Asianet Suvarna News Asianet Suvarna News

ಸಚಿವ ಸ್ಥಾನ ಸಿಕ್ಕರೂ ಶಶಿಕಲಾಗೆ ದುಃಖ, ನೋವು

ಸಚಿವ ಸ್ಥಾನ ಸಿಕ್ಕರೂ ನನಗೆ ಒಂದು ನೋವಿದೆ. ಒಂದು ಕಡೆ ಖುಷಿಯಿದ್ದರೆ ಇನ್ನೊಂದು ಕಡೆ ನಮ್ಮ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂಬ ನೋವಿದೆ ಎಂದು ನೂತನ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

Karnataka Minister Shashikala jolle First reaction in Belagavi
Author
Bengaluru, First Published Aug 21, 2019, 3:03 PM IST

ಬೆಳಗಾವಿ(ಆ. 21) ಪಕ್ಷದ ವರಿಷ್ಠರು ನನಗೆ ಹೊಸ ಜವಾಬ್ದಾರಿ ಕೊಟ್ಟಿದ್ದಾರೆ.  ಒಂದು ಕಡೆ ಖುಷಿ ಇನ್ನೊಂದು ಕಡೆ ದುಃಖವಿದೆ.  ಪ್ರವಾಹದ ಸಂದರ್ಭದಲ್ಲಿ ನಮ್ಮೆಲ್ಲಾ ಜನರು ನೋವಿನಲ್ಲಿದ್ದಾರೆ ಎಂದು ನೂತನ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಮೇಲೆ ತವರು ಬೆಳಗಾವಿಗೆ ಆಗಮಿಸಿದ ಜೊಲ್ಲೆ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊಟ್ಟಂತ ಜವಾಬ್ದಾರಿಯನ್ನ ವ್ಯವಸ್ಥಿತವಾಗಿ ನಿರ್ವಹಿಸಿ ಕೆಲಸ ಮಾಡುತ್ತೇನೆ ಎಂದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ನಾನು ಸಚಿವ ಸ್ಥಾನದ ನಿರೀಕ್ಷೆ ಮಾಡಿರಲಿಲ್ಲ. ಶಾಸಕಾಂಗ ಸಭೆ ಇದೆ ಎಂದು ಕರೆದಿದ್ದರು,ನಂತರ ಯಡಿಯೂರಪ್ಪ ಅವರು ಸಚಿವ ಸ್ಥಾನ ಸಿಕ್ಕಿರುವ ಬಗ್ಗೆ ತಿಳಿಸಿದರು ಎಂದು ಸಚಿವರಾದ ಬಗೆ ವಿವರಿಸಿದರು.

ಮಹಿಳೆಯರ ಸಮಸ್ಯೆ ಬಹಳಷ್ಟಿವೆ ಅವರಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಬೆಳಗಾವಿ ಜಿಲ್ಲೆಯ ಎಲ್ಲ ಶಾಸಕರ ಮಾರ್ಗದರ್ಶನದಲ್ಲಿ ಈ ಭಾಗದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

 


 

Follow Us:
Download App:
  • android
  • ios