* ಮೈಸೂರಿನ ಹೊರವಲಯದ ಹೂಟಗಳ್ಳಿಯಲ್ಲಿ ನಡೆದ ಘಟನೆ* ಬಾಲಕಿಗೆ ರಾಮನಗರ ಮೂಲದ ಯುವಕನೊಂದಿಗೆ ಮದುವೆಗೆ ಸಿದ್ಧತೆ * ಈ ಸಂಬಂಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ಮೈಸೂರು(ಜೂ.13): ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಕಾನೂನು ಬಾಹಿರವಾಗಿ ನಿಶ್ಚಯವಾಗಿದ್ದ ಮದುವೆಯನ್ನು ಆಕೆಯ ಸ್ನೇಹಿತೆ ತಡೆದ ಘಟನೆ ಮೈಸೂರಿನ ಹೊರವಲಯದ ಹೂಟಗಳ್ಳಿಯಲ್ಲಿ ನಡೆದಿದೆ. 

ಬಾಲಕಿಗೆ ರಾಮನಗರ ಮೂಲದ ಯುವಕನೊಂದಿಗೆ ಮದುವೆಗೆ ಸಿದ್ಧತೆ ನಡೆದಿತ್ತು. ಆದರೆ ಈ ವಿಚಾರ ತಿಳಿದಿದ್ದ ಮದ್ವೆಗೆ ನಿಶ್ಚಯವಾಗಿದ್ದ ಬಾಲಕಿಯ ಸ್ನೇಹಿತೆ ತಮ್ಮ ಶಾಲೆಯ ಶಿಕ್ಷಕಿಗೆ ಮಾಹಿತಿ ನೀಡಿದ್ದಳು. ಶಿಕ್ಷಕಿಯು ಈ ಮಾಹಿತಿಯನ್ನು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಅವರಿಗೆ ತಿಳಿಸಿದ್ದರು. 

ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯ ವಿವಾಹ ಹೆಚ್ಚಳ..?

ಈ ಸಂಸ್ಥೆಯು ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಬಾಲ್ಯ ವಿವಾಹವನ್ನು ತಡೆಯಲಾಗಿದೆ. ಈ ವೇಳೆ ಪರಿಶೀಲನೆಗೆಂದು ಪೊಲೀಸರು ಬಂದಾಗ ಪೋಷಕರು ಬಾಲಕಿಯನ್ನು ಮಂಚದ ಕೆಳಗೆ ಬಚ್ಚಿಟ್ಟಿರುವ ನಾಟಕೀಯ ಬೆಳವಣಿಗೆಯೂ ನಡೆದಿದೆ. ಅಲ್ಲದೆ ಈ ಸಂಬಂಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.