ರಾಮಮಂದಿರಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭಾರೀ ದೇಣಿಗೆ
ದೇಶದಲ್ಲಿ ಈಗಾಗಲೇ ರಾಮ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹ ಪ್ರಕ್ರಿಯೆ ಆರಂಭವಾಗಿದೆ. ಹಣ ಸಂಗ್ರಹಕ್ಕೆ ವಿವಿಧ ದಾನಿಗಳು ಕೋಟಿ ಕೋಟಿ ಮೌಲ್ಯದ ಹಣ ನೀಡಿದ್ದು ಇದೀಗ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹ ಭಾರೀ ಮೊತ್ತದ ಹಣ ನೀಡಿದ್ದಾರೆ.
ಬೆಳಗಾವಿ (ಜ.27): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೇ ಹೆಬ್ಬಾಳ್ಕರ್ ಭಾರೀ ದೇಣಿಗೆ ನೀಡಿದ್ದಾರೆ.
ಈಗಾಗಲೇ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಪ್ರಕ್ರಿಯೆ ಆರಮಭವಾಗಿದ್ದು, ಅದಕ್ಕೆ 2 ಲಕ್ಷ ನಿಧಿ ಸಮರ್ಪಿಸಿದರು.
ರಾಮಮಂದಿರ ನಿರ್ಮಾಣಕ್ಕೆ ಹುಬ್ಬಳ್ಳಿ ಉದ್ಯಮಿಯಿಂದ ಕೋಟಿ ದೇಣಿಗೆ ...
ನಿಧಿ ಸಂಗ್ರಹಕ್ಕೆ ಬಂದ ವಿಶ್ವಹಿಂದೂ ಪರಿಷತ್ ಪ್ರಮುಖರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಅವರ ಸಹೋದರ ಚನ್ನರಾಜ ಹಟ್ಟಿಹೊಳಿ 2 ಲಕ್ಷ ರು. ಚೆಕ್ ಹಸ್ತಾಂತರಿಸಿದರು.
ಈಗಾಗಲೇ ದೇಶದಾದ್ಯಂತ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದ್ದು, ನೂರಾರು ಕೋಟಿ ಸಂಗ್ರಹವಾಗಿದೆ. ಇದೀಗ ಕೈ ಶಾಸಕಿ ಲಕ್ಷ್ಮೀ ತಮ್ಮ ದೇಣಿಗೆ ಮೊತ್ತ ನೀಡಿದ್ದಾರೆ.