ ಇಲಾಖೆಯವರು ಬೋನಿಗೆ ಕೆಡವುವಲ್ಲಿ ಯಶಸ್ವಿಯಾದರು. ಇದರ ಮಧ್ಯೆ ಹೇಮಾವತಿ ನಾಲೆ ಕೆಳಗೆ ಅಡಗಿದ್ದ ಚಿರತೆಯೊಂದನ್ನು ಅತ್ಯಂತ ಯಶಸ್ವಿ ಕಾರ್ಯಾಚರಣೆಯಿಂದ ಸೆರೆ ಹಿಡಿದರು. ಅಂತೂ ಇಂತೂ ಚಿರತೆ ಹಾವಳಿ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ವ್ಯಕ್ತಿಯೊಬ್ಬರ ಮೇಲೆ ಚಿರತೆ ಎಗರಿ ಗಾಯಗೊಳಿಸಿತ್ತು. ಇನ್ನೇನು ಆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಬಲಿ ತೆಗೆದುಕೊಳ್ಳುವ ಮೂಲಕ ಚಿರತೆ ಮತ್ತೆ ತನ್ನ ಅಟ್ಟಹಾಸ ಮೆರೆದಿದೆ.
ಅತ್ಯಂತ ಅಪಾಯಕಾರಿ:
ಈಗಾಗಲೇ ತುಮಕೂರು ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟುಖಾಲಿ ಜಮೀನುಗಳಲ್ಲಿ ಪೊದೆಗಳನ್ನು ಬೆಳೆದಿವೆ. ಅಲ್ಲದೇ, ಹೇಮಾವತಿ ನೀರಿನ ಒರತೆ ಸಾಕಷ್ಟುಇರುವುದರಿಂದ ಚಿರತೆಗಳ ಆವಾಸ ಸ್ಥಾನಕ್ಕೆ ಇದು ಹೇಳಿ ಮಾಡಿಸಿದಂತಾಗಿದೆ. ಮೊದಲೆಲ್ಲಾ ಚಿರತೆಗಳು ಕೋಳಿ, ಕುರಿ, ಮೇಕೆ, ಕರುಗಳನ್ನಷ್ಟೆತಿನ್ನುತ್ತಿದ್ದು, ಈಗ ಮನುಷ್ಯರ ರಕ್ತ ಹೀರುವ ಮೂಲಕ ನರಹಂತಕಗಳಾಗಿವೆ. ಈಗಾಗಲೇ ಐದು ನರಬಲಿ ಪಡೆದಿರುವ ನರಹಂತಕ ಚಿರತೆಗಳಿಗೆ ಕಡಿವಾಣ ಹಾಕದಿದ್ದರೆ ಮತ್ತಷ್ಟುಅನಾಹುತ ತಪ್ಪಿದ್ದಲ್ಲ. ಚಿರತೆ ಹಾವಳಿ ಹೆಚ್ಚಾಗಿದ್ದ ಸಂದರ್ಭದಲ್ಲಿ ರಾತ್ರಿ ವೇಳೆ ಯಾರೂ ಕೂಡ ಮನೆಯಿಂದ ರಾತ್ರಿ ವೇಳೆ ಓಡಾಡುತ್ತಿರಲಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ನರಹಂತಕ ಚಿರತೆ ಹಾವಳಿಯಿಲ್ಲದೆ ನೆಮ್ಮದಿಯಾಗಿದ್ದ ಜನರಿಗೆ ಮತ್ತೆ ನರಹಂತಕ ಜಾಡು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ.
ನರಹಂತಕನ ಹೆಜ್ಜೆ ಗುರುತು
ಮೊದಲ ಬಾರಿ ಬಿನ್ನಿಕುಪ್ಪೆಯಲ್ಲಿ ಮಹಿಳೆ ಬಲಿ
ದೊಡ್ಡಮಳಲವಾಡಿಯಲ್ಲಿ ಎರಡನೇ ಬಲಿ
ಮಣಕುಪ್ಪೆಯಲ್ಲಿ ಬಾಲಕನ ರಕ್ತ ಹೀರಿದ ಚಿರತೆ
ಬೈಜಾಪುರದಲ್ಲಿ 3 ವರ್ಷದ ಮಗುವನ್ನು ಕೊಂದ ಚಿರತೆ
ಈಗ ಕುಣಿಗಲ್ ತಾಲೂಕು ರಾಜೇನಹಳ್ಳಿಯಲ್ಲಿ ಐದನೇ ಬಲಿ
2019 ಅಕ್ಟೋಬರ್ ತಿಂಗಳಲ್ಲಿ ಮೊದಲ ಬಾರಿ ಬಿನ್ನಿಕುಪ್ಪೆಯಲ್ಲಿ ಮಹಿಳೆ ಬಲಿ ಪಡೆಯುವ ಮೂಲಕ ಚಿರತೆ ಜನರಲ್ಲಿ ಆತಂಕ ಮೂಡಿಸಿತು. ನಂತರ ದಿನದಲ್ಲಿ ತಿಂಗಳಲ್ಲಿ ಆಗ್ಗಾಗ್ಗೆ ದಾಳಿ ಮಾಡುವ ಮೂಲಕ ಜಿಲ್ಲೆಯಲ್ಲಿ ತಮ್ಮ ದಾಳಿಗಳ ಸಂಖ್ಯೆ ಹೆಚ್ಚು ಮಾಡಿತ್ತು. ನಂತರ ಅರಣ್ಯ ಇಲಾಖೆ ಕಾರಾರಯಚಾರಣೆದಿಂದ ಒಂದುವರೆ, ಎರಡು ತಿಂಗಳಿಗೊಮ್ಮೆ ದಾಳಿ ಮಾಡಿ ಪ್ರಾಣಿಗಳ ಜೊತೆಗೆ ಮನುಷ್ಯರನ್ನು ಬಲಿ ಪಡೆಯುತ್ತಿತ್ತು. ನಾಲ್ಕೈದು ತಿಂಗಳ ಹಿಂದ ಚಿರತೆಗಳ ಸೆರೆ ಹಾಗೂ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ದಾಳಿ ನಂತರ ಕೊಂಚ ದಾಳಿ ನಿಲ್ಲಿಸಿತ್ತು. ಆದರೆ, ಶನಿವಾರ ಮಧ್ಯಾಹ್ನ 3 ಗಂಟೆ 10 ವರ್ಷದ ಮಗುವನ್ನು ಬಲಿ ಪಡೆಯುವ ಮೂಲಕ ಮತ್ತೆ ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ.
-ಉಗಮ ಶ್ರೀನಿವಾಸ್