Asianet Suvarna News Asianet Suvarna News

ಮೈತ್ರಿ ಸರ್ಕಾರ ಪತ​ನ​ಕ್ಕೆ ಎಚ್ಡಿಕೆ ಕಾರಣ : ರೇವಣ್ಣ

ಎಚ್.ಡಿ ಕುಮಾರಸ್ವಾಮಿ ಅವರೇ ಮೈತ್ರಿ ಸರ್ಕಾರ ಪತನವಾಗಲು ಕಾರಣ ಎಂದು ರೇವಣ್ನ ಆರೋಪ ಮಾಡಿದ್ದಾರೆ.

HD Kumaraswamy Behind JDS Congress Allians Loss power HM Revanna
Author
Bengaluru, First Published Aug 29, 2019, 3:30 PM IST

ರಾಮ​ನ​ಗರ [ಆ.29]:  ಜೆಡಿ​ಎಸ್‌ - ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತ​ನ​ಗೊ​ಳ್ಳಲು ಕುಮಾ​ರ​ಸ್ವಾಮಿ ಅವರ ಸ್ವಯಂಕೃತ ಅಪ​ರಾಧ ಕಾರ​ಣವೇ ಹೊರತು ಮಾಜಿ ಸಿಎಂ ಸಿದ್ದ​ರಾ​ಮಯ್ಯ ಕಾರ​ಣ​ಕ​ರ್ತ​ರಲ್ಲ ಎಂದು ಮಾಜಿ ಪ್ರಧಾನಿ ದೇವೇ​ಗೌ​ಡ​ರ​ವರ ಟೀಕೆಗೆ ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ. ​ರೇ​ವಣ್ಣ ತಿರು​ಗೇಟು ನೀಡಿ​ದರು.

ಬುಧ​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಮುಖ್ಯ​ಮಂತ್ರಿ​ಗ​ಳಾ​ದ​ವರು ಜೆಡಿ​ಎಸ್‌ - ಕಾಂಗ್ರೆಸ್‌ ಪಕ್ಷ​ಗಳ ತತ್ವ ಸಿದ್ಧಾಂತ ಹಾಗೂ ಮೈತ್ರಿ ಧರ್ಮಪಾಲನೆ ಮಾಡ​ಬೇ​ಕಾ​ಗಿತ್ತು. ಇದ್ಯಾ​ವು​ದನ್ನು ಕುಮಾ​ರ​ಸ್ವಾಮಿ ಪಾಲಿ​ಸಲೇ ಇಲ್ಲ. ಈ ವಿಚಾ​ರ​ದಲ್ಲಿ ವ್ಯತ್ಯಾ​ಸ​ಗ​ಳಾಗಿ ಮೈತ್ರಿ ಸರ್ಕಾರ ಪತ​ನ​ಗೊಂಡಿತು ಎಂದರು.

ಮನವಿಗೆ ಸ್ಪಂದಿಸಲಿಲ್ಲ: ಚನ್ನ​ಪ​ಟ್ಟಣ ಕ್ಷೇತ್ರ​ದಲ್ಲಿ ಕುಮಾ​ರ​ಸ್ವಾಮಿ ವಿರುದ್ಧ ಕಾಂಗ್ರೆಸ್‌ ಅಭ್ಯ​ರ್ಥಿ​ಯಾಗಿ ನಾನೇ ಸ್ಪರ್ಧೆ ಮಾಡಿದ್ದೆ. ಅದನ್ನು ಪರಿ​ಗ​ಣಿ​ಸದ ಕುಮಾ​ರ​ಸ್ವಾಮಿ ಅವರು ನಾನು ಭೇಟಿ ಮಾಡಿ​ದಾ​ಗ​ಲೆಲ್ಲ ಆತ್ಮೀ​ಯ​ವಾ​ಗಿಯೇ ನಡೆ​ದು​ಕೊ​ಳ್ಳು​ತ್ತಿ​ದ್ದರು. ನಾನೇ ಖುದ್ದಾಗಿ ಎರಡು ಮೂರು ಭೇಟಿ​ಯಾಗಿ ಮನವಿ ಮಾಡಿದ್ದ ಒಂದೇ ಒಂದು ಕೆಲ​ಸ​ವನ್ನು ಕುಮಾ​ರ​ಸ್ವಾಮಿ ಮಾಡಲೇ ಇಲ್ಲ.

ಕಾಗಿ​ನೆಲೆ ಪ್ರಾಧಿ​ಕಾರ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಾಧಿ​ಕಾ​ರದ ಅಧ್ಯ​ಕ್ಷರು ಮುಖ್ಯ​ಮಂತ್ರಿ​ಗಳೇ ಆಗಿ​ದ್ದಾರೆ. ಪ್ರಾಧಿ​ಕಾ​ರದ ಕ್ರಿಯಾ​ಯೋ​ಜನೆ ಸಿದ್ಧ​ಪ​ಡಿ​ಸು​ವಂತೆ ಮನವಿ ಮಾಡಿ​ದರು ಸ್ಪಂದಿ​ಸ​ಲಿಲ್ಲ. ಕುಮಾ​ರ​ಸ್ವಾಮಿ ಅವರ ಇಂತಹ ಬೇಜ​ವಾ​ಬ್ದಾರಿ ನಡ​ವ​ಳಿ​ಕೆ​ಗಳಿಗೆ ಅನೇಕ ಉದಾ​ಹ​ರ​ಣೆ​ಗ​ಳಿವೆ ಎಂದು ಕಿಡಿ​ಕಾ​ರಿ​ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೋಸ್ತಿ ಸರ್ಕಾರ ಅಧಿ​ಕಾ​ರ​ದಲ್ಲಿ ಇರು​ವಾಗ ಮುಖ್ಯ​ಮಂತ್ರಿ​ಗಳು ಉಭಯ ಪಕ್ಷ​ಗಳ ಶಾಸ​ಕರು ಹಾಗೂ ಸಚಿ​ವ​ರು​ಗಳಿಗೆ ಸಮಾನ ಪ್ರಮಾ​ಣದಲ್ಲಿ ಅನು​ದಾನ ಹಂಚಿಕೆ ಮಾಡ​ಬೇಕು. ಆದರೆ, ಜೆಡಿ​ಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ಸಚಿ​ವರಿಗೆ ಅನು​ದಾನ ಬಿಡು​ಗಡೆಯಲ್ಲಿ ತಾರ​ತಮ್ಯ ಮಾಡ​ಲಾ​ಗಿದೆ. ಅಲ್ಲದೆ, ಬಿಜೆಪಿ ಶಾಸ​ಕ​ರಿಗೆ ಹೆಚ್ಚು ವಿಶೇಷ ಅನು​ದಾನ ನೀಡಿ​ದ್ದಾರೆ.

ಮೈತ್ರಿ ಧರ್ಮ​ದ​ಲ್ಲಿ​ರುವ ಶಾಸ​ಕ​ರಿಗೆ ಅನು​ದಾನ ಬಿಡು​ಗಡೆ ಮಾಡ​ದಿ​ದ್ದಾಗ ಯಾರನ್ನು ಪ್ರಶ್ನೆ ಮಾಡ​ಬೇಕು. ಅನು​ದಾನ ಹಾಗೂ ಅಧಿ​ಕಾರ ಹಂಚಿ​ಕೆ​ಯಲ್ಲಿ ಕುಮಾ​ರ​ಸ್ವಾಮಿ ನಡೆ​ದು​ಕೊಂಡ ನಡ​ವ​ಳಿ​ಕೆ​ಗಳು ಯಾರೂ ಒಪ್ಪು​ವಂತ​ಹ​ದಲ್ಲ ಎಂದು ರೇವಣ್ಣ ಹೇಳಿ​ದರು.

ಹಿಂದಿ​ನಿಂದಲೂ ಚುನಾ​ವ​ಣೆ​ಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿ​ಎಸ್‌ ವಿರೋ​ಧ​ವಾಗಿ ಸ್ಪರ್ಧೆ ಮಾಡು​ತ್ತಲೇ ಬಂದಿ​ದ್ದವು. ಕೋಮು​ವಾದಿ ಪಕ್ಷ​ವನ್ನು ದೂರ​ವಿ​ಡುವ ಉದ್ದೇ​ಶ​ದಿಂದ ರಾಷ್ಟ್ರ ನಾಯ​ಕರ ಅಪೇ​ಕ್ಷೆ​ಯಂತೆ ಜಾತ್ಯ​ತೀತ ಶಕ್ತಿ​ಗಳು ಒಗ್ಗೂಡಿ ಮೈತ್ರಿ ಸರ್ಕಾರ ರಚನೆ ಮಾಡ​ಲಾ​ಯಿ​ತು. ಎರಡು ಪಕ್ಷ​ಗಳ ಹಿರಿಯ ನಾಯ​ಕರು ಒಂದಾ​ದರು ಸಹ ಕಾರ್ಯ​ಕ​ರ್ತರು ಮಾತ್ರ ಒಂದಾ​ಗಲೇ ಇಲ್ಲ. ಇದು ಸರ್ಕಾ​ರ​ದಲ್ಲಿ ಬಿರುಕು ಮೂಡಲು ಪ್ರಮುಖ ಕಾರ​ಣ ಎಂದ​ರು.

ಯಾರು ಹೊಣೆ: ಅನರ್ಹ ಶಾಸ​ಕ​ರಲ್ಲಿ ಕೆಲ​ವರು ಸಿದ್ದ​ರಾ​ಮಯ್ಯ ಅವ​ರೊಂದಿಗೆ ಗುರು​ತಿ​ಸಿ​ಕೊಂಡ​ವರು ಇರ​ಬ​ಹುದು. ಆದರೆ, ರಮೇಶ್‌ ಜಾರ​ಕಿ​ಹೊಳಿ, ಮುನಿ​ರತ್ನ, ಎಸ್‌.ಟಿ.​ ಸೋ​ಮ​ಶೇಖರು ಅವ​ರೆ​ಲ್ಲ ಕಾಂಗ್ರೆಸ್‌ನಲ್ಲಿಯೇ ಇದ್ದ​ವರು. ಅವ​ರೆ​ಲ್ಲರು ಸಿದ್ದ​ರಾ​ಮ​ಯ್ಯ​ರ​ವರ ಮಾತು ಕೇಳಿ ಹೋದ​ರಂದು ಹೇಳಿ​ದರೆ ನಂಬ​ಲು​ಸಾ​ಧ್ಯವೇ? ಹಾಗಾ​ದರೆ ಜೆಡಿ​ಎಸ್‌ ರಾಜ್ಯಾ​ಧ್ಯ​ಕ್ಷ​ರಾ​ಗಿದ್ದ ಎಚ್‌ .ವಿ​ಶ್ವ​ನಾಥ್‌, ಕೆ.ಸಿ.​ನಾ​ರಾ​ಯ​ಣ​ಗೌಡ ಹಾಗೂ ದೇವೇ​ಗೌ​ಡರ ಮನೆ​ಮ​ಗ​ನಂತಿದ್ದ ಗೋಪಾ​ಲಯ್ಯ ಶಾಸ​ಕ ಸ್ಥಾನಕ್ಕೆ ರಾಜಿ​ನಾಮೆ ನೀಡಿ​ದರು. ಅದಕ್ಕೆ ಯಾರನ್ನು ಹೊಣೆ​ ಮಾ​ಡ​ಬೇಕು. ರಾಷ್ಟ್ರೀ​ಯ ನಾಯ​ಕ​ರಾದ ದೇವೇ​ಗೌ​ಡರು ಸತ್ಯಕ್ಕೆ ಹತ್ತಿ​ರ​ವಾದ ಮಾತು​ಗ​ಳನ್ನು ಆಡ​ಬೇಕು. ಇದೆ​ಲ್ಲ​ವನ್ನು ನಾಡಿನ ಜನರು ಸೂಕ್ಷ್ಮ​ವಾಗಿ ಗಮ​ನಿ​ಸು​ತ್ತಿ​ದ್ದಾರೆ ಎಂಬು​ದನ್ನು ಮರೆ​ಯ​ಬಾ​ರದು ಎಂದು ಟಾಂಗ್‌ ನೀಡಿ​ದ​ರು.

ಸಿದ್ದು ಮಾಸ್‌ ಲೀಡರ್‌:  ಸಿದ್ದ​ರಾ​ಮಯ್ಯ ಕಡೆ​ಗ​ಣಿ​ಸುವ ನಾಯ​ಕ​ರಲ್ಲ. ಅವ​ರಲ್ಲಿ ಮಾಸ್‌ ಲೀಡರ್‌ಶಿಪ್‌ ಇದೆ. ಇಲ್ಲ ಎನ್ನಲು ಯಾರಿಂದಲೂ ಸಾಧ್ಯ​ವಿಲ್ಲ. ಐದು ವರ್ಷ ಉತ್ತಮ ಆಡ​ಳಿತ ನೀಡಿ​ದ​ವರು. ಜನ​ರಿಗೆ ತಲು​ಪುವ ಕಾರ್ಯ​ಕ್ರಮ ನೀಡಿ​ದ​ವರು. ಕಾಂಗ್ರೆಸ್‌ನಲ್ಲಿ ಸಿದ್ದರಾ​ಮಯ್ಯ ಒಬ್ಬ​ರದೇ ನಾಯ​ಕತ್ವ ಎಂದು ಹೇಳಲಾಗದು. ಪಕ್ಷ​ದಲ್ಲಿ ಸಾಮೂ​ಹಿಕ ನಾಯ​ಕತ್ವ ಇದೆ ಎಂದರು.

ಈಗ ಕಾಂಗ್ರೆಸ್‌ ಪಕ್ಷಕ್ಕೆ ಸಂಕ​ಷ್ಟದ ದಿನ​ಗಳು ಎದು​ರಾ​ಗಿವೆ. ಇಂತಹ ಸನ್ನಿ​ವೇ​ಶ​ದಲ್ಲಿ ಪಕ್ಷ​ವನ್ನು ಸಂಘ​ಟಿಸಿ ಮುನ್ನ​ಡೆ​ಸುವ ಸೂಕ್ತ ವ್ಯಕ್ತಿ ಬೇಕಾ​ಗಿ​ದ್ದಾರೆ. ಮಾಜಿ ಸಚಿವ ಡಿ.ಕೆ. ​ಶಿ​ವ​ಕು​ಮಾರ್‌ ಮಾತ್ರ​ವ​ಲ್ಲದೆ ಅನೇ​ಕರು ಕೆಪಿ​ಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ​ತ​ರಾ​ಗಿ​ದ್ದಾರೆ. ಆದರೆ, ಪಕ್ಷದ ವರಿ​ಷ್ಠರು ತೆಗೆ​ದು​ಕೊ​ಳ್ಳುವ ತೀರ್ಮಾ​ನವೇ ಅಂತಿ​ಮ​ವಾ​ಗಿ​ರು​ತ್ತದೆ.

ನಾನು 30 ಶಾಸ​ಕರು ಹಾಗೂ 120 ಶಾಸ​ಕರಿದ್ದ ಕಾಂಗ್ರೆಸ್‌ನ್ನು ನೋಡಿ​ದ್ದೇನೆ. ಪಕ್ಷದಲ್ಲಿ ಅನೇಕ ಏಳು​ಬೀ​ಳು​ಗ​ಳನ್ನು ನೋಡಿ​ದ್ದೇ​ವೆ. ಈಗ ಅಧಿ​ಕಾ​ರಕ್ಕೆ ಬಂದಿ​ರುವ ಬಿಜೆಪಿ ಸುಲ​ಲಿ​ತ​ವಾಗಿ ಆಡ​ಳಿತ ನಡೆ​ಸಲು ಸಾಧ್ಯ​ವಾ​ಗು​ತ್ತಿಲ್ಲ. ಒಂದೇ ತಿಂಗ​ಳಲ್ಲಿ ಬಿಜೆಪಿಯ ಯೋಗ್ಯತೆ ಏನೆಂಬುದು ಜನ​ರಿಗೆ ಗೊತ್ತಾ​ಗಿದೆ. ಮತ್ತೊಮ್ಮೆ ಜನರ ಬಳಿ ಹೋದಾಗ ಕಾಂಗ್ರೆಸ್‌ ಪಕ್ಷಕ್ಕೆ ಆಶೀ​ರ್ವಾದ ಮಾಡು​ತ್ತಾ​ರೆಂಬ ವಿಶ್ವಾ​ಸ​ವಿದೆ ಎಂದು ರೇವಣ್ಣ ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದ​ರು.

Follow Us:
Download App:
  • android
  • ios