Asianet Suvarna News Asianet Suvarna News

ಕನ​ಕ​ಪುರ: ತಂದೆ ಸಮಾ​ಧಿಗೆ ಪೂಜೆ, ಎಡೆ ಇಟ್ಟ​ ಡಿ.ಕೆ. ಶಿವಕುಮಾರ್‌

ತಂದೆ ಡಿ.ಕೆ.ಕೆಂಪೇಗೌಡರು ಮತ್ತು ಪೂರ್ವಜರ ಸಮಾ​ಧಿಗಳಿಗೆ ಗಣೇ​ಶನ ಹಬ್ಬದ ದಿನ​ದಂದು ಪೂಜೆ ಸಲ್ಲಿಸಿ ಎಡೆ ಇಟ್ಟ ಡಿ.ಕೆ.​ಶಿ​ವ​ಕು​ಮಾರ್‌ ಅವ​ರು ಕುಟುಂಬ| ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿರುವ ದೊಡ್ಡಾಲಹಳ್ಳಿ ಗ್ರಾಮ| 

KPCC President D K Shivakumar Did Pooja to Father Grave in Kanakapura
Author
Bengaluru, First Published Aug 24, 2020, 8:18 AM IST

ಕನ​ಕ​ಪುರ(ಆ.24): ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದಲ್ಲಿರುವ ತಂದೆ ಡಿ.ಕೆ.ಕೆಂಪೇಗೌಡರು ಮತ್ತು ಪೂರ್ವಜರ ಸಮಾ​ಧಿಗಳಿಗೆ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವ​ರು ಕುಟುಂಬ ಸಮೇ​ತ​ರಾಗಿ ಶನಿ​ವಾರ ಗಣೇ​ಶನ ಹಬ್ಬದ ದಿನ​ದಂದು ಪೂಜೆ ಸಲ್ಲಿಸಿ ಎಡೆ ಇಟ್ಟ​ರು.

ಈ ವೇಳೆ ಮಾತ​ನಾ​ಡಿದ ಡಿ.ಕೆ.​ಶಿ​ವ​ಕು​ಮಾರ್‌, ಪ್ರತಿವರ್ಷ ಗಣೇಶನ ಹಬ್ಬದ ದಿನ ನಮ್ಮ ತಂದೆ ಮತ್ತು ಪೂರ್ವಜರಿಗೆ ಪೂಜೆ ಸಲ್ಲಿಸುತ್ತಾ ಬಂದಿ​ದ್ದೇವೆ. ಇದು ಹಿಂದಿನಿಂದಲೂ ನಡೆದು ಬಂದಿರುವ ಪದ್ಧತಿ. ಹಾಗಾಗಿ ಇಂದು ಕುಟುಂಬದವರ ಜೊತೆಗೆ ಬಂದು ಪೂಜೆ ಸಲ್ಲಿಸಿದ್ದೇನೆ. ಹಿರಿ​ಯ​ರಿಗೆ ಎಡೆ ಇಟ್ಟು ಆತ್ಮಕ್ಕೆ ಶಾಂತಿ ಕೋರಿ ಅವರ ಆಶೀ​ರ್ವಾದ ಬೇಡಿದ್ದೇವೆ ಎಂದ​ರು.

ಡಿಕೆ ಸಹೋದರರ ಕ್ಷೇತ್ರದಲ್ಲಿ ಚುನಾವಣೆ ಸಿದ್ಧತೆ : ಕೈ ಗೆಲುವಿಗೆ ರಣತಂತ್ರ

ತಾಯಿ ಗೌರಮ್ಮ, ಪತ್ನಿ ಉಷಾ ಶಿವಕುಮಾರ್‌ ಈ ವೇಳೆ ಇದ್ದ​ರು.
 

Follow Us:
Download App:
  • android
  • ios