ಸಾರಿಗೆ ಬಸ್ ಹಾಗೂ ಗೂಡ್ಸ್ ವಾಹನ,ಟಾಟಾ ಮ್ಯಾಜಿಕ್ ವಾಹನದ ನಡುವೆ ಸರಣಿ ಅಪಘಾತವಾಗಿದೆ. ಬೆಂಗಳೂರು - ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.
ಹಾಸನ [ಜ.30]: ಸಾರಿಗೆ ಬಸ್ ಹಾಗೂ ಮೂರು ವಾಹನಗಳ ನಡುವೆ ಸರಣಿ ಅಪಘಾತ ನಡೆದಿದ್ದು, ಮೂವರು ಸ್ಥಳದಕ್ಕೇ ಸಾವಿಗೀಡಾಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಸೂಳೆಕೆರೆ ಬಳಿ ಅಪಘಾತವಾಗಿದೆ. 11ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರು - ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಘಟನೆ ನಡೆದಿದೆ.
ಮಂಗಳೂರು - ಬಳ್ಳಾರಿ ಮತ್ತೊಂದು ಬಸ್ ಸೇವೆ : ಶಿವಮೊಗ್ಗ ಮೂಲಕ ಸಂಚಾರ.
ಕೆಎಸ್ ಆರ್ ಟಿಸಿ ಬಸ್, ಟಾಟಾ ಮ್ಯಾಜಿಕ್ ಹಾಗೂ ಗೂಡ್ಸ್ ಗಾಡಿ ನಡುವೆ ಅಪಘಾತವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರಸೀಕೆರೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
