Asianet Suvarna News Asianet Suvarna News

ಪ್ರಕರಣದ ಮಾಹಿತಿ ಕಲೆಹಾಕಲು ತೆರಳಿದ್ದ ಕಾರವಾರ DYSP ಕಾಡಿನಲ್ಲಿ ನಾಪತ್ತೆ

ಕಾರವಾರದಿಂದ ಒಂದು ಆಘಾತಕಾರಿ ಸುದ್ದಿ ಬಂದಿದೆ. ಕಾಳಿ ನದಿ ಸಮೀಪದ ಕಾಡಿನಲ್ಲಿ  ಕಾರವಾರ ಡಿವೈಎಸ್​ಪಿ ನಾಪತ್ತೆಯಾಗಿದ್ದಾರೆ.

Karwar Dysp Missing in Kali river forest
Author
Bengaluru, First Published Sep 1, 2019, 10:50 PM IST

ಕಾರವಾರ[ಸೆ. 01]  ಕಾರವಾರ ಸಮೀಪ ಕಾಳಿ ನದಿ ಕಾಡಿನಲ್ಲಿ  ಕಾರವಾರ ಡಿವೈಎಸ್​ಪಿ ಶಂಕರ್​ ಮಾರಿಯಾಳ್​ ನಾಪತ್ತೆಯಾಗಿದ್ದಾರೆ. ಮಾಹಿತಿ ತಿಳಿದ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಪ್ರಕರಣವೊಂದರ ತನಿಖೆಗೆ ಕಾಳಿ ನದಿ ಸಮೀಪದ ಕಾಡಿಗೆ ಡಿವೈಎಸ್‌ ಪಿ ತೆರಳಿದ್ದರು. ಕಾಳಿ ನದಿಯಲ್ಲಿ ಸಿಲುಕಿರುವ ಶಂಕೆಯನ್ನು ಸಹ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ದಾರಿ ತಪ್ಪಿ ಅವರು ಮಿಸ್ ಆಗಿರಬಹುದು ಎಂದು ಹೇಳಲಾಗಿದೆ. ಕಾರವಾರ ಮತ್ತು ಹೆರೂರು ಪೊಲೀಸರು ಕೂಂಬಿಂಗ್ ಮೂಲಕ ಹುಡುಕಾಟ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Follow Us:
Download App:
  • android
  • ios