Asianet Suvarna News Asianet Suvarna News

ಪುಕ್ಕಟೆ ಸೈಟ್‌ : 150 ಎಕರೆ ಜಾಗದಲ್ಲಿ ಹದ್ದು ಬಸ್ತು!

150 ಎಕರೆ ಜಾಗದಲ್ಲಿ ಉಚಿತವಾಗಿ ಸೈಟ್ ಹಂಚಿಕೆ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಜನ ಆಗಮಿಸಿ ಹದ್ದು ಬಸ್ತು ಮಾಡಿರುವ ಘಟನೆ ನಡೆದಿದೆ. ಬಳಿಕ  ಈ ಬಗ್ಗೆ ವಾಸ್ತವ ವಿಚಾರ ಬೆಳಕಿಗೆ ಬಂದಿದೆ. 

Fake News About Free site in Davanagere  snr
Author
Bengaluru, First Published Feb 1, 2021, 8:12 AM IST

 ದಾವಣಗೆರೆ (ಫೆ.01):  ಶಾಸಕರು, ಪುರ​ಸಭೆ ಪುಕ್ಕಟೆ ಸೈಟ್‌ ಹಂಚುವ ವದಂತಿ ಹರಡಿ ನೂರಾರು ಮಂದಿ ಸಲಾಕೆ, ಗುದ್ದಲಿ ಸಮೇತ ತೆರಳಿ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ತಮ್ಮದೆಂದು ಹದ್ದುಬಸ್ತು ಮಾಡಿಕೊಂಡ ಘಟನೆ ಚನ್ನಗಿರಿ ತಾಲೂಕಿನ ಚಿಕ್ಕುಲಿಕೆರೆ ಗ್ರಾಮದಲ್ಲಿ  ನಡೆದಿದೆ.

ಚನ್ನಗಿರಿ ತಾಲೂಕಿನ ಚಿಕ್ಕುಲಿಕೆರೆ ಗ್ರಾಮದ ಬಳಿ ಈ ಘಟನೆ ನಡೆ​ದಿ​ದ್ದು, ಸುಮಾರು 150 ಎಕರೆ ಜಾಗದಲ್ಲಿ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ, ಪುರಸಭೆ ಸದಸ್ಯರು ಮನೆ ಕಟ್ಟಿಕೊಳ್ಳಲು ಹೇಳಿದ್ದಾರೆಂಬ ಗಾದಿ ಸುದ್ದಿ ಹರಡಿ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಯಿತು.

'ಜಮೀನು ಕೊಟ್ಟ ರೈತರಿಗೆ ಅವರ ಜಾಗದಲ್ಲೇ ಬಿಡಿಎ ನಿವೇಶನ' ...

ಈ ಗಾಳಿ ಸುದ್ದಿ​ ನಂಬಿದ ಜನ ವಯೋವೃದ್ಧರು, ಗರ್ಭಿಣಿ, ಬಾಣಂತಿಯರ ಸಮೇತ ನೂರಾರು ಸಂಖ್ಯೆ​ಯಲ್ಲಿ ಆಪೆ ಆಟೋ, ದ್ವಿಚಕ್ರ ವಾಹನಗಳಲ್ಲಿ ತೆರಳಿ ಚಿಕ್ಕುಲಿಕೆರೆ ಗ್ರಾಮದ ಸರ್ವೆ ನಂ.91, ಲಕ್ಷ್ಮೀಸಾಗರದ ಸರ್ವೆ ನಂ.15ರಲ್ಲಿದ್ದ ಸ್ಥಳ​ಕ್ಕೆ ತಮ್ಮ ಜಾಗ ಎಂಬಂತೆ ಗಡಿ ಹಾಕಿಕೊಂಡು, ಹಗ್ಗ ಕಟ್ಟಿಕೊಂಡು ನಿಂತು​ಬಿ​ಟ್ಟಿ​ದ್ದ​ರು. ಸಲಾಕೆ, ಹಾರೆ, ಗುದ್ದಲಿ, ಪುಟ್ಟಿಗಳ ಸಮೇತ ಕುಟುಂಬ ಸಮೇತರಾಗಿ ಬಂದ ಜನ ತಮ್ಮ ಜಾಗ ಇದೇ ಎಂಬುದಾಗಿ ಗೂಟ ನೆಟ್ಟು, ಕಲ್ಲುಗಳನ್ನು ಹಾಕಿಕೊಂಡು ಜಾಗಕ್ಕೆ ತಮಗೇ ತಾವೇ ಹದ್ದುಬಸ್ತು ಮಾಡಿಕೊಂಡಿ​ದ್ದ​ರು.

 ಕೆಲ​ವ​ರಂತು ಜಾಗಕ್ಕೆ ಬೇಲಿ ಹಾಕಿಕೊಳ್ಳುವುದಕ್ಕೂ ಮುಂದಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಗಾಳಿ ಸುದ್ದಿ ನಂಬಿ ಬಂದಿದ್ದ ಜನಕ್ಕೆ ವಾಸ್ತವ ವಿಚಾರ ತಿಳಿಸಿ ವಾಪಸ್‌ ಕಳು​ಹಿ​ಸಿ​ದ​ರು. ಯಾರೋ ಕಿಡಿಗೇಡಿಗಳು ಹಬ್ಬಿಸಿದ ವದಂತಿ, ಗಾಳಿ ಸುದ್ದಿಯಿಂದಾಗಿ ಈ ಘಟನೆ ನಡೆ​ದಿ​ದೆ ಎಂದು ಅಧಿ​ಕಾ​ರಿ​ಗಳು ತಿಳಿ​ಸಿ​ದ್ದಾ​ರೆ.

Follow Us:
Download App:
  • android
  • ios