Asianet Suvarna News Asianet Suvarna News

ಚುನಾವಣಾ ಅಖಾಡ: ಜ್ಯೋತಿಷಿ ಮನೆಗೆ ಅಭ್ಯ​ರ್ಥಿ​ಗಳ ಲಗ್ಗೆ..!

ಮತ​ದಾ​ನಕ್ಕೂ ಮೊದಲೆ ಅಭ್ಯ​ರ್ಥಿ​ಗ​ಳಿಗೆ ಹೆಚ್ಚಿದ ತಳ​ಮ​ಳ| ಮತ​ದಾರ ಯಾರನ್ನು ಬೆಂಬ​ಲಿ​ಸು​ತ್ತಾನೆ ಎಂಬ ಆತಂಕ| ತಮ್ಮ ಮನೆದೇವರು ಸೇರಿ​ದಂತೆ ಪ್ರಮುಖ ದೇವ​ಸ್ಥಾ​ನ​ಗ​ಳಿಗೆ ಕುಟುಂಬ ಸಮೇ​ತ​ರಾಗಿ ಹೋಗಿ ವಿಶೇಷ ಪೂಜೆ ಸಲ್ಲಿಸಿ ವರ ಪಡೆ​ಯು​ತ್ತಿರುವ ಕೆಲ ಅಭ್ಯ​ರ್ಥಿ​ಗಳು| 

Grama Panchayat Some Candidates Asked to Atrologer thier Election Result grg
Author
Bengaluru, First Published Dec 26, 2020, 2:42 PM IST

ಪಿ.ಎಸ್. ಪಾಟೀಲ

ರೋಣ(ಡಿ.26): ತೀವ್ರ ಜಿದ್ದಾ​ಜಿ​ದ್ದ​ನಿಂದ ಕೂಡಿ​ರುವ ಹಳ್ಳಿ ಫೈಟ್‌ನ ಎರ​ಡ​ನೇ ಹಂತದ ಮತ​ದಾ​ನಕ್ಕೆ ಒಂದು ದಿನ ಬಾಕಿ ಇದ್ದು, ಅಭ್ಯ​ರ್ಥಿ​ಗಳು ಮತ​ದಾ​ರ ಯಾರ ಪರ ಇದ್ದಾನೆ ಹಾಗೂ ಗೆಲುವು ಸಾಧ್ಯವೆ ಎಂದು ತಿಳಿ​ಯಲು ಮತ​ದಾ​ನಕ್ಕೂ ಮೊದಲೇ ಜ್ಯೋತಿ​ಷಿ​ಗಳ ಮೊರೆ ಹೋಗಿ​ದ್ದಾ​ರೆ.

ಮುಖಂಡರು ಜಾತಿ, ವರ್ಚಸ್ಸು, ಹಣ ಹಾಗೂ ತೋಳ್ಬ​ಲದ ಲೆಕ್ಕಾ​ಚಾ​ರ​ದಲ್ಲಿ ತೊಡ​ಗಿ​ದ್ದರೆ ಅಭ್ಯ​ರ್ಥಿ​ಗಳು ಗೆಲ್ಲು​ತ್ತೇ​ವೆಯೋ? ಇಲ್ಲ​ವೋ? ಅವರು ನಮ್ಮ ಪರ​ವಾಗಿ ಇದ್ದಾರೆ ಎಂಬ ತೊಳ​ಲಾ​ಟ​ದಲ್ಲಿದ್ದು ತಿಳಿ​ದು​ಕೊ​ಳ್ಳಲು ಜ್ಯೋತಿ​ಷಿ​ಗಳ ಮನೆ​ಗ​ಳಿಗೆ ಹೆಜ್ಜೆ ಹಾಕು​ತ್ತಿ​ದ್ದಾ​ರೆ.

ಅಭ್ಯ​ರ್ಥಿ​ಗ​ಳಿಗೆ ತಳ​ಮ​ಳ:

ಪ್ರಚಾ​ರದ ವೇಳೆ ಮತ​ದಾರ ಮತ ಕೇಳಲು ಹೋದ ಎಲ್ಲ​ರಿಗೂ ನಾವು ನಿಮ್ಮ​ವರೇ. ನಿಮ್ಮನ್ನು ಬಿಟ್ಟು ಯಾರಿಗೂ ಮತ ಹಾಕು​ವು​ದಿಲ್ಲ ಎಂದು ಹೇಳು​ತ್ತಿ​ದ್ದಾರೆ. ಇದು ಅಭ್ಯ​ರ್ಥಿ​ಗಳ ಎದೆ​ಬ​ಡಿತ ಹೆಚ್ಚಿ​ಸಿದೆ. ಯಾರು ನಮ್ಮ ಪರ​ವಾಗಿ ಮತ ಚಲಾ​ಯಿ​ಸು​ತ್ತಾರೆ ಎಂಬ ಲೆಕ್ಕಾ​ಚಾ​ರ​ದಲ್ಲಿ ತೊಡ​ಗಿ​ರುವ ಅಭ್ಯ​ರ್ಥಿ​ಗ​ಳಿಗೆ ದಿನ​ಕ್ಕೊಂದು ಶಾಕ್‌ ಸಿಗು​ತ್ತಿದೆ. ಬೆಳಗ್ಗೆ ಎದು​ರಾ​ಳಿ​ಗ​ಳೊಂದಿಗೆ ಗುರು​ತಿ​ಸಿ​ಕೊಂಡಿ​ರು​ವ​ವರು ಸಂಜೆ ಇವ​ರೊಂದಿಗೆ ಪ್ರಚಾರಕ್ಕೆ ಬರು​ತ್ತಿ​ದ್ದಾರೆ. ಹೀಗಾಗಿ ಮತ​ ಭದ್ರ​ಪ​ಡಿ​ಸಿ​ಕೊ​ಳ್ಳಲು ಎಲ್ಲ ರಾಜ​ಕೀಯ ಶಕ್ತಿ​ ಬಳ​ಸಿ​ಕೊಂಡರೂ ಸ್ಪಷ್ಟತೆ ಸಿಗದೆ ಆತಂಕಕ್ಕೆ ಒಳ​ಗಾ​ಗಿ​ದ್ದಾರೆ. ಇಂತಹ ಅನೇಕ ಗೊಂದ​ಲ​ಗ​ಳಿಗೆ ಒಳ​ಗಾ​ಗಿ​ರು​ವ ಅಭ್ಯ​ರ್ಥಿ​ಗಳು ಮತ​ದಾ​ನಕ್ಕೂ ಮೊದಲು ಜ್ಯೋತಿ​ಷಿ​ಗಳ ಬಳಿ ಹೋಗಿ ಚರ್ಚಿ​ಸುತ್ತಿ​ದ್ದಾ​ರೆ.

ದಿಂಗಾ​ಲೇ​ಶ್ವರ ಮಠದಲ್ಲಿ ಡಿಕೆಶಿಗೆ ಪೂರ್ಣಕುಂಭ ಸ್ವಾಗತ: ಶ್ರೀಗಳ ನಡೆಗೆ ಭಕ್ತರಲ್ಲಿ ತೀವ್ರ ಅಸಮಾಧಾನ

ಟೆಂಪಲ್‌ ರನ್‌:

ಇನ್ನೂ ಕೆಲ ಅಭ್ಯ​ರ್ಥಿ​ಗಳು ತಮ್ಮ ಮನೆದೇವರು ಸೇರಿ​ದಂತೆ ಪ್ರಮುಖ ದೇವ​ಸ್ಥಾ​ನ​ಗ​ಳಿಗೆ ಕುಟುಂಬ ಸಮೇ​ತ​ರಾಗಿ ಹೋಗಿ ವಿಶೇಷ ಪೂಜೆ ಸಲ್ಲಿಸಿ ವರ ಪಡೆ​ಯು​ತ್ತಿ​ದ್ದಾರೆ. ಶುಕ್ರ​ವಾರ ಏಕಾ​ದಶಿ ಇದ್ದ ಕಾರಣ ಒಂದೇ ದಿನ ನಾಲ್ಕೈದು ದೇವ​ಸ್ಥಾ​ನ​ಗ​ಳನ್ನು ಸುತ್ತುತ್ತಿ​ರುವ ಅಭ್ಯ​ರ್ಥಿ​ಗಳು ಹರಕೆ ಹೊತ್ತು​ಕೊ​ಳ್ಳು​ತ್ತಿ​ದ್ದಾರೆ. ಚುನಾ​ವ​ಣೆ​ಯಲ್ಲಿ ಗೆಲುವು ಸಾಧಿ​ಸಿ​ದರೆ ಕುಟುಂಬ ಸಮೇ​ತ​ರಾಗಿ ಬಂದು ನಿನ್ನ ಸೇವೆ ಮಾಡು​ತ್ತೇವೆ, ಬಂಗಾರ, ದೇವ​ಸ್ಥಾನದ ಅಭಿ​ವೃದ್ಧಿ ಕಾಮ​ಗಾ​ರಿ​ಗ​ಳಿಗೆ ಹಣ ನೀಡು​ತ್ತೇವೆ ಎಂದು ಪ್ರಮಾಣ ಮಾಡು​ತ್ತಿ​ದ್ದಾರೆ.

ಒಟ್ಟಿ​ನಲ್ಲಿ ಅಭ್ಯ​ರ್ಥಿ​ಗಳು ಜ್ಯೋತಿಷಿ ಹಾಗೂ ದೇವ​ಸ್ಥಾ​ನ​ಗ​ಳನ್ನು ಸುತ್ತಿ​ದರೂ ಅವರ ಹಣೆಬರಹ ಬರೆ​ಯು​ವುದು ಮತ​ದಾರ. ಹೀಗಾಗಿ ಡಿ. 27ರಂದು ಚುನಾ​ವಣೆ ನಡೆ​ಯ​ಲಿದ್ದು ಡಿ. 30ರಂದು ಮತ ಎಣಿ​ಕೆ​ಯಲ್ಲಿ ಯಾರಿಗೆ ವಿಜ​ಯ​ಮಾಲೆ ದೊರೆ​ಯು​ತ್ತದೆ ಎಂಬುದು ಕಾಯ್ದು​ನೋ​ಡ​ಬೇ​ಕು.

ಚುನಾ​ವಣೆ ಘೋಷ​ಣೆ​ಯಾದ ದಿನ​ದಿಂದ ಈ ಬಾರಿ ಚುನಾ​ವ​ಣೆ​ಯಲ್ಲಿ ಸ್ಪರ್ಧಿ​ಸಿ​ದರೆ ಗೆಲ್ಲ​ಬ​ಹುದೇ? ನೀವು ಹೇಳುವ ಮಾತು​ಗ​ಳ ಮೇಲೆ ನನ್ನ ಭವಿ​ಷ್ಯ​ವಿದೆ. ನನಗೆ ಗೆಲುವು ಸುಲ​ಭ​ವಾ​ಗ​ಲಿ ಎಂದು ಆಶೀ​ರ್ವದಿಸಿ ಎಂದು ಬೇಡಿ​ಕೊ​ಳ್ಳು​ತ್ತಿ​ದ್ದಾರೆ. ನಾನು, ನನ್ನ ಹೇಳಿಕೆಯಿಂದ ನೀವು ಗೆಲುವು ಸಾಧಿ​ಸಲು ಸಾಧ್ಯ​ವಿಲ್ಲ. ನಿಮ್ಮಲ್ಲಿನ ಪರಿಶ್ರಮ, ಅಭಿವೃದ್ಧಿ ಚಿಂತನೆ, ಸೇವಾಗುಣದ ಮೇಲೆ ನಿರ್ಧಾರವಾಗು​ತ್ತದೆ. ಈ ದಿಶೆಯಲ್ಲಿ ಕಾರ್ಯೋನ್ಮುಖರಾಗಿ ವಿಜಯಶಾಲಿಗಳಾಗಿ ಎಂದು ಹರಸಿ ಕಳಿ​ಸಿ​ದ್ದೇ​ನೆ ಎಂದು ಆರಾಧಕ ಮೈಲಾರಪ್ಪ ಬಾಗೂರ ಗೋರಪ್ಪ ತಿಳಿಸಿದ್ದಾರೆ. 

ಅಭ್ಯರ್ಥಿಯ ಹಸ್ತ ರೇಖೆ, ಜನ್ಮ ಕುಂಡಲಿ, ರಾಶಿ ಫಲ, ಹುಟ್ಟಿದ ಘಳಿಗೆ, ಅದೃಷ್ಟಸಂಖ್ಯೆ, ನಾಮಪತ್ರ ಸಲ್ಲಿಸಿದ ಅವಧಿ ಮತ್ತು ವಾರದ ಮೇಲೆ ಲೆಕ್ಕ ಹಾಕಿ ಭವಿಷ್ಯ ಹೇಳಿದ್ದೇನೆ. ಕಳೆದ ಚುನಾವಣೆಯಲ್ಲಿ ಗೆದ್ದವರು ಈ ಬಾರಿಯೂ ನನ್ನಲ್ಲಿ ಬಂದು ಭವಿಷ್ಯ ಕೇಳಿ ಹೋಗಿದ್ದಾರೆ. ಜತೆಗೆ ಹೊಸಬರು ಭವಿಷ್ಯ ಕೇಳಲು ಬರುತ್ತಿದ್ದಾರೆ ಎಂದು  ಜ್ಯೋತಿಷಿ ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ. 

ಜ್ಯೋತಿ​ಷಿ​ಗಳು ಹೇಳುವ ಮಾತಿ​ನಿಂದ, ದೇವ​ಸ್ಥಾನ ಸುತ್ತು​ವು​ದು, ಮೂಢಾ​ಚ​ರ​ಣೆ​ಗ​ಳಿಂದ ಗೆಲುವು ಸಾಧಿ​ಸಲು ಸಾಧ್ಯ​ವಿ​ಲ್ಲ. ಅಭಿ​ವೃದ್ಧಿ ಪರ ಚಿಂತನೆ ಹಾಗೂ ಉತ್ತಮ ವ್ಯಕ್ತಿತ್ವ ಹೊಂದಿ​ದ​ವ​ರಿಗೆ ಮತ​ದಾರ ಮತ ನೀಡು​ತ್ತಾ​ನೆ. ಅವರ ನಿರ್ಧಾ​ರವೇ ಅಂತಿಮ ಎಂದು ವಿಜ್ಞಾನ ಶಿಕ್ಷಕ ಅಶೋಕ ಹುಂಡಿ ಹೇಳಿದ್ದಾರೆ. 
 

Follow Us:
Download App:
  • android
  • ios