150 ಎಕರೆ ಜಾಗದಲ್ಲಿ ಉಚಿತವಾಗಿ ಸೈಟ್ ಹಂಚಿಕೆ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಜನ ಆಗಮಿಸಿ ಹದ್ದು ಬಸ್ತು ಮಾಡಿರುವ ಘಟನೆ ನಡೆದಿದೆ. ಬಳಿಕ  ಈ ಬಗ್ಗೆ ವಾಸ್ತವ ವಿಚಾರ ಬೆಳಕಿಗೆ ಬಂದಿದೆ. 

 ದಾವಣಗೆರೆ (ಫೆ.01):  ಶಾಸಕರು, ಪುರ​ಸಭೆ ಪುಕ್ಕಟೆ ಸೈಟ್‌ ಹಂಚುವ ವದಂತಿ ಹರಡಿ ನೂರಾರು ಮಂದಿ ಸಲಾಕೆ, ಗುದ್ದಲಿ ಸಮೇತ ತೆರಳಿ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ತಮ್ಮದೆಂದು ಹದ್ದುಬಸ್ತು ಮಾಡಿಕೊಂಡ ಘಟನೆ ಚನ್ನಗಿರಿ ತಾಲೂಕಿನ ಚಿಕ್ಕುಲಿಕೆರೆ ಗ್ರಾಮದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚನ್ನಗಿರಿ ತಾಲೂಕಿನ ಚಿಕ್ಕುಲಿಕೆರೆ ಗ್ರಾಮದ ಬಳಿ ಈ ಘಟನೆ ನಡೆ​ದಿ​ದ್ದು, ಸುಮಾರು 150 ಎಕರೆ ಜಾಗದಲ್ಲಿ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ, ಪುರಸಭೆ ಸದಸ್ಯರು ಮನೆ ಕಟ್ಟಿಕೊಳ್ಳಲು ಹೇಳಿದ್ದಾರೆಂಬ ಗಾದಿ ಸುದ್ದಿ ಹರಡಿ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಯಿತು.

'ಜಮೀನು ಕೊಟ್ಟ ರೈತರಿಗೆ ಅವರ ಜಾಗದಲ್ಲೇ ಬಿಡಿಎ ನಿವೇಶನ' ...

ಈ ಗಾಳಿ ಸುದ್ದಿ​ ನಂಬಿದ ಜನ ವಯೋವೃದ್ಧರು, ಗರ್ಭಿಣಿ, ಬಾಣಂತಿಯರ ಸಮೇತ ನೂರಾರು ಸಂಖ್ಯೆ​ಯಲ್ಲಿ ಆಪೆ ಆಟೋ, ದ್ವಿಚಕ್ರ ವಾಹನಗಳಲ್ಲಿ ತೆರಳಿ ಚಿಕ್ಕುಲಿಕೆರೆ ಗ್ರಾಮದ ಸರ್ವೆ ನಂ.91, ಲಕ್ಷ್ಮೀಸಾಗರದ ಸರ್ವೆ ನಂ.15ರಲ್ಲಿದ್ದ ಸ್ಥಳ​ಕ್ಕೆ ತಮ್ಮ ಜಾಗ ಎಂಬಂತೆ ಗಡಿ ಹಾಕಿಕೊಂಡು, ಹಗ್ಗ ಕಟ್ಟಿಕೊಂಡು ನಿಂತು​ಬಿ​ಟ್ಟಿ​ದ್ದ​ರು. ಸಲಾಕೆ, ಹಾರೆ, ಗುದ್ದಲಿ, ಪುಟ್ಟಿಗಳ ಸಮೇತ ಕುಟುಂಬ ಸಮೇತರಾಗಿ ಬಂದ ಜನ ತಮ್ಮ ಜಾಗ ಇದೇ ಎಂಬುದಾಗಿ ಗೂಟ ನೆಟ್ಟು, ಕಲ್ಲುಗಳನ್ನು ಹಾಕಿಕೊಂಡು ಜಾಗಕ್ಕೆ ತಮಗೇ ತಾವೇ ಹದ್ದುಬಸ್ತು ಮಾಡಿಕೊಂಡಿ​ದ್ದ​ರು.

 ಕೆಲ​ವ​ರಂತು ಜಾಗಕ್ಕೆ ಬೇಲಿ ಹಾಕಿಕೊಳ್ಳುವುದಕ್ಕೂ ಮುಂದಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಗಾಳಿ ಸುದ್ದಿ ನಂಬಿ ಬಂದಿದ್ದ ಜನಕ್ಕೆ ವಾಸ್ತವ ವಿಚಾರ ತಿಳಿಸಿ ವಾಪಸ್‌ ಕಳು​ಹಿ​ಸಿ​ದ​ರು. ಯಾರೋ ಕಿಡಿಗೇಡಿಗಳು ಹಬ್ಬಿಸಿದ ವದಂತಿ, ಗಾಳಿ ಸುದ್ದಿಯಿಂದಾಗಿ ಈ ಘಟನೆ ನಡೆ​ದಿ​ದೆ ಎಂದು ಅಧಿ​ಕಾ​ರಿ​ಗಳು ತಿಳಿ​ಸಿ​ದ್ದಾ​ರೆ.