Asianet Suvarna News Asianet Suvarna News

ಡಿಕೆ ಸಹೋದರರ ನಾಡಲ್ಲಿ ಕುತೂಹಲ ಕೆರಳಿಸಿದ ರಾಜಕೀಯ!

ರಾಮನಗರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಮೀಸಲಾತಿ ಮಾರ್ಗಸೂಚಿಗಳನ್ನು ಪರಿಶೀಲನೆ ನಡೆಸಲು ಸರ್ಕಾರ ಆದೇಶ ನೀಡಿದ್ದು, ಆದರೆ ಈ ಮೀಸಲಾತಿ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ.

Karnataka Govt Order To Revise Reservation Guideline For Local Body Election
Author
Bengaluru, First Published Aug 31, 2020, 11:43 AM IST


ವರದಿ : ಎಂ.ಅಫ್ರೋಜ್ ಖಾನ್‌

 ರಾಮ​ನ​ಗರ (ಆ.31): ನಗರ ಸ್ಥಳೀಯ ಸಂಸ್ಥೆ​ಗಳ ಅಧ್ಯ​ಕ್ಷರು ಮತ್ತು ಉಪಾ​ಧ್ಯ​ಕ್ಷರ ಸ್ಥಾನ​ಗ​ಳಿಗೆ ಮೀಸ​ಲಾತಿ ನಿಗದಿ ಪಡಿಸಲು ಮಾರ್ಗ​ಸೂ​ಚಿ​ಗ​ಳನ್ನು ಪರಿ​ಷ್ಕ​ರಿ​ಸಲು ರಾಜ್ಯ ಸರ್ಕಾರ ಆದೇ​ಶಿ​ಸಿ​ರು​ವುದು ಪುರ​ಪಿ​ತೃ​ಗಳ ಪದ​ಗ್ರ​ಹಣ ಇನ್ನಷ್ಟುವಿಳಂಬ​ವಾ​ಗುವ ಸಾಧ್ಯ​ತೆ​ಗ​ಳಿವೆ.

ನಗ​ರ​ಸಭೆ, ಪುರ​ಸಭೆ ಮತ್ತು ಪಟ್ಟಣ ಪಂಚಾ​ಯಿ​ತಿ​ಗಳ ಅಧ್ಯ​ಕ್ಷರು ಮತ್ತು ಉಪಾ​ಧ್ಯ​ಕ್ಷರ ಸ್ಥಾನ​ಗ​ಳಿಗೆ ಮೀಸ​ಲಾತಿ ನಿಗದಿ ಪಡಿ​ಸಲು ಜಾರಿ​ಯ​ಲ್ಲಿದ್ದ ಮಾರ್ಗ​ ಸೂ​ಚಿ​ಗ​ಳನ್ನು ಸೂಕ್ತ​ವಾಗಿ ಪರಿ​ಷ್ಕ​ರಿ​ಸಲು ಸರ್ಕಾರ ಉದ್ದೇ​ಶಿ​ಸಿದ್ದು, ಪರಿ​ಷ್ಕೃತ ಮಾರ್ಗ​ಸೂ​ಚಿ​ಗ​ಳನ್ನು ಆಗಸ್ಟ್‌ 27ರಂದು ರಾಜ್ಯ​ಪ​ತ್ರದಲ್ಲಿ ಪ್ರಕ​ಟಿಸಿ ಸಲಹೆ, ಆಕ್ಷೇ​ಪ​ಣೆ​ಗ​ಳನ್ನು ಆಹ್ವಾ​ನಿ​ಸಿದೆ.

ಮಾರ್ಗಸೂಚಿಗಳ ಬದಲಾವಣೆ

ನಗರ ಸ್ಥಳೀಯ ಸಂಸ್ಥೆ​ಗ​ಳ ಅಧ್ಯಕ್ಷ - ಉಪಾ​ಧ್ಯ​ಕ್ಷರ ಸ್ಥಾನ​ಗ​ಳಿಗೆ 2018ರಿಂದ ಚುನಾ​ವ​ಣೆಯೇ ನಡೆ​ದಿಲ್ಲ. ಇದನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡು ಸರ್ಕಾರ ಆದಷ್ಟುಶೀಘ್ರ ಚುನಾ​ವಣೆ ನಡೆ​ಸುವ ಉದ್ದೇ​ಶ​ದಿಂದ ಹಿಂದಿನ ಅವ​ಧಿಯ ಮೀಸಲು ಪುನ​ರಾ​ವ​ರ್ತ​ನೆ​ಯಾ​ಗ​ದಂತೆ ಹಾಗೂ ಆಯಾಯ ವರ್ಗ​ಗ​ಳಿಗೆ ಲಭ್ಯ​ವಾ​ಗುವ ಮೀಸಲು ಸ್ಥಾನ​ಗಳ ಸಂಖ್ಯೆ​ಯ​ನ್ನು​ ಕಾ​ಯ್ದು​ಕೊಂಡು ಮೀಸಲು ನಿಗದಿ ಪಡಿ​ಸುವ ಬಗ್ಗೆ ತೀರ್ಮಾ​ನಿಸಿ ಕ್ರಮ ವಹಿ​ಸಲು ಮಾರ್ಗ​ಸೂ​ಚಿ​ಗ​ಳನ್ನು ಬದ​ಲಾ​ವಣೆ ಮಾಡಿದೆ.

ಪುರ​ಪಿ​ತೃ​ಗ​ಳಿಗೆ ಅಧಿ​ಕಾ​ರ​ವಿಲ್ಲ:

ಈ ಹಿಂದೆ ರಾಜ್ಯ ಸರ್ಕಾರ ನಿಗದಿ ಪಡಿ​ಸಿದ್ದ ಸ್ಥಳೀಯ ಸಂಸ್ಥೆ​ಗಳ ಅಧ್ಯಕ್ಷ - ಉಪಾ​ಧ್ಯ​ಕ್ಷರ ಮೀಸಲು ಪ್ರಶ್ನಿಸಿ ಅವ​ಕಾಶ ವಂಚಿ​ತರು ಹೈಕೋರ್ಟ್‌ನ ಮೊರೆ ಹೋಗಿ​ದ್ದರು. ನ್ಯಾಯಾ​ಲ​ಯದ ಮೆಟ್ಟಿ​ಲೇ​ರಿದ ಪರಿ​ಣಾಮ 20 ತಿಂಗ​ಳಿಂದ ಪುರ​ಪಿ​ತೃ​ಗ​ಳಿಗೆ ಅಧಿ​ಕಾರವೇ ಇಲ್ಲ​ದಂತಾ​ಗಿ​ದೆ. ಆಡ​ಳಿ​ತಾ​ಧಿ​ಕಾ​ರಿ​ಗ​ಳನ್ನು ನೇಮಕ ಮಾಡಿ​ರುವ ಸರ್ಕಾರ, ಅವರ ಅಧ್ಯ​ಕ್ಷ​ತೆ​ಯ​ಲ್ಲಿಯೇ ಸಾಮಾ​ನ್ಯ​ಸಭೆ ನಡೆಸಿ ತುರ್ತು ಕಾಮ​ಗಾ​ರಿ​ಗ​ಳಿಗೆ ಅನು​ಮೋ​ದನೆ ಪಡೆ​ದು​ಕೊ​ಳ್ಳು​ತ್ತಿ​ದೆ.

ಶಿರಾ ಉಪಚುನಾವಣೆಗೆ ಪಕ್ಷಗಳ ಪೈಪೋಟಿ : ಯಾವ ಪಕ್ಷದಿಂದ ಯಾರಿಗೆ ಟಿಕೆಟ್?.

ಅಧಿ​ಕಾ​ರಿ​ಗಳೇ ಅಧಿ​ಪ​ತಿ​ಗಳು :

ಸದ್ಯಕ್ಕೆ ಜಿಲ್ಲಾ​ಧಿ​ಕಾ​ರಿ​ಗಳು ರಾಮ​ನ​ಗರ ನಗ​ರ​ಸಭೆ, ಉಪ​ವಿ​ಭಾ​ಗಾ​ಧಿ​ಕಾ​ರಿ​ಗಳು ಬಿಡದಿ ಪುರ​ಸಭೆ, ತಹ​ಸೀ​ಲ್ದಾರ್‌ ಮಾಗಡಿ ಪುರ​ಸಭೆ ಆಡ​ಳಿ​ತಾಧಿಕಾರಿಯಾಗಿ ಹಾಗೂ ಆಯು​ಕ್ತರು, ಮುಖ್ಯಾ​ಧಿ​ಕಾ​ರಿ​ಗಳೇ ಅಧಿ​ಪ​ತಿಗಳಾ​ಗಿ​ದ್ದಾರೆ. ಅಧ್ಯಕ್ಷ - ಉಪಾ​ಧ್ಯ​ಕ್ಷ ಸ್ಥಾನ​ಗಳಿಗೆ ಮೀಸಲು ನಿಗ​ದಿ​ಯಾ​ಗದ ಕಾರಣ ಬಿಡದಿ ಪುರ​ಸ​ಭೆ​ಯಲ್ಲಿ 20 ತಿಂಗ​ಳು, ಕನ​ಕ​ಪುರ ನಗ​ರ​ಸ​ಭೆ​, ಮಾಗಡಿ ಪುರ​ಸ​ಭೆಯಲ್ಲಿ 10 ತಿಂಗಳಿಂದ ವರಿ​ಷ್ಠರ ಹುದ್ದೆ​ಗಳು ಖಾಲಿ​ಯಾ​ಗಿ​ದ್ದರೆ, ರಾಮ​ನ​ಗರ ಮತ್ತು ಚನ್ನ​ಪ​ಟ್ಟಣ ನಗ​ರ​ಸಭೆ ಸದಸ್ಯ ಸ್ಥಾನ​ಗ​ಳಿಗೆ ಇನ್ನೂ ಚುನಾ​ವಣೆಯೇ ನಡೆ​ದಿಲ್ಲ.

ಹಳ್ಳಿಯಲ್ಲಿ ಪಕ್ಷ ಸಂಘಟನೆ ಮಾಡಿದ ಬಿಜೆಪಿ ನಾಯಕ ಈಗ ದಿಲ್ಲಿ ಪ್ರತಿನಿಧಿ....

  ನಗ​ರ​ಸಭೆ, ಪುರ​ಸಭೆ ಮತ್ತು ಪಟ್ಟಣ ಪಂಚಾ​ಯಿ​ತಿ​ಗಳ ಅಧ್ಯ​ಕ್ಷರು ಮತ್ತು ಉಪಾ​ಧ್ಯ​ಕ್ಷರ ಸ್ಥಾನ​ಗ​ಳಿಗೆ ಮೀಸ​ಲಾತಿ ನಿಗದಿ ಪಡಿ​ಸಲು ಪರಿ​ಷ್ಕೃತ ಮಾರ್ಗ​ಸೂ​ಚಿ​ಗ​ಳನ್ನು ಸಾರ್ವ​ಜ​ನಿ​ಕರ ಅವ​ಗಾ​ಹ​ನೆ​ಗಾಗಿ ಪ್ರಕ​ಟಿ​ಸ​ಲಾ​ಗಿದೆ. ಈ ಪರಿ​ಷ್ಕೃತ ಮಾರ್ಗ​ಸೂ​ಚಿ​ಗ​ಳನ್ನು ಕರ್ನಾ​ಟಕ ರಾಜ್ಯ​ಪ​ತ್ರ​ದ​ಲ್ಲಿ ಪ್ರಕಟಿ​ಸಿದ ದಿನಾಂಕ​ದಿಂದ 7 ದಿನ​ಗಳ ತರು​ವಾಯ ಪರಿ​ಗ​ಣನೆಗೆ ತೆಗೆ​ದು​ಕೊ​ಳ್ಳ​ಲಾ​ಗು​ವುದು.

- ಎ.ವಿ​ಜಯ್‌ ಕುಮಾರ್‌, ಸರ್ಕಾ​ರದ ಅಧೀನ ಕಾರ್ಯ​ದ​ರ್ಶಿ, ನಗ​ರಾ​ಭಿ​ವೃದ್ಧಿ ಇಲಾಖೆ.

ಕುತೂಹಲ ಕೆರಳಿಸಿದ ಮೀಸಲು

ರಾಜ್ಯ ಸರ್ಕಾರ 2020ರ ಮಾಚ್‌ರ್‍ ತಿಂಗ​ಳಿ​ನಲ್ಲಿ ನಗ​ರ ಸ್ಥಳೀಯ ಸಂಸ್ಥೆ​ಗಳ ಅಧ್ಯಕ್ಷ ಮತ್ತು ಉಪಾ​ಧ್ಯಕ್ಷ ಸ್ಥಾನ​ಗ​ಳಿಗೆ ಮೀಸ​ಲಾತಿ ನಿಗದಿ ಪಡಿ​ಸಿತ್ತು. ಆಗ ಬಿಡದಿ ಪುರ​ಸಭೆ ಅಧ್ಯಕ್ಷ ಸ್ಥಾನ ಬಿಸಿಎ ವರ್ಗಕ್ಕೆ, ಉಪಾ​ಧ್ಯಕ್ಷ ಸ್ಥಾನ ಪರಿ​ಶಿಷ್ಟಜಾತಿ ಮಹಿ​ಳೆಗೆ ಮೀಸ​ಲಾ​ಗಿ​ದ್ದರೆ, ಮಾಗಡಿ ಪುರ​ಸಭೆ ಅಧ್ಯಕ್ಷ ಸ್ಥಾನ ಬಿಸಿಎ ವರ್ಗಕ್ಕೆ, ಉಪಾ​ಧ್ಯಕ್ಷ ಸ್ಥಾನ ಸಾಮಾನ್ಯ ಮಹಿ​ಳೆಗೆ ನೀಡ​ಲಾ​ಗಿದೆ. ಕನ​ಕ​ಪು​ರ ನಗ​ರ​ಸಭೆ ಅಧ್ಯಕ್ಷ ಸ್ಥಾನ ಬಿಸಿಎ ವರ್ಗ, ಉಪಾ​ಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಚನ್ನ​ಪ​ಟ್ಟಣ ನಗ​ರ​ಸಭೆ ಅಧ್ಯಕ್ಷ ಸ್ಥಾನ ಪರಿ​ಶಿಷ್ಟಜಾತಿ ಮಹಿಳೆ , ಉಪಾ​ಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ರಾಮ​ನ​ಗರ ನಗ​ರ​ಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ , ಉಪಾ​ಧ್ಯಕ್ಷ ಸ್ಥಾನ ಪರಿ​ಶಿಷ್ಟಜಾತಿಗೆ ಮೀಸ​ಲಾ​ಗಿತ್ತು. ಈಗ ಮೀಸ​ಲಾತಿ ನಿಗದಿ ಪಡಿಸಲು ಮಾರ್ಗ​ಸೂ​ಚಿ​ಗ​ಳನ್ನು ಪರಿ​ಷ್ಕ​ರಿ​ಸಲು ಸರ್ಕಾರ ಮುಂದಾ​ಗಿ​ರು​ವು​ದ​ರಿಂದ ಯಾವ ಸ್ಥಳೀಯ ಸಂಸ್ಥೆಗೆ ಯಾವ ಮೀಸ​ಲಾತಿ ನಿಗ​ದಿ​ಯಾ​ಗಲಿದೆ ಎಂಬುದು ಪುರ​ಪಿ​ತೃ​ಗಳ ಕುತೂ​ಹ​ಲಕ್ಕೆ ಕಾರ​ಣ​ವಾ​ಗಿ​ದೆ.

Follow Us:
Download App:
  • android
  • ios