Asianet Suvarna News Asianet Suvarna News

ಪ್ರಸಾದ ಸೇವಿಸುವ ದೇವರ ಮೊಸಳೆ ದೇಗುಲದಲ್ಲೇ ಪ್ರತ್ಯಕ್ಷ : ಅಚ್ಚರಿಗೆ ಕಾರಣವಾದ ನಡೆ..!

ನಿತ್ಯ ಕೆರೆಯಲ್ಲಿಯೇ ಬಂದು ದೇವರ ಪ್ರಸಾದ ಸ್ವೀಕಾರ ಮಾಡುತ್ತಿದ್ದ ಬಬಿಯಾ ಇದೀಗ ದೇವಾಲಯಕ್ಕೆ ಬಂದು ಅಚ್ಚರಿ ಮೂಡಿಸಿದೆ. 

Kerala God Crocodile Babiya Enters To Temple snr
Author
Bengaluru, First Published Oct 21, 2020, 3:31 PM IST

ಮಂಗಳೂರು (ಅ.21): ದೇವಾಲಯದಲ್ಲಿ ಮೊಸಳೆಯೊಂದು ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. 
 
ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರ ದೇವಸ್ಥಾನದಲ್ಲಿ ಮೊಸಳೆ ಕಾಣಿಸಿಕೊಂಡಿದೆ. 

ಈ ದೇಗುಲದ ಕೆರೆಯಲ್ಲಿನ  ದೇವರ ಮೊಸಳೆ ಎಂದೇ ಕರೆಸಿಕೊಳ್ಳುವ  'ಬಬಿಯಾ' ದೇವಾಲಯಕ್ಕೆ ಬಂದಿದೆ. ಮಂಗಳವಾರ ರಾತ್ರಿ ಗರ್ಭಗುಡಿ ಬಳಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. 

Kerala God Crocodile Babiya Enters To Temple snr

ಹಲವಾರು ವರ್ಷಗಳಿಂದ ದೇವಸ್ಥಾನದ ಕೆರೆಯಲ್ಲಿ ಇರುವ 'ಬಬಿಯಾ'ಗೆ ಪ್ರತಿನಿತ್ಯದ ಪೂಜೆಯ ಬಳಿಕ ನೈವೇದ್ಯ ಅರ್ಪಣೆ ಮಾಡಲಾಗುತ್ತದೆ. 

ಕರೆದರೆ ಸಾಕು ಪ್ರಸಾದ ತಿಂದು ಹೋಗೋ ಮೊಸಳೆ! ...

ಹೀಗೆ ನೈವೇದ್ಯ ಅರ್ಪಿಸುವುದು ಇಲ್ಲಿನ ಸಂಪ್ರದಾಯವಾಗಿದ್ದು, ಇದೀಗ ಕೆರೆಯಿಂದ ಹೊರಬಂದ ಬಬಿಯಾ ದೇವಾಲಯದ ಬಳಿ ಕಾಣಿಸಿಕೊಂಡಿದ್ರಿಂದ ಅಚ್ಚರಿಗೆ ಕಾರಣವಾಗಿದೆ. 

ಅಲ್ಲಿಯ ಪೂಜಾರಿ ಬಬಿಯಾ ಎಂಬ ಹೆಸರಿನಿಂದ ಕರೆಯುತ್ತಾರೆ. ಆ ಮೊಸಳೆಗೆ ಪ್ರತಿದಿನ ಮಧ್ಯಾಹ್ನ ಮಹಾಪೂಜೆ ಆದ್ಮೇಲೆ ನೈವೇದ್ಯ ಕೊಡುವ ಸಮಯಕ್ಕೆ ಕರೆಯುತ್ತಾರೆ. 
 
ಬಬಿಯಾ.... ಎಂದು ಕರೆದಾಗ ಸುರಂಗದಿಂದ ಹೊರಗೆ ಬಂದು ನೈವೇದ್ಯ ಸ್ವೀಕರಿಸುತ್ತದೆ ಈ ಮೊಸಳೆ. ಆದರೆ ಇದೀಗ ದೇಗುಲಕ್ಕೆ ಬಂದಿದೆ.

Follow Us:
Download App:
  • android
  • ios