ಅಭಿನವ ಕುಮಾರವ್ಯಾಸ ಎಂಬ ಬಿರುದಾಂಕಿತರಾಗಿದ್ದ ಸಾಹಿತಿ ವೆಂ.ಭ.ವಂದೂರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೊನ್ನಾವರ: ಅಭಿನವ ಕುಮಾರವ್ಯಾಸ ಎಂಬ ಬಿರುದಾಂಕಿತರಾಗಿದ್ದ ಸಾಹಿತಿ ವೆಂ.ಭ.ವಂದೂರ (ವೆಂಕಟ್ರಮಣ ಭಟ್)(74) ಭಾನುವಾರ ಮುಂಜಾನೆ ಹೊನ್ನಾವರ ತಾಲೂಕಿನ ವಂದೂರಿನಲ್ಲಿರುವ ತಮ್ಮ ಸ್ವಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Add Asianetnews Kannada as a Preferred Source

ಅವಿವಾಹಿತರಾಗಿದ್ದ ಅವರು, ಏಕಾಂಗಿಯಾಗಿ ವಾಸಿಸುತ್ತಿದ್ದರು. ಸಮಾಜದಲ್ಲಿನ ವಿದ್ಯಮಾನಗಳ ಬಗ್ಗೆ ಬೇಸತ್ತಿದ್ದ ಅವರು, ಒಂಟಿತನದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.
ಈ ಹಿಂದೆ ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆ ವೇಳೆ ಅಕ್ಕಪಕ್ಕದ ನಿವಾಸಿಗಳು ಇವರನ್ನು ರಕ್ಷಿಸಿದ್ದರು ಎಂದು ತಿಳಿದುಬಂದಿದೆ. ವಂದೂರ ಅವರು ತಮ್ಮ ದೇಹವನ್ನು ಸಹ ಮಣಿಪಾಲ ಆಸ್ಪತ್ರೆಗೆ ದಾನ ಮಾಡಿದ್ದರು. ಆದರೆ, ಶವಪರೀಕ್ಷೆ ನಡೆಸಿದ್ದರಿಂದ ದೇಹವನ್ನು ದಾನ ಮಾಡಲಾಗಿಲ್ಲ ಎಂದು ತಿಳಿದುಬಂದಿದೆ.
