Asianet Suvarna News Asianet Suvarna News

ರೇಷ್ಮೆ ಬೆಳೆದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬಹುದು

ಇಲಾಖೆಯವರ ಮಾರ್ಗದರ್ಶನ ಪಡೆದು ತಾಂತ್ರಿಕತೆ ಅಳವಡಿಸಿಕೊಂಡು ರೇಷ್ಮೆ ಬೆಳೆಯನ್ನು ಬೆಳೆದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬಹುದು ಎಂದು ಕೇಂದ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ವಿಜ್ಞಾನಿ ಮೀನಾಳ್‌ ಹೇಳಿದರು.

If you grow silk, you can earn more income at less cost snr
Author
First Published Feb 8, 2023, 6:11 AM IST

  ಕೆ.ಆರ್‌. ನಗರ :  ಇಲಾಖೆಯವರ ಮಾರ್ಗದರ್ಶನ ಪಡೆದು ತಾಂತ್ರಿಕತೆ ಅಳವಡಿಸಿಕೊಂಡು ರೇಷ್ಮೆ ಬೆಳೆಯನ್ನು ಬೆಳೆದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬಹುದು ಎಂದು ಕೇಂದ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ವಿಜ್ಞಾನಿ ಮೀನಾಳ್‌ ಹೇಳಿದರು.

ಸಾಲಿಗ್ರಾಮ ತಾಲೂಕಿನ ದಮ್ಮನಹಳ್ಳಿ ಗ್ರಾಮದಲ್ಲಿ ನಡೆದ ರೇಷ್ಮೆ ದ್ವಿತಳಿ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ಈ ಬೆಳೆಯು ಉತ್ತಮ ಆದಾಯ ತರುವುದಾಗಿದ್ದು, ಇತರ ಬೆಳೆಗಳ ಜತೆಗೆ ಬೆಳೆದು ಆರ್ಥಿಕವಾಗಿ ಅಭಿವೃದ್ದಿ ಹೊಂದಬಹುದು ಎಂದರು.

ರೇಷ್ಮೆ ಹುಳುಗಳಿಗೆ ತಗಲುವ ರೋಗ ಮತ್ತು ಅದರ ಹತೋಟಿಗೆ ಅನುಸರಿಸಬಹುದಾದ ಕ್ರಮಗಳ ಬಗ್ಗೆ ರೈತರಿಗೆ ಸವಿಸ್ತಾರವಾದ ಮಾಹಿತಿ ನೀಡಿದ ಅವರು, ಬೆಳೆಗಾರರು ನಿಯಮಿತವಾಗಿ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳು ಮತ್ತು ತಜ್ಞರ ಮಾರ್ಗದರ್ಶನ ಪಡೆಯಬೇಕೆಂದು ಸಲಹೆ ನೀಡಿದರು.

ಕುದೇರು ರೇಷ್ಮೆ ತರಬೇತಿ ಸಂಸ್ಥೆಯ ಸಹಾಯಕ ನಿರ್ದೇಶಕ ನಾಗರಾಜು ಮಾತನಾಡಿ, ಹಿಪ್ಪುನೇರಳೆ ತೋಟ ನಿರ್ವಹಣೆ ಮತ್ತು ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಅನುಸರಿಸಬಹುದಾದ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ಕೆ.ಆರ್‌. ನಗರ ತಾಲೂಕು ರೇಷ್ಮೆ ಸಹಾಯಕ ನಿರ್ದೇಶಕ ಎಂ. ಶಿವಮೂರ್ತಿ ಮಾತನಾಡಿ, ಸರ್ಕಾರದ ವತಿಯಿಂದ ಬೆಳೆಗಾರರಿಗೆ ದೊರೆಯುವ ಸವಲತ್ತು ಹಾಗೂ ಅವುಗಳನ್ನು ಪಡೆಯುವ ಮಾರ್ಗದ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಮಾಯಗೌಡನಹಳ್ಳಿ ಗ್ರಾಪಂ ಉಪಾಧ್ಯಕ್ಷ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಸ್ಯರಾದ ರಾಣಿಗಣೇಶ್‌, ಸ್ವಾಮೀಗೌಡ, ಗ್ರಾಮದ ಮುಖಂಡರಾದ ದಾಸೇಗೌಡ, ನಿಂಗೇಗೌಡ, ರೇಷ್ಮೆ ವಿಸ್ತರಣಾಧಿಕಾರಿ ಕೆ.ಎಂ. ರವೀಶ್‌ಕುಮಾರ್‌, ರೇಷ್ಮೆ ನೀರೀಕ್ಷಕಿ ಎಸ್‌. ಆತ್ಮರಾಗಿಣಿ ಮತ್ತು ರೈತರು ಇದ್ದರು.

ಜಾಗ​ತಿಕ ಮಾರು​ಕಟ್ಟೆ ಸೃಷ್ಟಿ​ಸುವ ಕಾರ್ಯ

  ದೇಶ​ದಲ್ಲಿ ಬೇಡಿ​ಕೆಗೆ ಅನು​ಗು​ಣ​ವಾಗಿ ರೇಷ್ಮೆ ಉತ್ಪಾ​ದನೆಯಾಗದ ಕಾರಣ ಆತ್ಮ​ನಿ​ರ್ಭರ್‌ ಭಾರತ್‌ ಅಭಿ​ಯಾ​ನದಲ್ಲಿ ರೇಷ್ಮೆ ಉತ್ಪಾ​ದನೆ ಹೆಚ್ಚಿಸಿ ನೇಕಾ​ರಿಕೆ ಮಾರು​ಕಟ್ಟೆವಲಯ ಬಲಿಷ್ಠಗೊಳಿ​ಸುವು​ದರ ಜತೆಗೆ ರೇಷ್ಮೆ ರಫ್ತು ವಲಯವನ್ನು ಮತ್ತಷ್ಟು ಸ್ಪರ್ಧಾ​ತ್ಮ​ಕ​ಗೊ​ಳಿ​ಸಿ ಜಾಗ​ತಿಕ ಮಾರು​ಕಟ್ಟೆ ಸೃಷ್ಟಿ​ಸುವ ಕಾರ್ಯ ನಡೆ​ಯು​ತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವೆ ದರ್ಶನ ಜರ್ದೋಶ್‌ ಹೇಳಿ​ದರು. ನಗ​ರದ ರೇಷ್ಮೆಗೂಡು ಮಾರು​ಕ​ಟ್ಟೆಗೆ ಭೇಟಿ ನೀಡಿ ರೇಷ್ಮೆ ಗೂಡು ಪೂರೈಕೆ, ಬೆಳೆ​ಗಾ​ರ​ರಿಗೆ ಹಣ ಪಾವ​ತಿ ವಿಧಾನ ಹಾಗೂ ಗೂಡಿನ ಗುಣ​ಮಟ್ಟಪರಿ​ಶೀ​ಲನೆ ವೀಕ್ಷಿ​ಸಿದ ಬಳಿಕ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ದೇಶೀಯ ರೇಷ್ಮೆ ನೇಕಾರಿಕೆ ಮಾರುಕಟ್ಟೆವಲಯವನ್ನು ಮತ್ತಷ್ಟುಬಲಿಷ್ಠಗೊಳಿಸಿ, ರೇಷ್ಮೆ ರಫ್ತು ವಲಯ ಹೆಚ್ಚು ಸ್ಪರ್ಧಾತ್ಮಕಗೊಳ್ಳು​ವಂತೆ ಮಾಡ​ಲಾ​ಗು​ತ್ತಿದೆ ಎಂದ​ರು.

ಇಡೀ ಪ್ರಪಂಚ​ದಲ್ಲಿ ರೇಷ್ಮೆಗೆ ತುಂಬಾ ಬೇಡಿಕೆ ಇದೆ. ದೇಶ​ದ​ಲ್ಲಿಯೇ ಕರ್ನಾ​ಟಕ ರಾಜ್ಯ ರೇಷ್ಮೆ ಉತ್ಪಾ​ದ​ನೆ​ಯಲ್ಲಿ ಮೊದಲ ಸ್ಥಾನ​ದ​ಲ್ಲಿದೆ. ಆದರೆ, ಒಟ್ಟಾರೆ ಕೃಷಿ​ ಉತ್ಪಾ​ದ​ನೆ​ಯೊಂದಿಗೆ ತುಲನೆ ಮಾಡಿದರೆ ಶೇ.1ರಷ್ಟು ಮಾತ್ರ ಇದೆ. ಪ್ರಪಂಚ​ದ​ಲ್ಲಿಯೇ ಭಾರತ ರೇಷ್ಮೆ ಉತ್ಪಾ​ದ​ನೆ​ಯಲ್ಲಿ ಮುಂಚೂ​ಣಿ​ಯಲ್ಲಿ ಇರ​ಬೇ​ಕೆಂಬುದು ಬಯಕೆ. ಆದ್ದ​ರಿಂದ ಆತ್ಮ​ನಿ​ರ್ಭರ್‌ ಭಾರತ್‌ ಅಭಿ​ಯಾ​ನ​ದಡಿ ಜಮ್ಮು​ಕಾ​ಶ್ಮೀರ, ಉತ್ತ​ರಾಖಂಡದಂತಹ ರಾಜ್ಯ​ಗ​ಳಲ್ಲಿಯೂ ರೇಷ್ಮೆ ಬೆಳೆಗೆ ಉತ್ತೇ​ಜನ ನೀಡುವ ಕೆಲ​ಸ​ ನಿರಂತ​ರ​ವಾಗಿ ನಡೆ​ಯು​ತ್ತಿದೆ ಎಂದು ಹೇಳಿ​ದರು. ಕರ್ನಾ​ಟ​ಕ​ ರೇಷ್ಮೆ​ಯಲ್ಲಿ 9 ಬೆಳೆ ತೆಗೆ​ಯು​ತ್ತಿದೆ. ಉತ್ಪಾ​ದನೆ ಚೆನ್ನಾಗಿದೆ. 

ದರೆ, ಜಮ್ಮು​ಕಾ​ಶ್ಮೀ​ರ​ದಲ್ಲಿ ಚಳಿಯ ಕಾರಣ ಕೇವಲ 1 ಬೆಳೆ ಮಾತ್ರ ತೆಗೆ​ಯ​ಲಾ​ಗು​ತ್ತಿದೆ. ಅಲ್ಲಿಯೂ ಒಂದ​ಕ್ಕಿಂತ ಹೆಚ್ಚಿನ ಬೆಳೆ ತೆಗೆಯಲು ಬೇಕಾದ ವಿಧಾನ ಅನು​ಸ​ರಿ​ಸುವ ಪ್ರಯ​ತ್ನ​ಗ​ಳಿಗೆ ಸಂಶೋ​ಧ​ನೆ​ಗಳು ನಡೆ​ಯು​ತ್ತಿ​ವೆ. ಮನರೇಗಾ ಬಳ​ಸಿ​ಕೊಂಡು ರೇಷ್ಮೆ ಬೆಳೆ​ಯಲ್ಲಿ ಪ್ರಗತಿ ಸಾಧಿ​ಸುವ ಪ್ರಯ​ತ್ನ​ಗಳು ನಡೆ​ಯು​ತ್ತಿವೆ. ಅಸ್ಸಾಂನಲ್ಲಿ ಆದಿ​ವಾ​ಸಿ​ ರೈತ​ರಿಂದ ರೇಷ್ಮೆ ಉತ್ಪಾ​ದನೆ ಮಾಡಿಸಿ ಸರ್ಕಾ​ರವೇ ನೇರ​ವಾಗಿ ಖರೀದಿ ಮಾಡುತ್ತಿದೆ. ಜಪಾನ್‌ನಂತಹ ದೇಶ​ಗ​ಳಲ್ಲಿ ಸಿಲ್ಕ್‌ ಮೆಟಿ​ರಿ​ಯಲ್‌ಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಸೀರೆ ಮಾತ್ರ​ವ​ಲ್ಲದೆ ಫ್ಯಾಬ್ರಿಕ್‌ ಮೇಲೂ ಹೆಚ್ಚಿನ ಗಮನ ಹರಿ​ಸ​ಲಾ​ಗು​ತ್ತಿದೆ ಎಂದು ತಿಳಿಸಿ​ದ​ರು.

Follow Us:
Download App:
  • android
  • ios