Asianet Suvarna News Asianet Suvarna News

ಮಂಡ್ಯ: ರಂಗನಾಥಸ್ವಾಮಿ ದೇವಸ್ಥಾನದ ಪಾಕಶಾಲೆಗೆ ಬೆಂಕಿ, ತಪ್ಪಿದ ಭಾರೀ ದುರಂತ..!

ರಂಗನಾಥಸ್ವಾಮಿಯ ಪ್ರಸಾದದ ಲಡ್ಡು ತಯಾರು ಮಾಡುವ ಪಾಕ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಿನ್ನೆ ರಾತ್ರಿ 8 ಗಂಟೆ ವೇಳೆಗೆ ಘಟನೆ ನಡೆದಿದೆ. ಈ ವೇಳೆ ಪ್ರಸಾದ ಲಡ್ಡುಗಳು ಬೆಂಕಿಗೆ ನಾಶವಾಗಿವೆ. 
 

Fire in Kitchen at Ranganathaswamy Temple in Mandya grg
Author
First Published Sep 1, 2023, 8:59 AM IST | Last Updated Sep 1, 2023, 10:21 AM IST

ಮಂಡ್ಯ(ಸೆ.01):  ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಪಾಕಶಾಲೆಗೆ ಬೆಂಕಿ ಬಿದ್ದ ಘಟನೆ ನಿನ್ನೆ(ಗುರುವಾರ) ರಾತ್ರಿ ನಡೆದಿದೆ. 

ರಂಗನಾಥಸ್ವಾಮಿಯ ಪ್ರಸಾದದ ಲಡ್ಡು ತಯಾರು ಮಾಡುವ ಪಾಕಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಿನ್ನೆ ರಾತ್ರಿ 8 ಗಂಟೆ ವೇಳೆಗೆ ಘಟನೆ ನಡೆದಿದೆ. ಈ ವೇಳೆ ಪ್ರಸಾದ ಲಡ್ಡುಗಳು ಬೆಂಕಿಗೆ ನಾಶವಾಗಿವೆ ಅಂತ ತಿಳಿದು ಬಂದಿದೆ. 

ತಮಿಳುನಾಡಿಗೆ ನೀರು: 100 ಅಡಿಗೆ ಕುಸಿದ ಕೆಆರ್‌ಎಸ್‌ ಸಂಗ್ರಹ, ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿ

ಬೆಂಕಿಯ ಕೆನ್ನಾಲಿಗೆಗೆ ಪ್ರಸಾದ ತಯಾರಿಕೆಯ ಪಾತ್ರೆಗಳು ಹಾಗೂ ಸಾಮಾಗ್ರಿಗಳು ಸುಟ್ಟು ಕರಕಲಾಗಿವೆ. ಬಳಿಕ ಸ್ಥಳೀಯರು ಹಾಗೂ ದೇವಸ್ಥಾನದ ಸಿಬ್ಬಂದಿಗಳು ಬೆಂಕಿಯನ್ನ ನಂದಿಸಿದ್ದಾರೆ. ಅದೃಷ್ಟವಷಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

Latest Videos
Follow Us:
Download App:
  • android
  • ios