Asianet Suvarna News Asianet Suvarna News

ಗಣವೇಷಧಾರಿಗಳಾದ ಜೋಶಿ, ಶೆಟ್ಟರ್‌, ಅಶ್ವತ್ಥ್ ನಾರಾಯಣ

  • ಗಣವೇಷಧಾರಿಗಳಾದ ಜೋಶಿ, ಶೆಟ್ಟರ್‌, ಅಶ್ವತ್ಥ್ ನಾರಾಯಣ
  • ಹಲವೆಡೆ ಆರ್‌ಎಸ್‌ಎಸ್‌ ಪಥಸಂಚಲನ
joshi  Shettar Aswatth Narayan who are participate Rss pathasanchalana
Author
First Published Oct 10, 2022, 12:50 PM IST

ಬೆಂಗಳೂರು (ಅ.10) : ವಿಜಯದಶಮಿ ಅಂಗವಾಗಿ ಭಾನುವಾರ ರಾಜ್ಯದ ಹಲವೆಡೆ ಆರ್‌ಎಸ್‌ಎಸ್‌ ಪಥಸಂಚಲನ ನಡೆಯಿತು. ಪ್ರಮುಖವಾಗಿ ಉತ್ತರ ಕರ್ನಾಟಕದ ಹುಬ್ಬಳ್ಳಿ, ಗದಗ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಕಲಬುರಗಿಯಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ನಡೆಯಿತು.

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕಲಬುರಗಿಯಲ್ಲಿ ಸಂಸದ ಡಾ.ಉಮೇಶ್‌ ಜಾಧವ, ಶಾಸಕರಾದ ದತ್ತಾತ್ರೇಯ ಪಾಟೀಲ್‌ ರೇವೂರ್‌, ಬಸವರಾಜ ಮತ್ತಿಮಡು, ಬೆಂಗಳೂರಿನಲ್ಲಿ ಸಚಿವ ಅಶ್ವತ್‌್ಥ ನಾರಾಯಣ್‌ ಗಣವೇಷಧಾರಿಗಳಾಗಿ ಪಥಸಂಚಲನದಲ್ಲಿ ಗಮನ ಸೆಳೆದರು. ಸಂಘದ ಸಂಸ್ಥಾಪಕರಾದ ಹೆಡಗೇವಾರ್‌ ಸೇರಿದಂತೆ ಹಲವರ ಭಾವಚಿತ್ರಗಳೊಂದಿಗೆ ಮೆರವಣಿಗೆ ನಡೆಯಿತು. ಗದಗದಲ್ಲಿ ಮಳೆಯಲ್ಲೇ ಪಥಸಂಚಲನ ನಡೆಯಿತು. ಬಾಗಲಕೋಟೆಯಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕಾಗಿ ರಸ್ತೆಯನ್ನು ರಂಗೋಲಿ, ಹೂವುಗಳಿಂದ ಅಲಂಕಾರಗೊಳಿಸಲಾಗಿತ್ತು.

ಹುಬ್ಬಳ್ಳಿಯಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯವಾಹರಾದ ನ.ತಿಪ್ಪೇಸ್ವಾಮಿ, ಭಾರತ ವಿಶ್ವಗುರುವಾಗುವ ಕಾಲ ಸನ್ನಿಹಿತವಾಗಿದೆ. ಈ ವಿಷಯದಲ್ಲಿ ಆರ್‌ಎಸ್‌ಎಸ್‌ನ ಸೈದ್ಧಾಂತಿಕತೆಯೂ ಮಹತ್ತರ ಪಾತ್ರ ವಹಿಸಿದೆ ಎಂದು ಹೇಳಿದರು. ಆರ್‌ಎಸ್‌ಎಸ್‌ನ್ನು ಈ ಹಿಂದೆ ಮೂರು ಬಾರಿ ನಿಷೇಧಿಸಲಾಗಿತ್ತು. ಬಳಿಕ ಇದೊಂದು ರಾಷ್ಟ್ರಭಕ್ತಿಯ ಸಂಘಟನೆಯೆಂಬುದು ಅರಿವಾಗಿ ನಿಷೇಧವನ್ನು ಹಿಂಪಡೆಯಲಾಯಿತು ಎಂದು ವಿವರಿಸಿದರು.

ಆರ್‌ಎಸ್‌ಎಸ್‌ ಬಗ್ಗೆ ಮಾತಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ: ವಿಜಯೇಂದ್ರ

Follow Us:
Download App:
  • android
  • ios