Asianet Suvarna News Asianet Suvarna News

ಒಂದೇ ವಾರದಲ್ಲಿ ಕೊರೋನಾ ಸೋಂಕು ಗೆದ್ದು ಬಂದ ಕೊಟ್ಟೂರು ಠಾಣೆಯ ಮುಖ್ಯಪೇದೆ..!

ಸೋಂಕು ಕಾಣಿ​ಸಿ​ಕೊಂಡು 7 ದಿನ​ಗ​ಳಲ್ಲೇ ಗುಣ​ಮು​ಖ|  ಪಿ-3245 ಕೊಟ್ಟೂರು ಪೊಲೀಸ್‌ ಠಾಣೆಯ ಮುಖ್ಯಪೇದೆ| ಮುಖ್ಯಪೇದೆ ಕೋವಿಡ್‌-19 ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅವರ ಕುಟುಂಬದ ನಾಲ್ವರು ಸದಸ್ಯರನ್ನು ಹೊಸಪೇಟೆ ಕ್ವಾರೆಂಟೈನ್‌ನಲ್ಲಿರಿಸಿ ಗಂಟಲು ದ್ರವ ಪರೀಕ್ಷೆ ನಡೆ​ಸಿದ್ದು, ನೆಗೆಟಿವ್‌ ವರದಿ ಬಂದಿ​ದೆ|

Kotturu Police Station Head Constable Discharge From Covid Hospital in Ballari
Author
Bengaluru, First Published Jun 10, 2020, 8:31 AM IST

ಜಿ..ಸೋಮಶೇಖರ

ಕೊಟ್ಟೂರು(ಜೂ.10):  ಕೊರೋನಾ ರೋಗ ಅಂಟಿಕೊಂಡ ಒಂದು ವಾರದ ಅವಧಿಯಲ್ಲೇ ಸಂಪೂರ್ಣ ಗುಣಮುಖರಾಗಿ ಕೋವಿಡ್‌-19 ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ಮೂಲಕ ಹೀರೊ ಆಗಿದ್ದಾರೆ ಪಿ-3245 ಕೊಟ್ಟೂರು ಪೊಲೀಸ್‌ ಠಾಣೆಯ ಮುಖ್ಯಪೇದೆ.

ಕೊರೋನಾ ವಾರಿಯ​ರ್‌ ಕೂಡಾ ಆಗಿದ್ದ ಈ ಮುಖ್ಯಪೇದೆಗೆ ಸೋಂಕು ಕಾಣಿಸಿಕೊಂಡ ಕಾರಣಕ್ಕಾಗಿ ಇಡೀ ಪೊಲೀಸ್‌ ಠಾಣೆಯ ಸಬ್‌ ಇನಸ್ಪೆಕ್ಟರ್‌ ಸೇರಿದಂತೆ 42 ಪೊಲೀಸರನ್ನು ಕ್ವಾರಂಟೈನ್‌ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅವರೆಲ್ಲರ ವ​ರದಿ ನೆಗೆಟಿವ್‌ ಆಗಿ ಫಲಿತಾಂಶ ಹೊರಬಿದ್ದಿದೆ. ಅಲ್ಲದೆ ಮುಖ್ಯ ಪೇದೆಯ ತಂದೆ-ತಾಯಿ ಸೇರಿದಂತೆ ಅವರ ಪ್ರಥಮ ಹಂತದ ಸಂಪರ್ಕಿರೆಂದು ಗುರುತಿಸಿದ್ದ ಜಗಳೂರಿನ 29 ಜನರ ಟೆಸ್ಟ್‌ ಕೂಡಾ ನೆಗೆಟಿವ್‌ ಬಂದಿ​ದೆ.

ಬಳ್ಳಾರಿ: ಕೊರೋನಾದಿಂದ ಗುಣಮುಖ, ಒಂದೇ ದಿನ 8 ಜನ ಡಿಸ್ಚಾರ್ಜ್‌

ಮುಖ್ಯಪೇದೆ ಕೋವಿಡ್‌-19 ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅವರ ಕುಟುಂಬದ ನಾಲ್ವರು ಸದಸ್ಯರನ್ನು ಹೊಸಪೇಟೆ ಕ್ವಾರೆಂಟೈನ್‌ನಲ್ಲಿರಿಸಿ ಗಂಟಲು ದ್ರವ ಪರೀಕ್ಷೆ ನಡೆ​ಸಿದ್ದು, ನೆಗೆಟಿವ್‌ ವರದಿ ಬಂದಿ​ದೆ. ಇಷ್ಟು ಶೀಘ್ರದಲ್ಲಿ ಸಂಪೂರ್ಣ ಗುಣಮುಖನಾಗಲು ಆಸ್ಪತ್ರೆ ಅಧೀಕ್ಷಕ ಡಾ. ಬಸರೆಡ್ಡಿ ಮತ್ತವರ ವೈದ್ಯ ತಂಡ ಕಾರಣ. ಆತ್ಮ ಸ್ಥೈರ್ಯವನ್ನು ಕಳೆದುಕೊಳ್ಳದೆ ಗುಣಮುಖರಾಗುತ್ತೇವೆ ಎಂದು ವಿಶ್ವಾಸ ಮೂಡಿಸಿಕೊಂಡರೆ ರೋಗ ತಂತಾನೆ ನಿವಾರಣೆಯಾಗುತ್ತದೆ. ಯಾವುದೇ ಕಾರಣಕ್ಕೂ ​ಧೈರ್ಯ ಗುಂದಬಾರದು ಎಂಬ ತಮ್ಮ ಅನುಭವವನ್ನು ಮುಖ್ಯಪೇದೆ ಕನ್ನಡಪ್ರಭದೊಂದಿಗೆ ಹಂಚಿಕೊಂಡರು.

ರೋಗ ಅಂಟಿಕೊಂಡ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು, ಸಹುದ್ಯೋಗಿಗಳು, ಇತರರು ನನ್ನಲ್ಲಿ ವಿಶ್ವಾಸವನ್ನು ತುಂಬಿ, ಪ್ರತಿ ಹಂತದಲ್ಲೂ ಪ್ರೋತ್ಸಾಹಿಸಿದರು. ಇವರೆಲ್ಲರ ಸಹಕಾರ, ಶುಭ ಹಾರೈಕೆಯಿಂದ ಸಂಪೂರ್ಣ ಗುಣ ಹೊಂದಿರುವೆ ಎಂದರು.

ಸೋಂಕಿ​ನಿಂದ ಗುಣಮುಖನಾಗಿ ಮನೆಗೆ ವಾಪಸ್‌ ಬಂದಿರುವೆ. ನನಗೆ ಬೆಂಬಲವಾಗಿ ನಿಂತು ಧೈರ್ಯ ತುಂಬಿದ ಇಲಾಖಾ ಮೇಲಧಿಕಾರಿಗಳು, ಪೊಲೀಸ್‌ ಸಹೋದ್ಯೋಗಿಗಳು, ಬಂಧು-ಮಿತ್ರರು ಕೊಟ್ಟೂರು ಜನತೆಗೆ ಧನ್ಯವಾದ ಎಂದು ಕೊಟ್ಟೂರು ಪೊಲೀಸ್‌ ಠಾಣೆಯ ಮುಖ್ಯ ಪೇದೆ ಹೇಳಿದ್ದಾರೆ.
 

Follow Us:
Download App:
  • android
  • ios