Asianet Suvarna News Asianet Suvarna News

‘1 ಮರ ಕಡಿದರೆ 10 ಗಿಡ ನೆಡಿ’ ಯೋಜನೆ ರಾಜ್ಯಕ್ಕೆ ವಿಸ್ತರಣೆ

  • ಉಡುಪಿಯಲ್ಲಿ ಆರಂಭವಾಗಿರುವ, ಅರಣ್ಯ ಇಲಾಖೆ ಹೊಸ ಕಾರ್ಯಕ್ರಮ
  • 1 ಮರ ಕಡಿದಲ್ಲಿ 10 ಸಸಿಗಳನ್ನು ನೆಡುವ ಕಾರ್ಯಕ್ರಮ
For each tree cut plant 10 saplings Says Arvind limbavali snr
Author
Bengaluru, First Published Jul 12, 2021, 7:08 AM IST

 ಉಡುಪಿ (ಜು.12):  ಉಡುಪಿಯಲ್ಲಿ ಆರಂಭವಾಗಿರುವ, ಅರಣ್ಯ ಇಲಾಖೆಗೊಳಪಟ್ಟ1 ಮರ ಕಡಿದಲ್ಲಿ 10 ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ ಎಂದು ರಾಜ್ಯ ಅರಣ್ಯ ಮತ್ತು ಕನ್ನಡ - ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಭಾನುವಾರ ಇಲ್ಲಿನ ಬ್ರಹ್ಮಾವರ-ಸೀತಾನದಿ ರಸ್ತೆಯ ಅಗಲೀಕರಣಕ್ಕೆ ಕಡಿಯಲಾದ 1014 ಮರಗಳ ಬದಲಿಗೆ 10,000 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 1 ಮರದ ಬದಲಿಗೆ 10 ಸಸಿಗಳನ್ನು ನೆಡುವುದು ಇಲಾಖೆಯ ಬಹಳ ಹಳೆಯ ನಿಯಮ, ಆದರೆ ಪಾಲನೆಯಾಗುತ್ತಿಲ್ಲ.

ಮನಿ ಪ್ಲಾಂಟ್‌ಗೆ ನೀರಿನ ಜೊತೆ ಸ್ವಲ್ಪ ಹಾಲು ಹಾಕಿ: ಯಾಕೆ ಗೊತ್ತಾ?

 ರಾಜ್ಯದಲ್ಲಿ ಎಲ್ಲೆಲ್ಲಿ ಅರಣ್ಯ ಇಲಾಖೆಯ ಮರಗಳನ್ನು ಕಡಿಯಲಾಗಿದೆಯೋ ಅಲ್ಲೆಲ್ಲ, ಕಡಿದವರಿಂದಲೇ ಹಣವನ್ನು ಕಟ್ಟಿಸಿಕೊಂಡು, ಈ ನಿಯಮವನ್ನು ಜಾರಿಗೊಳಿಸುವುದಕ್ಕೆ ವಿಶೇಷ ಕಾರ್ಯಕ್ರಮ ಇಲಾಖೆಯಿಂದ ಹಾಕಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಶಾಸಕರಾದ ರಘುಪತಿ ಭಟ್‌, ವಿ. ಸುನೀಲ್‌ ಕುಮಾರ್‌ ಇದ್ದರು.

Follow Us:
Download App:
  • android
  • ios