ಮುಖ್ಯಮಂತ್ರಿ ಯಡಿಯೂರಪ್ಪ ಬಾಲ ಮುದುರಿಕೊಂಡು ಕೂತಿದ್ದು, ಅವರಿಗೆ ಅಮಿತ್ ಶಾ ಜೊತೆ ಮಾತನಾಡುವ ಧೈರ್ಯವಿಲ್ಲ ಎಂದು ಮಾಜಿ ಸಚಿವರೋರ್ವರು ಗುಡುಗಿದ್ದಾರೆ.
ತುಮಕೂರು [ಸೆ.12 ]: ಒಕ್ಕಲಿಗರನ್ನು 100 ಪರ್ಸೆಂಟ್ ಟಾರ್ಗೆಟ್ ಮಾಡಲಾಗಿದೆ ಎಂದು ಮಾಜಿ ಸಚಿವ ಎಸ್.ಆರ್. ಶ್ರೀನಿವಾಸ್ ಗುಡುಗಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಅಮಿತ್ ಶಾ ಅವರನ್ನು ಅಹ್ಮದ್ ಪಟೇಲ್ ಜೈಲಿಗೆ ಹಾಕಿಸಿದ್ದರು. ಅಹ್ಮದ್ ಪಟೇಲ್ ರಾಜ್ಯಸಭೆ ಸದಸ್ಯರಾಗುವ ಕಾಲದಲ್ಲಿ ಅವರನ್ನು ತಪ್ಪಿಸೋಕೆ ಯತ್ನಿಸಿದ್ದರು. ಆ ಸಂದರ್ಭದಲ್ಲಿ ಡಿಕೆಶಿ ಅಲ್ಲಿನ ಗುಜರಾತ್ ಶಾಸಕರನ್ನು ರೆಸಾರ್ಟ್ಗೆ ಕರೆತಂದು ಅಹ್ಮದ್ ಪಟೇಲ್ ಅವರ ಗೆಲುವಿಗೆ ಅನುಕೂಲ ಮಾಡಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಡಿಕೆಶಿ ಮೇಲೆ ಐಟಿ ರೇಡ್ ಆಗಿದೆ ಎಂದು ದೂರಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇಡಿಗೂ ಇದಕ್ಕೂ ಸಂಬಂಧವೇ ಇಲ್ಲ. ತೆರಿಗೆ ಕಟ್ಟಲಿಲ್ಲ ಅಂದರೆ ಐಟಿ ನೋಡಿಕೊಳ್ಳುತ್ತದೆ. ಇಡಿಯನ್ನು ಕೇಂದ್ರ ದುರುಪಯೋಗ ಮಾಡಿಕೊಂಡು ಪ್ರಬಲರನ್ನು ಧಮನ ಮಾಡುತ್ತಿದೆ ಎಂದರು.
ಬಾಲ ಮುದುರಿಕೊಂಡು ಕೂತಿದ್ದಾರೆ ಯಡಿಯೂರಪ್ಪ:
ಅಮಿತ್ ಶಾ ಜೊತೆ ಮಾತನಾಡುವ ಶಕ್ತಿ ಸಿ.ಟಿ.ರವಿಗೆ ಇಲ್ಲ. ಸಿಎಂ ಯಡಿಯೂರಪ್ಪಗೂ ಇಲ್ಲ. ಯಡಿಯೂರಪ್ಪನವರೇ ಬಾಲ ಮುದುರಿಕೊಂಡು ಕೂತಿದ್ದಾರೆ, ಅವರದೇ ಏನು ನಡೀತಾ ಇಲ್ಲ. ಅಂಥದರಲ್ಲಿ ಸಿಟಿ ರವಿ ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ಟೀಕಿಸಿದ ಅವರು, ಕೆಲಸದ ಮೇಲೆ ದೆಹಲಿಗೆ ಹೋಗುತ್ತಿದ್ದೇನೆ. ಅಲ್ಲಿಂದ ಬಂದನಂತರ ಕೋರ್ಟ್ ತೀರ್ಮಾನ ನೋಡಿ ಪ್ರತಿಭಟನೆ ಮಾಡುತ್ತೇವೆ ಎಂದರು.
