Asianet Suvarna News Asianet Suvarna News

'ಯಡಿಯೂರಪ್ಪ ಸರ್ಕಾರ ಹೆಣದ ಮೇಲೆ ಹಣ ಸಂಪಾ​ದಿ​ಸು​ತ್ತಿದೆ'

ಸೋಂಕು ತಡೆಯುವಲ್ಲಿ ಸರ್ಕಾರ ವಿಫಲ: ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌| ಉಪ ಮುಖ್ಯ​ಮಂತ್ರಿ ಅಶ್ವತ್ಥ ನಾರಾ​ಯಣ ಅವ​ರಿಗೆ ಗ್ರಾಮ ಪಂಚಾ​ಯಿತಿ ಸದ​ಸ್ಯ​ರಾ​ಗಲು ಅರ್ಹತೆ ಇಲ್ಲ, ಅಂತಹ ವ್ಯಕ್ತಿಗೆ ಸರ್ಕಾ​ರ​ದಲ್ಲಿ ಉನ್ನತ ಹುದ್ದೆ ನೀಡಿ​ದ್ದಾರೆ| ಇಲ್ಲಿ​ವ​ರೆಗೆ ಕೋವಿಡ್‌ ಆಸ್ಪ​ತ್ರೆಗೆ ಭೇಟಿ ನೀಡಿ ರೋಗಿ​ಗ​ಳ ಸಮಸ್ಯೆ ಆಲಿ​ಸಿಲ್ಲ. ಅವ​ರಲ್ಲಿ ಆತ್ಮ​ಸ್ಥೈರ್ಯ ತುಂಬುವ ಪ್ರಯತ್ನವನ್ನು ಮಾಡಿಲ್ಲ|

Former ZP President Iqbal Hussain talks Over BJP Government
Author
Bengaluru, First Published Jul 30, 2020, 3:51 PM IST

ರಾಮ​ನ​ಗರ(ಜು.30): ಕೋವಿಡ್‌ ನಿಯಂತ್ರಿ​ಸು​ವಲ್ಲಿ ಸಂಪೂ​ರ್ಣ​ವಾಗಿ ವಿಫ​ಲ​ವಾ​ಗಿ​ರುವ ಬಿಜೆಪಿ ನೇತೃ​ತ್ವದ ರಾಜ್ಯ ಸರ್ಕಾರ ಹೆಣದ ಮೇಲೆ ಹಣ ಸಂಪಾ​ದಿ​ಸುವ ಕೆಲ​ಸ ಮಾಡು​ತ್ತಿದೆ ಎಂದು ಜಿಲ್ಲಾ ಪಂಚಾ​ಯಿತಿ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ವಾಗ್ದಾಳಿ ನಡೆ​ಸಿ​ದ್ದಾರೆ. 

ನಗ​ರದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇ​ರಿ​ಯಲ್ಲಿ ಬುಧ​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಕೊರೋನಾ ಸೋಂಕಿ​ತರ ಹೆಸ​ರಿ​ನಲ್ಲಿ ಸಾವಿ​ರಾರು ಕೋಟಿ ರುಪಾಯಿ ಭ್ರಷ್ಟಾ​ಚಾರ ಮಾಡಿ​ರುವ ಬಿಜೆಪಿ ಸರ್ಕಾರ ಹೆಣದ ಮೇಲೂ ಹಣ ಸಂಪಾ​ದಿ​ಸು​ತ್ತಿದೆ ಎಂದು ಟೀಕಿ​ಸಿ​ದ​ರು.

'ಸಿ.ಪಿ. ಯೋಗೇಶ್ವರ್‌ ರಾಜ್ಯ ರಾಜಕಾರಣದಲ್ಲಿ ಗೆಲ್ಲುವ ಕುದುರೆ'

ಅಂತ್ಯಸಂಸ್ಕಾರ ಸಂಪ್ರದಾಯ ಉಲ್ಲಂಘನೆ

ಕೋವಿಡ್‌ ಸೋಂಕಿ​ತ​ರೆಂದು ಆಸ್ಪ​ತ್ರೆಗೆ ದಾಖ​ಲಾ​ದ ವ್ಯಕ್ತಿ​ಗಳು ಹೆಣವಾಗಿ ಹೊರಗೆ ಬರು​ತ್ತಿ​ದ್ದಾರೆ. ಧರ್ಮ, ಸಂಸ್ಕಾರ ಹಾಗೂ ಸಂಸ್ಕೃತಿಯ ಪರಿ​ಚಾ​ರ​ಕ​ರೆಂದು ಹೇಳಿ​ಕೊ​ಳ್ಳುವ ಬಿಜೆಪಿ ಸರ್ಕಾರ ಮೃತ ಸೋಂಕಿತ ವ್ಯಕ್ತಿ​ಗಳ ಅಂತ್ಯ​ಸಂಸ್ಕಾ​ರ​ವನ್ನು ಸಂಪ್ರ​ದಾಯ ಪ್ರಕಾರ ನೆರ​ವೇ​ರಿ​ಸಲು ಸಾಧ್ಯ​ವಾ​ಗ​ದಂತಹ ಪರಿ​ಸ್ಥಿತಿ ನಿರ್ಮಿ​ಸಿದೆ ಎಂದರು.

ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಲ್ಲ

ಕೊರೋನಾ ನಿಯಂತ್ರ​ಣಕ್ಕೆ ಬಾರ​ದಿ​ರುವ ಕಾರಣ ವೈದ್ಯರು ಅಸ​ಹಾ​ಯ​ಕತೆ ಹಾಗೂ ಸಾವಿನ ಮನೆಯ ರೋದನ ಸರ್ಕಾ​ರಕ್ಕೆ ಕಾಣು​ತ್ತಿಲ್ಲ. ಕೋವಿಡ್‌ ಆಸ್ಪ​ತ್ರೆ​ಗ​ಳಲ್ಲಿ ಸೋಂಕಿ​ತ​ರಿಗೆ ಬಿಸಿ ನೀರು, ಶೌಚಾ​ಲ​ಯ​ದಂತಹ ಕನಿಷ್ಠ ಮೂಲ ಸೌಲ​ಭ್ಯ​ಗ​ಳನ್ನು ಕಲ್ಪಿ​ಸಲು ಸರ್ಕಾ​ರ​ದಿಂದ ಸಾಧ್ಯ​ವಾ​ಗಿಲ್ಲ ಎಂದು ಟೀಕಿ​ಸಿ​ದರು.

ಉಪ ಮುಖ್ಯ​ಮಂತ್ರಿ ಅಶ್ವತ್ಥ ನಾರಾ​ಯಣ ಅವ​ರಿಗೆ ಗ್ರಾಮ ಪಂಚಾ​ಯಿತಿ ಸದ​ಸ್ಯ​ರಾ​ಗಲು ಅರ್ಹತೆ ಇಲ್ಲ. ಅಂತಹ ವ್ಯಕ್ತಿಗೆ ಸರ್ಕಾ​ರ​ದಲ್ಲಿ ಉನ್ನತ ಹುದ್ದೆ ನೀಡಿ​ದ್ದಾರೆ. ಇಲ್ಲಿ​ವ​ರೆಗೆ ಕೋವಿಡ್‌ ಆಸ್ಪ​ತ್ರೆಗೆ ಭೇಟಿ ನೀಡಿ ರೋಗಿ​ಗ​ಳ ಸಮಸ್ಯೆ ಆಲಿ​ಸಿಲ್ಲ. ಅವ​ರಲ್ಲಿ ಆತ್ಮ​ಸ್ಥೈರ್ಯ ತುಂಬುವ ಪ್ರಯತ್ನವನ್ನು ಮಾಡಿಲ್ಲ ಎಂದು ಇಕ್ಬಾಲ್‌ ಹುಸೇನ್‌ ದೂರಿ​ದರು.
 

Follow Us:
Download App:
  • android
  • ios