Asianet Suvarna News Asianet Suvarna News

'ರಾಜ್ಯ​ದಲ್ಲಿ ಶೀಘ್ರವೇ 300 ಎಲೆಕ್ಟ್ರಿಕ್ ಬಸ್‌ ರಸ್ತೆಗೆ'

ಮೊದಲ ಹಂತ​ದಲ್ಲಿ ಬೆಂಗ​ಳೂ​ರಿ​ನಲ್ಲಿ 50 ಬಸ್‌​ಗಳು ಹಾಗೂ ಹುಬ್ಬಳ್ಳಿ ವಿಭಾ​ಗಕ್ಕೆ 10 ಬಸ್‌​| ಮುಂಬ​ರುವ ದಿನ​ಗ​ಳಲ್ಲಿ ರಾಜ್ಯಾ​ದ್ಯಂತ ವಿಸ್ತ​ರಿಣೆ| ಎಲೆಕ್ಟ್ರಿಕ್ ಬಸ್‌ ಸೇವೆ ಪ್ರಾರಂಭಿ​ಸು​ವು​ದ​ರಿಂದ ಪರಿ​ಸರ ರಕ್ಷ​ಣೆ, ಮಾಲಿನ್ಯ ಕಡಿ​ಮೆ​| ಮುಖ್ಯ​ವಾಗಿ ನಷ್ಟ​ದ​ಲ್ಲಿ​ರುವ ಸಾರಿಗೆ ಸಂಸ್ಥೆಗೆ ಡೀಸೆಲ್‌ ಹೊರೆ​ ಕಡಿ​ಮೆ​| 

Laxman Savadi Says 300 Electric Buses Soon in Karnataka grg
Author
Bengaluru, First Published Jan 25, 2021, 1:23 PM IST

ಗದಗ(ಜ.25): ರಾಜ್ಯ​ದಲ್ಲಿ 300 ಎಲೆಕ್ಟ್ರಿಕ್ ಬಸ್‌​ಗಳನ್ನು ರಸ್ತೆ​ಗಿಳಿಸಲು ನಿರ್ಧ​ರಿ​ಸ​ಲಾ​ಗಿದ್ದು, ಶೀಘ್ರವೇ ಕಾರ್ಯಾ​ರಂಭ ಮಾಡ​ಲಿವೆ ಎಂದು ಸಾರಿಗೆ ಸಚಿವ, ಉಪ​ಮು​ಖ್ಯ​ಮಂತ್ರಿ ಲಕ್ಷ್ಮಣ ಸವದಿ ಹೇಳಿ​ದ್ದಾರೆ. 

ಭಾನು​ವಾರ ರಾತ್ರಿ ಇಲ್ಲಿ ಬಸ್‌ ನಿಲ್ದಾ​ಣದ ಲೋಕಾ​ರ್ಪಣೆ ಮಾಡಿ ಮಾತ​ನಾ​ಡಿ​ದ ಅವರು, ಮೊದಲ ಹಂತ​ದಲ್ಲಿ ಬೆಂಗ​ಳೂ​ರಿ​ನಲ್ಲಿ 50 ಬಸ್‌​ಗಳು ಹಾಗೂ ಹುಬ್ಬಳ್ಳಿ ವಿಭಾ​ಗಕ್ಕೆ 10 ಬಸ್‌​ಗ​ಳನ್ನು ನೀಡ​ಲಾ​ಗು​ತ್ತಿದ್ದು, ಮುಂಬ​ರುವ ದಿನ​ಗ​ಳಲ್ಲಿ ರಾಜ್ಯಾ​ದ್ಯಂತ ವಿಸ್ತ​ರಿ​ಸ​ಲಾ​ಗು​ವುದು, ಎಲೆಕ್ಟ್ರಿಕ್ ಬಸ್‌ ಸೇವೆ ಪ್ರಾರಂಭಿ​ಸು​ವು​ದ​ರಿಂದ ಪರಿ​ಸರ ರಕ್ಷ​ಣೆ, ಮಾಲಿನ್ಯ ಕಡಿ​ಮೆ​ಯಾ​ಗು​ತ್ತದೆ. ಮುಖ್ಯ​ವಾಗಿ ನಷ್ಟ​ದ​ಲ್ಲಿ​ರುವ ಸಾರಿಗೆ ಸಂಸ್ಥೆಗೆ ಡೀಸೆಲ್‌ ಹೊರೆ​ ಕಡಿ​ಮೆ​ಯಾ​ಗು​ತ್ತದೆ ಎಂದು ಹೇಳಿದರು.

ಬಿಎಂಟಿಸಿಗೆ ಶೀಘ್ರ 90 ಎಲೆಕ್ಟ್ರಿಕ್‌ ಬಸ್ ಸೇರ್ಪಡೆ

ಸಾರಿಗೆ ಸಂಸ್ಥೆಯ ಚಾಲ​ಕ​ರಿಗೆ ಉತ್ತಮ ತರ​ಬೇತಿ ನೀಡುವ ನಿಟ್ಟಿ​ನಲ್ಲಿ ರಾಜ್ಯ​ದಲ್ಲಿ ಶೀಘ್ರವೇ 3 ವಿಶೇಷ ತರ​ಬೇತಿ ಕೇಂದ್ರ​ಗ​ಳನ್ನು ಪ್ರಾರಂಭಿ​ಸ​ಲಾ​ಗು​ತ್ತಿದೆ. ಕೊರೋ​ನಾ​ದಿಂದಾಗಿ ಸಾರಿಗೆ ಸಂಸ್ಥೆ ಸಾಕಷ್ಟುನಷ್ಟ ಅನು​ಭ​ವಿ​ಸಿದ್ದು, ಮೊದಲೇ 2 ಸಾವಿರ ಕೋಟಿಯಷ್ಟು ಹಾನಿ​ಯ​ಲ್ಲಿದ್ದ ಸಂಸ್ಥೆ ಮತ್ತಷ್ಟು ತೊಂದ​ರೆಗೆ ಸಿಲು​ಕಿದೆ. ನಾನು ಈ ಇಲಾ​ಖೆಯ ಜವಾ​ಬ್ದಾರಿ ಹೊತ್ತುಕೊಂಡ ನಂತರ, ಸೋರಿಕೆ, ಪಾರದರ್ಶಕತೆ ತರುವ ಮೂಲಕ ಇಲಾ​ಖೆಗೆ ಹೊಸ ಕಾಯ​ಕಲ್ಪ ನೀಡಲು ಪ್ರಯ​ತ್ನಿ​ಸಿ​ದ್ದೇನೆ. ಆದರೆ ಕೊರೋನಾ ಸಂಕ​ಷ್ಟದ ಮಧ್ಯೆಯೇ ನೌಕ​ರರು ಯಾರದೋ ಮಾತು ಕೇಳಿ ಏಕಾ​ಏಕಿ ಪ್ರತಿ​ಭ​ಟ​ನೆಗೆ ಮುಂದಾ​ಗಿದ್ದು ಬಹಳ ನೋವಿನ ಸಂಗ​ತಿ​. ಇದ​ಕ್ಕಿಂತ ನನಗೆ ಬೇಸರ ತಂದ ಘಟ​ನೆ ಎಂದರೆ ನಮ್ಮ ಸಿಬ್ಬಂದಿ​ಯೇ ನಮ್ಮ ಬಸ್‌​ಗ​ಳಿಗೆ ಕಲ್ಲು ಹೊಡೆ​ದಿದ್ದು. ಅನ್ನ ಹಾಕುವ ಬಸ್‌​ಗ​ಳಿಗೆ ನೌಕ​ರರೇ ಕಲ್ಲು ಹೊಡೆ​ದರೆ ಹೇಗೆ? ಎಂದು ಬೇಸರ ವ್ಯಕ್ತಪಡಿ​ಸಿದ ಸವದಿ, ಪರೋ​ಕ್ಷ​ವಾಗಿ ಹೋರಾ​ಟಕ್ಕೆ ಕುಮ್ಮುಕ್ಕು ನೀಡಿ​ದ​ವ​ರಿಗೆ ತಮ್ಮ ಮಾತಿನ ಮೂಲಕ ತಿವಿದರು

ಲಾಕ್‌​ಡೌನ್‌ ವೇಳೆ​ ಬಸ್‌​ಗಳು ರಸ್ತೆಗೆ ಇಳಿ​ಯದೇ ಇದ್ದಾಗ ನಮ್ಮ ಸಿಬ್ಬಂದಿ​ಗೆ ವೇತನ ಕೊಡು​ವುದೂ ಕಷ್ಟ​ವಾ​ಗಿತ್ತು. ಈ ಸಂದ​ರ್ಭ​ದಲ್ಲಿ ನಮ್ಮ ಕುಟುಂಬದ ಚಾಲಕ, ನಿರ್ವಾ​ಹ​ಕರು ಸೇರಿ​ದಂತೆ ಎಲ್ಲ ಸಿಬ್ಬಂದಿ ವೇತ​ನ​ಕ್ಕಾಗಿ ಮುಖ್ಯ​ಮಂತ್ರಿ ಯಡಿ​ಯೂ​ರಪ್ಪ ವಿಶೇಷ ಅನು​ದಾನ ನೀಡಿದ್ದನ್ನು ಇಲಾಖೆ ಸಿಬ್ಬಂದಿ ನೆನ​ಪಿ​ನ​ಲ್ಲಿ​ಡ​ಬೇಕು. ಸಾರಿಗೆ ಸಂಸ್ಥೆ​ಯಲ್ಲಿ ಹಿರಿಯ ಅಧಿ​ಕಾ​ರಿ​ಗಳು ಚಾಲ​ಕರು ಮತ್ತು ನಿರ್ವಾ​ಹ​ಕ​ರಿಗೆ ವಿಪ​ರೀತ ಕಿರು​ಕುಳ ನೀಡು​ವುದು ನನ್ನ ಗಮ​ನಕ್ಕೆ ಬಂದಿದೆ. ಇದನ್ನು ತಕ್ಷ​ಣ​ದಿಂದಲೇ ನಿಲ್ಲಿಸುವಂತೆ ಅಧಿ​ಕಾ​ರಿ​ಗ​ಳಿಗೆ ಎಚ್ಚ​ರಿಕೆ ನೀಡುತ್ತೇನೆ. ಚಾಲ​ಕರ ಕೈಯಲ್ಲಿ 50 ಜನರ ಜೀವ​ವಿ​ರು​ತ್ತದೆ. ಅವರು ಸಮಚಿತ್ತ​ದಿಂದ ಇದ್ದರೆ ನಮ್ಮ ಸಂಸ್ಥೆಗೆ ಒಳ್ಳೆಯ ಹೆಸರು ಬರು​ತ್ತದೆ. ಈ ರೀತಿ ಕಿರು​ಕುಳ ನೀಡುವ ದೂರು​ಗಳು ನನ್ನ ಬಳಿ ಬಂದರೆ, ನಿರ್ದಾ​ಕ್ಷಿ​ಣ್ಯ​ವಾಗಿ ಕ್ರಮ ತೆಗೆ​ದು​ಕೊ​ಳ್ಳು​ತ್ತೇನೆ. ಹಿರಿಯ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸಣ್ಣ ಪುಟ್ಟಬೇಡಿಕೆಗೆ ಸ್ಪಂದಿಸಿ, ಸಾರಿಗೆ ನಿಗಮ ನಿಮ್ಮ ಬದುಕಿಗೆ ತೊಂದರೆಯಾಗದಂತೆ ನಾನು ಇಲಾಖೆ ಸಚಿ​ವ​ನಾಗಿ ಕೆಲಸ ಮಾಡು​ತ್ತೇನೆ. ಧೈರ್ಯದಿಂದ ಇರಿ ಎಂದು ಸಾರಿಗೆ ನೌಕ​ರ​ರಿಗೆ ಅಭ​ಯ ನೀಡಿ​ದರು.
 

Follow Us:
Download App:
  • android
  • ios