Asianet Suvarna News Asianet Suvarna News

'ನಿಷ್ಠಾ​ವಂತ​ರನ್ನೂ ಉಳಿ​ಸಿ​ಕೊ​ಳ್ಳ​ದ​ ದಳ​ಪತಿ : ಈ ಕಾರಣಕ್ಕೆ ಬಿಟ್ಟು ಹೋದರು'

ಜೆಡಿಎಸ್ ನಾಯಕರು  ನಿಷ್ಠಾವಂತರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಚುನಾವಣೆ ಬೆನ್ನಲ್ಲೇ ಹಲವು ಮುಖಂಡರು ಪಕ್ಷ ತೊರೆಯುತ್ತಿದ್ದು ಜೆಡಿಎಸ್ ಸಂಕಷ್ಟ ಎದುರಿಸುವಂತಾಗಿದೆ. 

JDS Leaders Quit Party in Ramanagara snr
Author
Bengaluru, First Published Dec 7, 2020, 1:52 PM IST

 ರಾಮ​ನ​ಗರ (ಡಿ.07):  ಸ್ಥಳೀಯ ಸಂಸ್ಥೆ​ಯಲ್ಲಿ ಅವ​ಕಾಶ ಇದ್ದರೂ ಅಧಿ​ಕಾರ ಕೊಡಿ​ಸ​ಲು ಪ್ರಯ​ತ್ನಿ​ಸ​ಲಿಲ್ಲ ಎಂಬ ಕಾರ​ಣಕ್ಕೆ ಜೆಡಿ​ಎಸ್‌ನ ಜನ​ಪ್ರ​ತಿ​ನಿ​ಧಿ​ಗಳು ಕಾಂಗ್ರೆಸ್‌ ಪಕ್ಷ ಸೇರಿ ಅಧಿ​ಕಾರ ಅನು​ಭ​ವಿ​ಸಿ​ದರು. ಅವ​ರನ್ನು ಪಕ್ಷ​ದಲ್ಲಿ ಉಳಿ​ಸಿ​ಕೊ​ಳ್ಳುವ ಪ್ರಯತ್ನವನ್ನು ಜೆಡಿ​ಎಸ್‌ ವರಿ​ಷ್ಠರು ಮಾಡ​ಲಿಲ್ಲ. 

ಈಗ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಜೆಡಿ​ಎಸ್‌ ಅಭ್ಯ​ರ್ಥಿ​ಗಳ ಗೆಲು​ವಿ​ಗಾ​ಗಿ ಹಾಗೂ ಪಕ್ಷ​ದ ಸಂಘ​ಟ​ನೆ​ಗಾಗಿ ಹಗ​ಲಿ​ರಳು ಶ್ರಮಿ​ಸಿದ ಗ್ರಾಮ ಮಟ್ಟ​ದ​ಲ್ಲಿ​ರುವ ಪಕ್ಷದ ಮುಖಂಡರು - ಕಾರ್ಯ​ಕ​ರ್ತರನ್ನು ಸೆಳೆ​ಯಲು ಕಾಂಗ್ರೆಸ್‌ ಮತ್ತು ಬಿಜೆಪಿ ನಾಯ​ಕರು ಪೈಪೋ​ಟಿಗೆ ಇಳಿ​ದಿ​ದ್ದಾರೆ. ಇಷ್ಟಾ​ದರೂ ದಳ​ಪ​ತಿ​ಗ​ಳನ್ನು ನಿಷ್ಠಾ​ವಂತ​ರನ್ನು ಉಳಿ​ಸಿ​ಕೊ​ಳ್ಳಲು ಮನಸ್ಸು ಮಾಡದೆ ಮೌನ ವಹಿ​ಸಿ​ದ್ದಾ​ರೆ.

ಕಾಂಗ್ರೆಸ್‌ - ಬಿಜೆ​ಪಿಯಿಂದ ಜೆಡಿ​ಎಸ್‌ ಮನೆಗೆ ಕನ್ನ ! ಪಕ್ಷ ಬಿಟ್ಟು ತೆರಳಿದ ಮುಖಂಡರು

ಕುಮಾ​ರ​ಸ್ವಾ​ಮಿ​ಯ​ವರು ಮುಖ್ಯ​ಮಂತ್ರಿ​ಯಾ​ಗಿ​ದ್ದಾಗ ಜಿಲ್ಲೆ​ಯಲ್ಲಿ ಮಾಡಿದ್ದ ಅಭಿ​ವೃದ್ಧಿ ಕಾರ್ಯ​ಗ​ಳನ್ನು ಮೆಚ್ಚಿ ಅನ್ಯ ಪಕ್ಷದ ಮುಖಂಡ​ರಾ​ಗಲಿ ಅಥವಾ ಕಾರ್ಯ​ಕ​ರ್ತ​ರಾ​ಗಲಿ ಜೆಡಿ​ಎಸ್‌ ನತ್ತ ಒಲವು ತೋರು​ತ್ತಿಲ್ಲ. ಇದರ ಅರ್ಥ ಚುನಾ​ವ​ಣೆ​ಗಳಲ್ಲಿ ಅಭಿ​ವೃದ್ಧಿ ಮಾನ​ದಂಡ ಆಗು​ವು​ದಿಲ್ಲ ಎನ್ನು​ತ್ತಾರೆ ಜೆಡಿ​ಎಸ್‌ ನಾಯ​ಕ​ರೊ​ಬ್ಬ​ರು.

ಗ್ರಾಮ ಪಂಚಾ​ಯಿತಿ ಚುನಾ​ವಣೆ ಕಾವು ಜೋರಾ​ಗಿ​ದದು, ಮೂರು ಪಕ್ಷದ ನಾಯ​ಕರು ಗ್ರಾಮ​ಗ​ಳಿಗೆ ತೆರ​ಳು​ತ್ತಿ​ದ್ದಾರೆ. ಇದ​ರಿಂದ ಚುನಾ​ವಣೆ ಹೊತ್ತಿ​ನಲ್ಲಿ ಇನ್ನಷ್ಟುಮುಖಂಡರು - ಕಾರ್ಯ​ಕ​ರ್ತರು ಮೂಲ ಪಕ್ಷ ತೊರೆದು ಇತರೆ ಪಕ್ಷಕ್ಕೆ ಪಕ್ಷಾಂತ​ರ​ಗೊ​ಳ್ಳುವ ಸಾಧ್ಯ​ತೆ​ಗ​ಳಿವೆ. ಒಟ್ಟಾರೆ ಕಾಂಗ್ರೆಸ್‌ - ಬಿಜೆಪಿಯಿಂದ ಜೆಡಿ​ಎಸ್‌ ಶಕ್ತಿ​ಯನ್ನು ಕುಗ್ಗಿಸುವ ಕಾರ್ಯ ನಡೆ​ಯು​ತ್ತಿ​ದೆ.

Follow Us:
Download App:
  • android
  • ios