Asianet Suvarna News Asianet Suvarna News

'ಕಳೆದು ಹೋದ ಅಧಿಕಾರಿ : ಕುಸಿದ ಬಿಜೆಪಿ ಜಂಗಾ​ಬಲ'

ನಡೆದ ಚುನಾವಣೆಯಲ್ಲಿ ಆಯ್ಕೆಯಾದವರ ಅಧಿಕಾರ ಇದೀಗ ಇಲ್ಲದಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಏನಿದು ..?

local Body Election Reservation cancelled From Karnataka High court snr
Author
Bengaluru, First Published Nov 21, 2020, 4:00 PM IST

ವರದಿ : ಎಂ ಅಫ್ರೋಜ್ ಖಾನ್‌

 ರಾಮ​ನ​ಗರ (ನ.21):  ವರ್ಷ​ದಿಂದ ಅಧಿ​ಕಾರ ಇಲ್ಲದೆ ವನ​ವಾಸ ಅನು​ಭ​ವಿಸಿ ಇತ್ತೀ​ಚೆ​ಗಷ್ಟೇ ಗದ್ದುಗೆ ಅಲಂಕ​ರಿ​ಸಿದ್ದ ನಗರ ಸ್ಥಳೀಯ ಸಂಸ್ಥೆ​ಗಳ ಅಧ್ಯಕ್ಷ - ಉಪಾ​ಧ್ಯ​ಕ್ಷರ ಆಯ್ಕೆ​ಯನ್ನು ಹೈಕೋರ್ಟ್‌ ಅಸಿಂಧುಗೊಳಿ​ಸಿ​ರು​ವುದು ‘ಕೈಗೆ ಬಂದ ತುತ್ತು ಬಾಯಿ​ಗಿಲ್ಲ‘ ಎಂಬ ಗಾದೆ ಮಾತಿ​ನಂತಾ​ಗಿದೆ.

ಜಿಲ್ಲೆಯಲ್ಲಿ ಕನ​ಕ​ಪುರ ನಗ​ರ​ಸಭೆ, ಮಾಗಡಿ ಪುರ​ಸಭೆ ಹಾಗೂ ಬಿಡದಿ ಪುರ​ಸಭೆ ಅಧ್ಯಕ್ಷ - ಉಪಾ​ಧ್ಯ​ಕ್ಷ ಸ್ಥಾನ​ಗ​ಳಿ​ಗೆ ಆಯ್ಕೆ ಪ್ರಕ್ರಿಯೆ ನಡೆ​ದಿತ್ತು. ಕುರ್ಚಿ​ಯಲ್ಲಿ ಕುಳಿತ ಆಡ​ಳಿತ ನಡೆ​ಸು​ವು​ದಕ್ಕೂ ಮುನ್ನವೇ ಎಲ್ಲಾ ಅಧ್ಯಕ್ಷ - ಉಪಾ​ಧ್ಯಕ್ಷರು ಅಧಿಕಾರ ಕಳೆ​ದು​ಕೊಂಡಿ​ದ್ದಾರೆ.

21 ದಿನ​ಗ​ಳಲ್ಲಿ ಅಧಿ​ಕಾರ ಹೋಯ್ತು:

ಕನ​ಕ​ಪುರ ನಗ​ರ​ಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಮಹಮ್ಮದ್‌ ಮಕ್ಬುಲ್ ಪಾಷಾ ಹಾಗೂ ಉಪಾಧ್ಯಕ್ಷರಾಗಿ ಗುಂಡಣ್ಣ ಅವಿ​ರೋ​ಧ​ವಾಗಿ ಆಯ್ಕೆಯಾಗಿದ್ದರು. ಚುನಾ​ವಣೆ (ಅ.29)ನ​ಡೆದ 21 ದಿನ​ಗ​ಳ​ಲ್ಲಿಯೇ ಅಧಿ​ಕಾರ ಕಳೆ​ದು​ಕೊಳ್ಳುವ ಸ್ಥಿತಿ ಬಂದಿ​ದೆ. 2019ರ ನ. 12ರಂದು ಕನ​ಕ​ಪುರ ನಗ​ರ​ಸಭೆ ಚುನಾ​ವಣೆ ನಡೆದು ನ. 14ರಂದು ಫಲಿತಾಂಶ ಪ್ರಕಟಗೊಂಡಿತ್ತು. ಕಾಂಗ್ರೆಸ್‌ 26, ಜೆಡಿಎಸ್‌ 4, ಬಿಜೆಪಿ 1 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಮೀಸಲು ಪಟ್ಟಿಪ್ರಕಟವಾಗದ ಕಾರಣ ಒಂದು ವರ್ಷ​ಗಳ ಕಾಲ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನೆನೆಗುದಿಗೆ ಬಿದ್ದಿತ್ತು.

ಕುಸಿದ ಬಿಜೆಪಿ ಜಂಗಾ​ಬಲ?

ಮಾಗಡಿ ಪುರಸಭೆ ಅಧ್ಯ​ಕ್ಷ​ರಾಗಿ ಬಿಜೆಪಿ ಸದ​ಸ್ಯೆ ಭಾಗ್ಯಮ್ಮ ಹಾಗೂ ಉಪಾ​ಧ್ಯ​ಕ್ಷ​ರಾ​ಗಿ ಜೆಡಿಎಸ್‌ ​ಸ​ದ​ಸ್ಯ ರೆಹಮತ್‌ ನ. 9ರಂದು ನಡೆದ ಚುನಾ​ವ​ಣೆ​ಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದದೆ. ಇವ​ರು ಕೇವಲ 11 ದಿನ​ಗ​ಳಲ್ಲಿಯೇ ಅಧಿ​ಕಾ​ರ​ದಿಂದ ಕೆಳಗಿಳಿ​ಯು​ವಂತಾ​ಗಿದೆ.

ರಿ​ಷ್ಠ​ರಿ​ಲ್ಲದೆ ಅವ​ಧಿ ಪೂರ್ಣದ ಆತಂಕ​:

ಇನ್ನು ಬಿಡದಿ ಪುರ​ಸಭೆ ಅಧ್ಯಕ್ಷರಾಗಿ ಜೆಡಿ​ಎಸ್‌ ಅಭ್ಯರ್ಥಿ ಸರ​ಸ್ವತಿ ರಮೇಶ್‌ ಹಾಗೂ ಉಪಾ​ಧ್ಯ​ಕ್ಷ​ರಾಗಿ ಜೆಡಿ​ಎಸ್‌ ಬೆಂಬ​ಲಿತ ಕಾಂಗ್ರೆಸ್‌ ಸದಸ್ಯ ಸಿ.ಲೋ​ಕೇಶ್‌ ನ.5ರಂದು ನಡೆದ ಚುನಾ​ವ​ಣೆ​ಯಲ್ಲಿ ಆಯ್ಕೆ​ಯಾ​ಗಿ ಕೇವಲ 14 ದಿನ​ಗ​ಳಲ್ಲಿ ಗದ್ದುಗೆ ಕಳೆ​ದು​ಕೊ​ಳ್ಳುವ ಸ್ಥಿತಿ ಬಂದೊ​ದ​ಗಿ​ದೆ. ಬಾಕಿ ಉಳಿ​ದಿ​ರುವ ಅವಧಿ ವರಿ​ಷ್ಠ​ರಿ​ಲ್ಲದೆ ಪೂರ್ಣ​ಗೊ​ಳ್ಳುವ ಆತಂಕ ಸದ​ಸ್ಯ​ರನ್ನು ಕಾಡು​ತ್ತಿ​ದೆ.

ತೀವ್ರ ಪೈಪೋಟಿ ನಡೆಸಿ ಗದ್ದುಗೆ ಹಿಡಿ​ಯು​ವಲ್ಲಿ ಯಶ​ಸ್ವಿ​ಯಾದ ಅಧ್ಯಕ್ಷ - ಉಪಾ​ಧ್ಯ​ಕ್ಷ​ರಿಗೆ ಮುಂದೇನು ಎಂಬ ಆತಂಕ ಕಾಡು​ತ್ತಿದೆ. ಪ್ರತಿ ಪಕ್ಷ​ಗ​ಳು ಮತ್ತೊಮ್ಮೆ ಆಯ್ಕೆ ಪ್ರಕ್ರಿಯೆ ನಡೆ​ದಲ್ಲಿ ಕಾರ್ಯ​ತಂತ್ರ ರೂಪಿಸಿ ರಾಜ​ಕೀಯ ದಾಳ ಉರು​ಳಿ​ಸುವ ಆಲೋ​ಚ​ನೆ​ಯ​ಲ್ಲಿ​ವೆ.
 
ಕೆಲವರ ಚಿತಾವಣೆಯಿಂದ ಅಲ್ಪಸಂಖ್ಯಾತರು ಹಾಗೂ ಕೆಳವರ್ಗದ ಜನರಿಗೆ ಅಧಿಕಾರ ತಪ್ಪಿಸುವ ಉದ್ದೇಶದಿಂದ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ನ್ಯಾಯಾಲಯಕ್ಕೆ ಸೂಕ್ತವಾದ ದಾಖಲೆಗಳನ್ನು ಒದಗಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕು.

- ಮಹ​ಮದ್‌ ಮಕ್ಬುಲ್‌, ನಗ​ರ​ಸಭಾದ್ಯಕ್ಷ ಕನ​ಕ​ಪುರ.

Follow Us:
Download App:
  • android
  • ios