ಸ್ವಾತಂತ್ರ ಹೋರಾಟಗಾರ ವಿಠಲಶ್ರೇಷ್ಠಿ ಮೂದೇನೂರು ನಿಧನ| ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ಇಹಲೋಕ ತ್ಯಜಿಸಿದ ವಿಠಲಶ್ರೇಷ್ಠಿ ಮೂದೇನೂರು|ವಿಠಲಶ್ರೇಷ್ಠಿ ಮೂದೇನೂರು ಅವರು ಹೈದರಾಬಾದ್ ನಿಜಾಮರ ವಿರುದ್ಧ  ನಡೆದ ಹೋರಾಟ ದಲ್ಲಿ ಭಾಗವಹಿಸಿ ಸೆರೆಮನೆವಾಸ ಕಂಡಿದ್ದರು|

ಗಂಗಾವತಿ(ಜೂ.13): ಸ್ವಾತಂತ್ರ ಹೋರಾಟಗಾರ ಹಾಗೂ ಹಿರಿಯ ತೆರಿಗೆ ಸಲಹೆಗಾರರಾಗಿದ್ದ ವಿಠಲಶ್ರೇಷ್ಠಿ ಮೂದೇನೂರು(91) ನಿನ್ನೆ(ಶುಕ್ರವಾರ) ಮಧ್ಯಾಹ್ನ ಜಯನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 

Add Asianetnews Kannada as a Preferred SourcegooglePreferred

ವಿಠಲಶ್ರೇಷ್ಠಿ ಮೂದೇನೂರು ಅವರು ಹೈದರಾಬಾದ್ ನಿಜಾಮರ ವಿರುದ್ಧ ನಡೆದ ಹೋರಾಟ ದಲ್ಲಿ ಭಾಗವಹಿಸಿ ಸೆರೆಮನೆವಾಸ ಕಂಡಿದ್ದರು. ಸರಕಾರದ ಗೌರವ ಧನ ಸಿಗದೆ ವಂಚಿತರಾಗಿದ್ದರು. ನಗರದಲ್ಲಿ ನಡೆದೆ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದ್ದರು.

ಗಂಗಾವತಿ: ಸೀಲ್‌ಡೌನ್‌ ಮಾಡಿದ್ರೂ ಕ್ಯಾರೇ ಎನ್ನದ ಜನ..!

ಮೃತರಿಗೆ ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ನೆರವೇರಲಿದೆ.