Asianet Suvarna News Asianet Suvarna News

'ಕುಮಾ​ರ​ಸ್ವಾಮಿ ಸಿಎಂ ಆಗು​ವುದು ಸೂರ್ಯ​ಚಂದ್ರ​ ಇರು​ವಷ್ಟೆಸತ್ಯ'

ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಜೆಡಿ​ಎಸ್‌ ಬಹು​ಮತ ಪಡೆದು ಕುಮಾ​ರ​ಸ್ವಾ​ಮಿ​ರ​ವರು ಮುಖ್ಯ​ಮಂತ್ರಿ ಆಗು​ವುದು ಸೂರ್ಯ ಚಂದ್ರ​ ಇರು​ವಷ್ಟೆಸತ್ಯ ಎಂದು ನಿಖಿಲ್‌ ಕುಮಾ​ರ​ಸ್ವಾಮಿ ಹೇಳಿ​ದರು.

It is a fact that Kumaraswamy will be CM Nikhil Kumaraswamy snr
Author
First Published Jan 4, 2023, 6:30 AM IST

ರಾಮ​ನ​ಗ​ರ: ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಜೆಡಿ​ಎಸ್‌ ಬಹು​ಮತ ಪಡೆದು ಕುಮಾ​ರ​ಸ್ವಾ​ಮಿ​ರ​ವರು ಮುಖ್ಯ​ಮಂತ್ರಿ ಆಗು​ವುದು ಸೂರ್ಯ ಚಂದ್ರ​ ಇರು​ವಷ್ಟೆಸತ್ಯ ಎಂದು ನಿಖಿಲ್‌ ಕುಮಾ​ರ​ಸ್ವಾಮಿ ಹೇಳಿ​ದರು.

ನಗ​ರದ ಉಮೇಶ್‌ ಆಟೋ ಗ್ಯಾಸ್‌ ಫಿಲ್ಲಿಂಗ್‌ ಸ್ಟೇಷನ್‌ನಲ್ಲಿ ಆಟೋ ಚಾಲ​ಕ​ರಿಗೆ ಸಮ​ವಸ್ತ್ರ ವಿತ​ರಿಸಿ ಮಾತ​ನಾ​ಡಿದ ಅವರು, ಯಾರು ಎಷ್ಟೇ ಪ್ರಯತ್ನ ಮಾಡಿ​ದರು ಕುಮಾ​ರ​ಸ್ವಾಮಿ ಅವ​ರಿಗೆ ಮುಖ್ಯ​ಮಂತ್ರಿ ಸ್ಥಾನ ತಪ್ಪಿ​ಸಲು ಸಾಧ್ಯ​ವಿಲ್ಲ. ನಮ್ಮ ತಾತ, ತಂದೆ ಹಾಗೂ ತಾಯಿ​ಯ​ವರು ಜನರ ಕಷ್ಟಸುಖ​ಗ​ಳಲ್ಲಿ ಭಾಗಿ​ಯಾ​ಗು​ವು​ದರ ಜೊತೆಗೆ ಕ್ಷೇತ್ರ​ದ ಅಭಿ​ವೃ​ದ್ಧಿಗೆ ಸಾಕಷ್ಟುದುಡಿ​ದಿ​ದ್ದಾರೆ. ಈಗ ನಾನು ಅವ​ರಂತೆಯೇ ನಿಮ್ಮೆ​ಲ್ಲರ ಸೇವೆ​ಗಾಗಿ ಬಂದಿ​ದ್ದೇನೆ. ಇಲ್ಲಿಯೇ ಕಚೇರಿ ತೆರೆದು ಜನರ ಕಷ್ಟ​ಗ​ಳಿಗೆ ಸ್ಪಂದಿಸಿ ಕೈಲಾದ ನೆರವು ಕಲ್ಪಿ​ಸು​ತ್ತೇನೆ ಎಂದು ತಿಳಿ​ಸಿ​ದರು.

ಆಟೋ ಚಾಲ​ಕರು ಶ್ರಮ ಜೀವಿ​ಗಳು. ಪ್ರತಿ​ನಿತ್ಯ ಆದಾಯ ಕಡಿ​ಮೆ​ಯಿದ್ದು, ಜೀವನ ನಿರ್ವ​ಹಣೆ ಕಷ್ಟ​ದಾ​ಯ​ಕ​ವಾ​ಗಿದೆ. ನೀವೆ​ಲ್ಲರು ನನ್ನೊಂದಿಗೆ ಸಂಪ​ರ್ಕಕ್ಕೆ ಬಂದಲ್ಲಿ ನೆರ​ವಿಗೆ ನಿಲ್ಲು​ತ್ತೇನೆ. ಇದೀಗ ಮತ್ತೆ ಕೋವಿಡ್‌ ಭೀತಿ ಆವ​ರಿ​ಸು​ತ್ತಿದ್ದು, ಜನರ ದಿನ​ನಿ​ತ್ಯದ ಕಾರ್ಯ​ಚ​ಟು​ವ​ಟಿಕೆ ಹಾಗೂ ಆರೋ​ಗ್ಯದ ಮೇಲೆ ದುಷ್ಪ​ರಿ​ಣಾಮ ಬೀರ​ದಂತೆ ದೇವರ ಕಾಪಾ​ಡಲೆಂದು ಪ್ರಾರ್ಥಿ​ಸು​ವು​ದಾಗಿ ನಿಖಿಲ್‌ ಕುಮಾ​ರ​ಸ್ವಾಮಿ ಹೇಳಿ​ದರು.

 

ಮತಬ್ಯಾಂಕ್‌ಗಾಗಿ ರಾಮ ಮಂದಿರ ವಿಚಾರ ಪ್ರಸ್ತಾಪ

 ರಾಮ​ನ​ಗರ :  ಕಳೆದ ಮೂರು ವರ್ಷ​ಗ​ಳಿಂದ ಮೌನ​ವಾ​ಗಿದ್ದ ಬಿಜೆಪಿ ಸರ್ಕಾರ ಚುನಾ​ವಣೆ ಸಮೀಪ ಇರುವ ಕಾರಣ ರಾಮ ಮಂದಿರ ನಿರ್ಮಾ​ಣದ ವಿಚಾರ ಪ್ರಸ್ತಾ​ಪಿ​ಸು​ತ್ತಿದೆ ಎಂದು ಜೆಡಿಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ಕಿಡಿ​ಕಾ​ರಿ​ದರು.

ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಬಿಜೆಪಿ ಸರ್ಕಾರ ರಾಜ್ಯ​ದಲ್ಲಿ ಮೂರು ವರ್ಷಗ​ಳಿಂದ ಆಡ​ಳಿತ ನಡೆ​ಸು​ತ್ತಿದೆ. ಈ ಅವ​ಧಿ​ಯಲ್ಲಿ ರಾಮ​ನ​ಗ​ರ​ದಲ್ಲಿ ರಾಮ ಮಂದಿರ ನಿರ್ಮಾಣ ಮಾಡಿ ಉದ್ಘಾ​ಟನೆ ಮಾಡ​ಬ​ಹು​ದಿತ್ತು. ಆದ​ರೀಗ ಚುನಾ​ವಣೆ ಕಾರ​ಣಕ್ಕೆ ರಾಮ ಮಂದಿರ ವಿಚಾರ ಪ್ರಸ್ತಾ​ಪಿ​ಸು​ತ್ತಿ​ದ್ದಾರೆ ಎಂದ​ರು.

ಚುನಾವಣೆ ಸಮೀಪ ಇರುವುದರಿಂದ ರಾಮ ಮಂದಿರ ಹೆಸರಿನಲ್ಲಿ ಜನರ ಬಳಿ ಮತ ಪಡೆಯಲು ಬಿಜೆಪಿ ಹೊರಟಿದೆ. ಜತೆಗೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಜನರ ನಡುವೆ ಸಂಘರ್ಷವನ್ನುಂಟು ಮಾಡುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಹಿಂದು ಮತ್ತು ಮುಸ್ಲಿಂರು ಸಹೋದರರಂತೆ ಜೀವನ ಸಾಗಿಸುತ್ತಿದ್ದಾರೆ. ಆದರೆ, ಬಿಜೆಪಿಯು ಹಿಂದುಗಳನ್ನು ಮತ್ತು ಹಿಂದುತ್ವವನ್ನು ಗುತ್ತಿಗೆ ಪಡೆದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದುಗಳ ಹೆಸರಿನಲ್ಲಿ ಆಡಳಿತ ಪಕ್ಷವೂ ಜನರನ್ನು ತಾತ್ಕಲಿಕವಾಗಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಇದು ಹೆಚ್ಚು ದಿನ ನಡೆಯುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಅವರಿಗೆ ನೆನ್ನೆ ಮೊನ್ನೆ ರಾಮನಗರದಲ್ಲಿ ಗೊತ್ತಾಗಿದೆ. ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಕಳೆದ 30 ವರ್ಷಗಳಿಂದ ರಾಮನಗರ ಜಿಲ್ಲೆಯಲ್ಲಿಯೇ ಇದ್ದಾರೆ. ಜೊತೆಗೆ, ರಾಮನಗರವನ್ನು ಜಿಲ್ಲೆಯನ್ನಾಗಿಸಿದ್ದೇ ಕುಮಾರಸ್ವಾಮಿ ಅವರು ಎಂಬು​ದನ್ನು ಮರೆ​ಯ​ಬಾ​ರದು ಎಂದು ಸಚಿವ ಅಶ್ವತ್ಥ ನಾರಾ​ಯಣ ಹೇಳಿ​ಕೆಗೆ ತಿರು​ಗೇಟು ನೀಡಿ​ದ​ರು.

ಮಂಡ್ಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾರ‍ಯಲಿ ಕುರಿತು ಪ್ರತಿಕ್ರಿಯಿಸಿದ ನಿಖಿಲ… ಕುಮಾರಸ್ವಾಮಿ, ಜನರು ಕಷ್ಟಎಂದಾಗ ಯಾವ ನಾಯಕರು ಸ್ಪಂದಿಸಿದ್ದಾರೆ? ಯಾವ ಪಕ್ಷದ ನಾಯಕರು ಬಂದು ಕ್ಷೇತ್ರದ ಜನರ ಕಷ್ಟಕೇಳಿದ್ದಾರೆ ಎಂಬ ವಿಷಯ ಜನರ ಮನಸ್ಸಿನಲಿದೆ. ಹ​ಳೇ ಮೈಸೂರು ಭಾಗದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ಕೈ ಹಿಡಿಯುವ ಕೆಲಸವನ್ನು ಜನರು ಮಾಡಿದ್ದಾರೆ. ಆದರೆ, ಅಮಿತ್‌ ಶಾ ಅವರಿಗೆ ರಾಜ್ಯ ಬಿಜೆಪಿ ನಾಯಕರು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ತಿಳಿದು ಅಮಿತ್‌ ಶಾ ಮಾತ​ನಾ​ಡ​ಬೇಕು. ಪ್ರಧಾನಿ ನರೇಂದ್ರ ಮೋದಿ ಅವರೇ ದೇವೇಗೌಡರನ್ನು ಪ್ರೀತಿಯಿಂದ ಕಾಣುತ್ತಾರೆ. ಅಮಿತ್‌ ಶಾ ಅವರು ರಾಜಕೀಯ ಮಾಡಲಿ. ಆದರೆ, ಅವರ ವಿರುದ್ಧ ಮಾತನಾಡುವುದನ್ನು ಕರ್ನಾಟಕದ ಜನರು ಒಪ್ಪುವುದಿಲ್ಲ ಎಂದು ಹೇಳಿದರು.

ಚುನಾವಣೆ ಸಮಯದಲ್ಲಿ ಪ್ರತಿ ಕ್ಷೇತ್ರದಲ್ಲೂ ಗೆಲುವು ಸಾಧಿಸಲು ಹೋರಾಟ ಮಾಡುತ್ತೇವೆ. ಜೆಡಿಎಸ್‌ ಪಕ್ಷಕ್ಕೆ ಕಾರ್ಯಕರ್ತರೆ ಆಸರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ಕುಮಾರಸ್ವಾಮಿ ಅವರು ಮತ್ತೇ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತ​ಪ​ಡಿ​ಸಿ​ದರು.

ಜೆಡಿ​ಎಸ್‌ ತಾಲೂಕು ಅಧ್ಯಕ್ಷ ರಾಜ​ಶೇ​ಖರ್‌, ವಕ್ತಾರ ಉಮೇಶ್‌, ಮುಖಂಡ​ರಾದ ರೈಡ್‌ ನಾಗ​ರಾಜ್‌, ರವಿ, ದೊರೆ​ಸ್ವಾಮಿ, ವಕೀಲ ರಾಜ​ಶೇ​ಖರ್‌ ,

--------------------

3ಕೆಆರ್‌ ಎಂಎನ್‌ 1.ಜೆ​ಪಿಜಿ

ರಾಮನಗ​ರದ ಉಮೇಶ್‌ ಆಟೋ ಗ್ಯಾಸ್‌ ಫಿಲ್ಲಿಂಗ್‌ ಸ್ಟೇಷನ್‌ನಲ್ಲಿ ನಿಖಿಲ್‌ ಕುಮಾ​ರ​ಸ್ವಾ​ಮಿ​ ಆಟೋ ಚಾಲ​ಕ​ರಿಗೆ ಸಮ​ವಸ್ತ್ರ ವಿತ​ರಿಸಿದರು.

----------------------

Follow Us:
Download App:
  • android
  • ios