Asianet Suvarna News Asianet Suvarna News

ಲಾಕ್‌ಡೌನ್‌ ಎಫೆಕ್ಟ್‌: ಹುಬ್ಬಳ್ಳಿ ಸಾರಿಗೆ ವಿಭಾಗಕ್ಕೆ 23 ಕೋಟಿ ನಷ್ಟ!

ಏಪ್ರಿಲ್‌ ತಿಂಗಳಲ್ಲಿ 17.50 ಕೋಟಿ ಆದಾಯ ನಷ್ಟ| ಹುಬ್ಬಳ್ಳಿ ವಿಭಾಗದಲ್ಲಿ ನಾಲ್ಕು ಬಸ್‌ ಘಟಕಗಳಲ್ಲಿ ಒಟ್ಟು 462 ಬಸ್‌ಗಳು ಹಾಗೂ 2173 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ| ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದ್ದರೂ ಬಸ್‌ಗಳ ತುರ್ತು ನಿರ್ವಹಣೆ ನಿರಂತರವಾಗಿ ನಡೆಯುತ್ತಿದೆ|

Hubballi Transport Department lost Rs 23 crore due to LockDown
Author
Bengaluru, First Published May 6, 2020, 7:15 AM IST

ಹುಬ್ಬಳ್ಳಿ(ಮೇ.06): ಲಾಕ್‌ಡೌನ್‌ ಪರಿಣಾಮದಿಂದ ಕಳೆದೆರಡು ತಿಂಗಳು ಸೇರಿ ವಾಯವ್ಯ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗಕ್ಕೆ 23 ಕೋಟಿ ಸಾರಿಗೆ ಆದಾಯ ನಷ್ಟವಾಗಿದೆ!

ಹುಬ್ಬಳ್ಳಿ ವಿಭಾಗದಲ್ಲಿ ನಾಲ್ಕು ಬಸ್‌ ಘಟಕಗಳಲ್ಲಿ ಒಟ್ಟು 462 ಬಸ್‌ಗಳು ಹಾಗೂ 2173 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ವಿಭಾಗದ ಬಸ್‌ಗಳು ಪ್ರತಿದಿನ 1.90 ಲಕ್ಷ ಕಿಮೀ ಕ್ರಮಿಸಿ ವಿವಿಧ ರಿಯಾಯಿತಿ ಪಾಸು ಪ್ರಯಾಣಿಕರು ಸೇರಿ 1.45 ಲಕ್ಷಗಳಷ್ಟು ಸಾರ್ವಜನಿಕ ಪ್ರಯಾಣಿಕರು ಹಾಗೂ 45 ಸಾವಿರಗಳಷ್ಟು ವಿದ್ಯಾರ್ಥಿಗಳಿಗೆ ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಸಂಸ್ಥೆಗೆ  45 ರಿಂದ 50 ಲಕ್ಷ ಸಾರಿಗೆ ಆದಾಯ ಸಂಗ್ರಹಣೆ ಆಗುತ್ತಿತ್ತು.

ರೋಣದಲ್ಲಿ ದೃಢಪಟ್ಟ ಮಹಾಮಾರಿ ಕೊರೋನಾ: ಹುಬ್ಬಳ್ಳಿಯಲ್ಲಿ ಆತಂಕ

ಕಳೆದ ಮಾ. 9ರ ವರೆಗೆ ಬಸ್‌ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿರಲಿಲ್ಲ. ಹೀಗಾಗಿ ನಿರಂತರ ಆದಾಯವಿತ್ತು. ಬಳಿಕ ಕೊರೋನಾ ಸುದ್ದಿ ಹಬ್ಬಿದ ಪರಿಣಾಮ ಮತ್ತು ಹೋಳಿ ಕಾರಣ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಕುಸಿಯತೊಡಗಿತು. ಹೀಗಾಗಿ ಏ. 22ರ ವರೆಗೆ ಬಸ್‌ಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಕಡಿಮೆ ಮಾಡಬೇಕಾಯಿತು. ಮಾ. 23ರಿಂದ ಶೂನ್ಯಕ್ಕಿಳಿಯಿತು. ಮಾಚ್‌ರ್‍ ತಿಂಗಳಲ್ಲಿ ಭಾಗಶಃ ಬಸ್‌ ಕಾರ್ಯಾಚರಣೆ ಆಗಿದ್ದು, ನಿರೀಕ್ಷಿತ ಸಾರಿಗೆ ಆದಾಯದಲ್ಲಿ 5.50 ಕೋಟಿ ಕೊರತೆ ಉಂಟಾಗಿತ್ತು. ಆದರೆ, ಏಪ್ರಿಲ್‌ ತಿಂಗಳಲ್ಲಿ ಯಾವುದೇ ಬಸ್‌ ರಸ್ತೆಗಿಳಿಯದ ಕಾರಣ 17.50 ಕೋಟಿ ಆದಾಯ ನಷ್ಟಉಂಟಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ್‌ ತಿಳಿಸಿದ್ದಾರೆ.

ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದ್ದರೂ ಬಸ್‌ಗಳ ತುರ್ತು ನಿರ್ವಹಣೆ ನಿರಂತರವಾಗಿ ನಡೆಯುತ್ತಿದೆ. ವಿಭಾಗೀಯ ಕಚೇರಿ ಹಾಗೂ ಘಟಕ ಪೆಟ್ರೋಲಿಂಗ್‌ ತಂಡದ ಅಧಿಕಾರಿಗಳು ಪ್ರತಿದಿನ ಎಲ್ಲ ಘಟಕಗಳು ಮತ್ತು ಪ್ರಮುಖ ಬಸ್‌ ನಿಲ್ದಾಣಗಳ ಗಸ್ತು ತೆರೆದುಕೊಳ್ಳುತ್ತಿದ್ದಾರೆ. ಘಟಕದಲ್ಲೂ ತುರ್ತು ನಿರ್ವಹಣಾ ತಂಡದಲ್ಲಿ ಮೂರು ಪಾಳಿಯಲ್ಲಿ ಇಬ್ಬರು-ಮೂವರಂತೆ ಚಾಲಕರು, ತಾಂತ್ರಿಕ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ನಿರಂತರವಾಗಿ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದಾರೆ.

ಸಾರ್ವಜನಿಕ ಸಾರಿಗೆ ಪುನರಾರಂಭಿಸಲು ಸರ್ಕಾರದ ಆದೇಶ ಬಂದ ಕೂಡಲೆ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ಬಸ್ಸುಗಳನ್ನು ರಸ್ತೆಗಿಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios