Asianet Suvarna News Asianet Suvarna News

ರಾಜಕೀಯ ಲಾಭ ಪಡೆಯಲು ಕೆ. ಮಹದೇವ್‌ ಹವಣಿಸುತ್ತಿದ್ದಾರೆ : ಅಶೋಕ್‌

ಅಪೂರ್ಣಗೊಂಡ ಕಾಮಗಾರಿಗಳನ್ನು ಉದ್ಘಾಟಿಸುವ ಮೂಲಕ ಚುನಾವಣೆಯ ಸಂದರ್ಭ ರಾಜಕೀಯ ಲಾಭ ಪಡೆದುಕೊಳ್ಳಲು ಶಾಸಕ ಕೆ. ಮಹದೇವ್‌ ಹವಣಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಪಟ್ಟಣ ಘಟಕ ಅಧ್ಯಕ್ಷ ಅಶೋಕ್‌ ಕುಮಾರ್‌ಗೌಡ ಆರೋಪಿಸಿದರು.

Mahadev Try  to gain political advantage : Ashok snr
Author
First Published Mar 21, 2023, 6:43 AM IST

 ಪಿರಿಯಾಪಟ್ಟಣ :  ಅಪೂರ್ಣಗೊಂಡ ಕಾಮಗಾರಿಗಳನ್ನು ಉದ್ಘಾಟಿಸುವ ಮೂಲಕ ಚುನಾವಣೆಯ ಸಂದರ್ಭ ರಾಜಕೀಯ ಲಾಭ ಪಡೆದುಕೊಳ್ಳಲು ಶಾಸಕ ಕೆ. ಮಹದೇವ್‌ ಹವಣಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಪಟ್ಟಣ ಘಟಕ ಅಧ್ಯಕ್ಷ ಅಶೋಕ್‌ ಕುಮಾರ್‌ಗೌಡ ಆರೋಪಿಸಿದರು.

ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೆ. ವೆಂಕಟೇಶ್‌ ಅವರು ಶಾಸಕರಾಗಿದ್ದ ವೇಳೆ ಪಟ್ಟಣಕ್ಕೆ . 63 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಗೆ ಅನುದಾನ ಮಂಜೂರು ಮಾಡಿಸಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರಿಂದ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಶೇ.50 ರಷ್ಟುಕಾಮಗಾರಿ ಬಾಕಿ ಇದೆ. ಟ್ರೀಟ್ಮೆಂಟ್‌ ಪ್ಲಾಂಟ್‌ ಕಟ್ಟಡ ಪೂರ್ಣಗೊಂಡಿಲ್ಲ. ರಾಜಕೀಯ ಕಾರಣಕ್ಕಾಗಿ ಲೋಕಾರ್ಪಣೆಗೊಳಿಸಿರುವ ಶಾಸಕ ಕೆ. ಮಹದೇವ್‌ ಪಟ್ಟಣದ ಜನತೆಗೆ ಮೋಸ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಡಾ.ಬಿ.ಆರ್‌. ಅಂಬೇಡ್ಕರ್‌ ಭವನ ನಿರ್ಮಿಸಲು ಅನುದಾನ ತಂದು ಉತ್ತಮ ವಿನ್ಯಾಸದೊಂದಿಗೆ ಕಟ್ಟಡ ನಿರ್ಮಾಣ ಪ್ರಾರಂಭಿಸಿದ ಕೆ. ವೆಂಕಟೇಶ್‌ ಪರಾಭವಗೊಂಡ ಬಳಿಕ ಭವನದ ಕಾಮಗಾರಿ ಮುಂದುವರಿಸಿರುವ ಶಾಸಕ ಕೆ.ಮಹದೇವ್‌ ಮೂಲ ವಿನ್ಯಾಸವನ್ನು ಬದಲಾಯಿಸಿ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಉದ್ಘಾಟನೆ ಮಾಡಿದ್ದಾರೆ ಎಂದು ದೂರಿದರು.

ಮುಖಂಡ ಬಿ.ಪಿ. ರಾಜೇಶ್‌ ಮಾತನಾಡಿ, ಪಟ್ಟಣದ ಕಾಯಂ ನಿವಾಸಿಯಾಗಿರುವ ಶಾಸಕ ಕೆ. ಮಹದೇವ್‌ ಪಟ್ಟಣಕ್ಕೆ ಯಾವುದೇ ಶಾಶ್ವತ ಯೋಜನೆ ತರದೆ ನಿರ್ಲಕ್ಷ ವಹಿಸಿದ್ದು ಬಡವರಿಗೆ ನಿವೇಶನ ಹಂಚುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಜಮೀನು ಗುರುತು ಕೂಡ ಮಾಡದೆ ಭೂಮಿ ಖರೀದಿಸದೆ ಒಂದೇ ಒಂದು ನಿವೇಶನವನ್ನು ಬಡವರಿಗೆ ಹಂಚಿಲ್ಲ. ಇದು ಅವರಿಗೆ ಬಡವರ ಪರ ಎಷ್ಟುಕಾಳಜಿ ಇದೆ ಎಂದು ತೋರಿಸುತ್ತದೆ ಎಂದು ಟೀಕಿಸಿದರು.

ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಾ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಉದ್ಘಾಟಿಸಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಆನಂದ್‌ ಮಾತನಾಡಿ, ಶಾಸಕ ಕೆ. ಮಹದೇವ್‌ ಮುಂಬರುವ ಚುನಾವಣೆ ಸೋಲಿನ ಭೀತಿಯಿಂದಾಗಿ ಅಧಿಕಾರ ಮತ್ತು ಆಡಳಿತ ದುರುಪಯೋಗ ಮಾಡಿಕೊಳ್ಳುತ್ತಿದ್ದು ತಾಲೂಕಿನ ಜನತೆ ಎಲ್ಲವನ್ನು ಮನಗಂಡಿದ್ದು ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಪಕ್ಷದ ಖಜಾಂಚಿ ಬಿ.ಜೆ. ಬಸವರಾಜ…, ಪುರಸಭಾ ಸದಸ್ಯ ಶ್ಯಾಮ…, ಮುಖಂಡರಾದ ಗಿರೀಶ್‌, ಮಂಜು, ಕುಮಾರ್‌ ಮುರಳಿ, ಅಬ್ದುಲ್‌ ವಾಜಿದ್‌, ಗಿರೀಶ್‌ ಇದ್ದರು.

ಜೆಡಿಎಸ್‌ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಮತದಾರರು ಸಹಕರಿಸಬೇಕು

ಪಿರಿಯಾಪಟ್ಟಣ (ಫೆ.3) : ರಾಜ್ಯದ ಅಭಿವೃದ್ಧಿಗಾಗಿ ಜೆಡಿಎಸ್‌ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಮತದಾರರು ಸಹಕರಿಸಬೇಕು ಎಂದು ಶಾಸಕ ಕೆ. ಮಹದೇವ್‌ ಹೇಳಿದರು.

ತಾಲೂಕಿನ ಚೌತಿ ಮಾಲಂಗಿ ಹಾಗೂ ಮುತ್ತೂರು ಗ್ರಾಪಂ ವ್ಯಾಪ್ತಿಯ ಜೆಡಿಎಸ್‌ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೈತರ ಸಾಲ ಮನ್ನ ಸೇರಿದಂತೆ ಹಲವು ಜನಪರ ಯೋಜನೆ ಜಾರಿಗೊಳಿಸಲಾಗಿತ್ತು. ಇದನ್ನು ಸಹಿಸದ ಕಾಂಗ್ರೆಸ್ಸಿಗರು ಕೋಟ್ಯಾಂತರ ಹಣ ಪಡೆದು ಸರ್ಕಾರ ಬೀಳಿಸಿದರು. ನಾವು ಬೇಡ ಎಂದರು ಕುಮಾರಸ್ವಾಮಿ ಅವರು ಕಾಂಗ್ರೆಸಿಗರ ಜತೆ ಸೇರಿ ಸರ್ಕಾರ ರಚಿಸಿ ಇರಿಸು ಮುರಿಸು ಉಂಟಾಯಿತು ಎಂದರು.

Akshayaaahara: ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ?

ಶಾಸಕರು ಜನರ ಸೇವಕರಾಗಿ ಕೆಲಸ ಮಾಡಬೇಕು. ಆದರೆ ಹಿಂದೆ ತಾಲೂಕಿನಲ್ಲಿ ಅಧಿಕಾರ ಅನುಭವಿಸಿದವರು ಜನರ ಮಧ್ಯೆ ಇರದೆ ವರ್ಷಕ್ಕೊಮ್ಮೆ ಜನಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ನಾನು ಪ್ರತಿನಿತ್ಯ ತಮ್ಮ ಸೇವಕನಾಗಿ ಸುಲಭವಾಗಿ ಸಾರ್ವಜನಿಕರ ಸೇವೆಗೆ ಸಿಗುತ್ತಿದ್ದೇನೆ. ನನ್ನಂತಹ ಶಾಸಕನನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸದಿದ್ದರೆ ನಿಮಗೆ ನೀವೇ ಮೋಸ ಮಾಡಿಕೊಂಡಂತೆ. ವಿರೋಧಿಗಳ ವದಂತಿ ನಂಬದೆ ಅಪಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್‌ ಕಾರ್ಯಕರ್ತರ ಬಾಯಿ ಮುಚ್ಚಿಸುವ ಕೆಲಸವನ್ನು ಜೆಡಿಎಸ್‌ ಕಾರ್ಯಕರ್ತರು ಮಾಡಬೇಕು ಎಂದರು.

ಮೈಮುಲ್‌ ಅಧ್ಯಕ್ಷ ಪಿ.ಎಂ. ಪ್ರಸನ್ನ ಮಾತನಾಡಿ, ರಾಜ್ಯದ ರೈತರ ಪರವಾಗಿ ಹೋರಾಟ ಮಾಡಿ ಪಕ್ಷ ಸಂಘಟನೆಯಲ್ಲಿ ಸದಾ ತೊಡಗಿರುವ ಬಡವರ ದಲಿತರ ಪರವಾಗಿ ಧ್ವನಿ ಎತ್ತುವ ನಾಯಕರಾದ ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲು ಈ ತಾಲೂಕಿನಲ್ಲಿ ಕೆ. ಮಹದೇವ್‌ ಅವರನ್ನು ಗೆಲ್ಲಿಸಲು ನಾವೆಲ್ಲರೂ ಪಣತೊಡಬೇಕು ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಾರ್ಯಕರ್ತರು ಬೈಕ್‌ ಮೆರವಣಿಗೆ ನಡೆಸಿ ಶಾಸಕ ಕೆ. ಮಹದೇವ್‌ ಅವರನ್ನು ಮಂಗಳವಾದ್ಯ ಸಹಿತ ಮಹಿಳೆಯರ ಪೂರ್ಣ ಕುಂಭದೊಂದಿಗೆ ಜೈಕಾರ ಕೂಗಿ ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತಿಸಿದರು. ಮೈಮುಲ್‌ ನಿರ್ದೇಶಕ ಎಚ್‌.ಡಿ. ರಾಜೇಂದ್ರ, ಮುಖಂಡರಾದ ರಾಮಚಂದ್ರ, ಎಸ್‌. ರಾಮು ಮಾತನಾಡಿದರು.

ಪರೋಕ್ಷ ತೆರಿಗೆ ಮೂಲಕ ಜನ ಸಾಮಾನ್ಯರಿಗೆ ವಿಷ ನೀಡಿದೆ: ಎಚ್‌.ಸಿ. ಮಹದೇವಪ್ಪ

Follow Us:
Download App:
  • android
  • ios