Asianet Suvarna News Asianet Suvarna News

ಮಂಗಳೂರು: ಅಲೆಗಳ ರಭಸಕ್ಕೆ ಮೀನುಗಾರಿಕಾ ಬೋಟ್ ಮುಳುಗಡೆ

ಮಂಗಳೂರು ಮೂಲದ ಮೀನುಗಾರಿಕಾ ಬೋಟ್‌ ಭಾನುವಾರ ಮುಂಜಾನೆ ಮುರುಡೇಶ್ವರ ಸಮೀಪದ ನೇತ್ರಾಣಿಗುಡ್ಡದಲ್ಲಿ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ 10 ಆಂಧ್ರ ಮೂಲದ ಕಾರ್ಮಿಕರನ್ನು ರಕ್ಷಿಸಲಾಗಿದೆ. ಅಲೆಗಳ ರಭಸಕ್ಕೆ ಬೋಟ್ ಮುಳುಗಿರುವುದಾಗಿ ತಿಳಿದುಬಂದಿದೆ.

Fishing boat sunk in sea near Murudeshwara at Mangalore
Author
Bangalore, First Published Sep 9, 2019, 9:21 AM IST

ಮಂಗಳೂರು(ಸೆ.09): ಮಂಗಳೂರು ಮೂಲದ ಮೀನುಗಾರಿಕಾ ಬೋಟ್‌ ಭಾನುವಾರ ಮುಂಜಾನೆ ಮುರುಡೇಶ್ವರ ಸಮೀಪದ ನೇತ್ರಾಣಿಗುಡ್ಡದಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ಆಂಧ್ರ ಮೂಲದ 10 ಕಾರ್ಮಿಕರನ್ನು ರಕ್ಷಿಸಲಾಗಿದೆ.

ಮಂಗಳೂರಿನ ಕಸಬಾ ಬೆಂಗ್ರೆಯ ಮೊಹಮ್ಮದ್‌ ಆಶೀಫ್‌ ಎಂಬವರಿಗೆ ಸೇರಿದ ‘ಸಹೀಮಾ’ ಹೆಸರಿನ ಬೋಟ್‌ ಇದಾಗಿದೆ. ವಾರದ ಹಿಂದೆ ಮಂಗಳೂರಿನಿಂದ ಈ ಬೋಟ್‌ ಮೀನುಗಾರಿಕೆಗೆ ತೆರಳಿತ್ತು. ಆದರೆ ನೇತ್ರಾಣಿಗುಡ್ಡದ ಸಮೀಪ ಇರುವಾಗ ಕಡಲು ಭಾರಿ ಪ್ರಕ್ಷುಬ್ಧಗೊಂಡಿದ್ದರಿಂದ ಬೋಟಿನಲ್ಲಿದ್ದ ಉಪಕರಣ ಬಳಸಿ ಅಲ್ಲೇ ನಿಲುಗಡೆ ಮಾಡಲಾಗಿತ್ತು. ಆದರೆ ಭಾನುವಾರ ಮುಂಜಾನೆ ವೇಳೆಗೆ ಬೋಟು ಕಡಲಲೆಗಳ ರಭಸಕ್ಕೆ ನೀರಿನಲ್ಲಿ ಮುಳುಗಿದೆ.

ನನ್ನ ವಿರುದ್ಧದ ಆರೋಪಗಳಿಗೆ ಉತ್ತರಿಸುವುದಿಲ್ಲ: ಸೆಂಥಿಲ್

ಬೋಟು ಮುಳುಗಡೆಯಾಗುವುದಕ್ಕೆ ಮೊದಲು ಅದರಲ್ಲಿದ್ದ 10 ಮೀನುಗಾರರನ್ನು ಇತರ ಬೋಟಿನವರು ರಕ್ಷಣೆ ಮಾಡಿದ್ದಾರೆ. ಈ ಅವಘಡದಿಂದ ಸುಮಾರು ಒಂದೂವರೆ ಕೋಟಿ ರು. ನಷ್ಟಉಂಟಾಗಿದೆ. ಪೊಲೀಸ್‌ ಪಣಂಬೂರು ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಮಂಗಳೂರು: ಸೆಂಥಿಲ್ ವಿರುದ್ಧ ಲೋಕಾಯುಕ್ತಕ್ಕೆ ದೂರು..?

Follow Us:
Download App:
  • android
  • ios