ತೀರ್ಥಹಳ್ಳಿ - ಉಡುಪಿ ರಾಷ್ಟ್ರೀಯ ಹೆದ್ದಾರಿ 169ಎ ಇದರ ಆಗುಂಬೆ ಘಾಟಿಯಲ್ಲಿ ಹೆಚ್ಚಿನ ಭಾರದ ವಾಹನಗಳ ಸಂಚಾರವನ್ನು ಜೂ. 15ರಿಂದ ಅಕ್ಟೊಬರ್‌ 15ರವರೆಗೆ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಓದಿ

ಉಡುಪಿ(ಜೂ.20): ತೀರ್ಥಹಳ್ಳಿ - ಉಡುಪಿ ರಾಷ್ಟ್ರೀಯ ಹೆದ್ದಾರಿ 169ಎ ಇದರ ಆಗುಂಬೆ ಘಾಟಿಯಲ್ಲಿ 12 ಟನ್‌ಗಿಂತ ಹೆಚ್ಚಿನ ಭಾರದ ವಾಹನಗಳ ಸಂಚಾರವನ್ನು ಜೂ. 15ರಿಂದ ಅಕ್ಟೊಬರ್‌ 15ರವರೆಗೆ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಗುಂಬೆ ಘಾಟಿಯು ಅಗಲ ಕಿರಿದಾಗಿದ್ದು, ಅದರ ಕ್ಷಮತೆ ಕ್ಷೀಣಿಸುತ್ತಿದೆ. ಮಳೆಗಾಲದಲ್ಲಿ ಈ ಘಾಟಿಯಲ್ಲಿ ಭಾರಿ ಸರಕು ಸಾಗಣೆ ವಾಹನಗಳು ಸಂಚರಿಸುವುದರಿಂದ ಇಕ್ಕೆಲಗಳಲ್ಲಿ ಮಣ್ಣು ಕುಸಿಯುವ, ಅಪಘಾತಗಳಾಗುವ ಸಾಧ್ಯತೆ ಇದೆ.

ಗಡಿನಾಡ ಶಾಲಾ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್: ಶಿಕ್ಷಣದಲ್ಲೂ ಕೇರಳ ಮಾಡೆಲ್‌ ಯತ್ನ!

ಈ ಹಿನ್ನೆಲೆಯಲ್ಲಿ ಪೊಲೀಸ್‌ ಅಧೀಕ್ಷಕ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಲಹೆಯಂತೆ ಈ ಘಾಟಿಯಲ್ಲಿ ಮಳೆಗಾಲದ ಈ 4 ತಿಂಗಳ ಅವಧಿಯಲ್ಲಿ 12 ಟನ್‌ ಗಿಂತ ಜಾಸ್ತಿ ಭಾರದ ವಾಹನಗಳ ಸಂಚಾರವನ್ನು ನಿಷೇಧಿಸಿದ್ದಾರೆ.

ದಕ್ಷಿಣ ಕನ್ನಡ​ದಲ್ಲಿ 206 ಮಂದಿ ಕೊರೋನಾ ಗುಣಮುಖರು ಬಿಡುಗಡೆ

ಅಲ್ಲದೆ ಈ ವಾಹನಗಳನ್ನು ಉಡುಪಿ - ಬ್ರಹ್ಮಾವರ - ಬಾರ್ಕೂರು - ಶಂಕರನಾರಾಯಣ - ಸಿದ್ಧಾಪುರ - ಹೊಸಂಗಡಿ - ಹುಲಿಕಲ್‌ ಘಾಟಿ - ಹೊಸನಗರ - ತೀರ್ಥಹಳ್ಳಿ ಮೂಲಕ ಅಥವಾ ಉಡುಪಿ - ಕಾರ್ಕಳ - ಬಜಗೋಳಿ - ಎಸ್‌.ಕೆ.ಬಾರ್ಡರ್‌ - ಕೆರೆಕಟ್ಟೆ- ಶೃಂಗೇರಿ - ಶಿವಮೊಗ್ಗ ಮಾರ್ಗದಲ್ಲಿ ಸಂಚರಿಬಹುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.