ಮುಖ್ಯಮಂತ್ರಿ ಬಳಿ ನಾನೇ ಸಮಯ ನಿಗದಿಪಡಿಸುತ್ತೇನೆ ಏಳು ಶಾಸಕರ ಜೊತೆಗೆ ಮನ್‌ಮುಲ್‌ ಆಡಳಿತ ಮಂಡಳಿ ನಿರ್ದೇಶಕರನ್ನೂ ಕಳುಹಿಸಿಕೊಡುತ್ತೇನೆ ಹಗರಣದ ಬಗ್ಗೆ ಯಾವ ತನಿಖೆಯನ್ನಾದರೂ ಮಾಡಿಸಿಕೊಳ್ಳಲಿ  - ಎಚ್‌ ಡಿಕೆ

ಮಳವಳ್ಳಿ (ಜೂ.30): ಮುಖ್ಯಮಂತ್ರಿ ಬಳಿ ನಾನೇ ಸಮಯ ನಿಗದಿಪಡಿಸುತ್ತೇನೆ. ಏಳು ಶಾಸಕರ ಜೊತೆಗೆ ಮನ್‌ಮುಲ್‌ ಆಡಳಿತ ಮಂಡಳಿ ನಿರ್ದೇಶಕರನ್ನೂ ಕಳುಹಿಸಿಕೊಡುತ್ತೇನೆ. 

ಹಗರಣದ ಬಗ್ಗೆ ಯಾವ ತನಿಖೆಯನ್ನಾದರೂ ಮಾಡಿಸಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಈ ಮೂಲಕ ಮನ್‌ಮುಲ್‌ ಆಡಳಿತ ಮಂಡಳಿ ವಿರುದ್ಧದ ಮಾಜಿ ಸಚಿವ ಚಲುವರಾಯಸ್ವಾಮಿ ಟೀಕೆಗೆ ತಿರುಗೇಟು ನೀಡಿದರು.

ಬಹಿರಂಗ ಹೇಳಿಕೆ ಕೊಡಲಿ : ಎಚ್‌ಡಿಕೆ - ದೇವೇಗೌಡರಿಗೆ ಕೈ ನಾಯಕ ಸವಾಲ್

ನೀರು ಮಿಶ್ರಿತ ಹಾಲು ಹಗರಣದ ತನಿಖೆಗೆ ಜೆಡಿಎಸ್‌ ವರಿಷ್ಠರೇ ಅಡ್ಡಿಯಾಗಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಹಾಲಿಗೆ ನೀರು ಬೆರೆಸುತ್ತಿರುವುದು 10-15 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. 

ಆದರೆ, ಮಹಾನುಭಾವರೊಬ್ಬರು ಹಾಲಿ ಆಡಳಿತ ಮಂಡಳಿ ಸೂಪರ್‌ಸೀಡ್‌ ಆಗಬೇಕೆನ್ನುತ್ತಿದ್ದಾರೆ. ಅವರ (ಚಲುವರಾಯಸ್ವಾಮಿ) ನಾಯಕತ್ವದಲ್ಲೇ ಸಿಎಂ ಬಳಿ ನಮ್ಮ ಶಾಸಕರು, ಆಡಳಿತ ಮಂಡಳಿಯವರನ್ನು ಕರೆದುಕೊಂಡು ಹೋಗಿ ಯಾವ ತನಿಖೆಯನ್ನಾದರೂ ಮಾಡಿಸಿಕೊಳ್ಳಲಿ ಎಂದು ಹೇಳಿದರು.