Asianet Suvarna News Asianet Suvarna News

'ಬೂಟಾ​ಟಿಕೆ ಹೆಚ್ಚು ದಿನ ನಡೆ​ಯಲ್ಲ - ತಳ್ಳುವ ದಿನ ದೂರವಿಲ್ಲ' : ಎಚ್‌ಡಿಕೆ ವಿರುದ್ಧ ಗರಂ

ಮಣ್ಣಿನ ಮಕ್ಕಳೆಂಬ ಬೂಟಾಟಿಕೆ ಹೆಚ್ಚು ದಿನ ಉಳಿಯುವುದಿಲ್ಲ. ಜನ​ರನ್ನು ಮರಳು ಮಾಡುವ ನಾಯ​ಕರ ಬೂಟಾ​ಟಿಕೆ ಮಾತು​ಗಳು ಹೆಚ್ಚು ದಿನ​ಗಳ ಕಾಲ ನಡೆ​ಯು​ವು​ದಿಲ್ಲ ಎಂದು ಮಾಜಿ ಸಿಎಂ ಎಚ್‌ಡಿಕೆ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಲಾಗಿದೆ. 

Ex MLA K Raju Slams JDS Leader HD kumaraswamy snr
Author
Bengaluru, First Published Apr 19, 2021, 3:58 PM IST

 ರಾಮ​ನ​ಗರ (ಏ.19): ಮಣ್ಣಿನ ಮಕ್ಕಳು, ರೈತರ ಉದ್ಧಾ​ರ​ಕರೆಂದು ಬೊಗಳೆ ಬಿಡುತ್ತಾ ಜನ​ರನ್ನು ಮರಳು ಮಾಡುವ ನಾಯ​ಕರ ಬೂಟಾ​ಟಿಕೆ ಮಾತು​ಗಳು ಹೆಚ್ಚು ದಿನ​ಗಳ ಕಾಲ ನಡೆ​ಯು​ವು​ದಿಲ್ಲ. ಪ್ರಜ್ಞಾ​ವಂತ​ರಾ​ಗಿ​ರುವ ಕ್ಷೇತ್ರದ ಜನರು ಪಾಠ ಕಲಿ​ಸುವ ದಿನ​ಗಳು ದೂರ ಉಳಿ​ದಿಲ್ಲ ಎಂದು ಮಾಜಿ ಸಿಎಂ ಕುಮಾ​ರ​ಸ್ವಾಮಿ ವಿರುದ್ಧ ಮಾಜಿ ಶಾಸಕ ಕೆ.ರಾಜು ವಾಗ್ದಾಳಿ ನಡೆ​ಸಿ​ದರು.

ತಾಲೂ​ಕಿನ ವಡ್ಡ​ರ​ಹಳ್ಳಿಯಲ್ಲಿ ಅರ್ಕಾ​ವತಿ ನದಿಗೆ ಅಡ್ಡ​ಲಾಗಿ ಚೆಕ್‌ ಡ್ಯಾಂ/ಬ್ಯಾ​ರೇಜ್‌ ನಿರ್ಮಿ​ಸುವ ಹಾಗೂ ವಡ್ಡ​ರ​ಹ​ಳ್ಳಿಯ ಕೆರೆಗೆ ನೀರು ತುಂಬಿ​ಸುವ ಏತ ನೀರಾ​ವರಿ ಯೋಜ​ನೆಯ ಶಂಕುಸ್ಥಾಪನೆ ಕಾರ್ಯ​ಕ್ರ​ಮ​ದಲ್ಲಿ ಅವರು ಮಾತ​ನಾ​ಡಿ​ದರು.

ರೈತನ ಮಗನೆಂದು ಹೇಳಿ​ಕೊ​ಳ್ಳುವ ನಾಯ​ಕರಿಗೆ ಕಣ್ಣೀರು ಸುರಿಸಿ ಜನ​ರನ್ನು ಮರಳು ಮಾಡು​ವು​ದನ್ನು ಬಿಟ್ಟರೆ ಇನ್ನೇನೂ ಗೊತ್ತಿಲ್ಲ. ಕೆಲಸ ಮಾಡದೆ ಸುಳ್ಳು ಹೇಳಿ​ಕೊಂಡು ಬೂಟಾ​ಟಿಕೆ ಪ್ರದ​ರ್ಶಿ​ಸುತ್ತಾ ನಾಟ​ಕವಾಡಿ​ದರೆ ಜನರು ಹೆಚ್ಚು ದಿನ ಸಹಿ​ಸು​ವು​ದಿಲ್ಲ. ಆ ನಾಯ​ಕರ ನಿಜ​ವಾದ ಬಣ್ಣ ಯಾವು​ದೆಂದು ಗೊತ್ತಾ​ಗು​ತ್ತದೆ ಎಂದು ಟೀಕಿ​ಸಿ​ದರು.

HDK ಕರ್ಮಭೂಮಿ ರಾಮನಗರದಲ್ಲಿ ಜೆಡಿಎಸ್‌ಗೆ ಬಿಗ್ ಶಾಕ್: ಮಾಜಿ ಶಾಸಕ ಕಾಂಗ್ರೆಸ್​ ಸೇರ್ಪಡೆ ..

ವಿಧಾನ ಪರಿ​ಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಮಾತ​ನಾಡಿ, ಮಾಜಿ ಸಿಎಂ ಕುಮಾ​ರ​ಸ್ವಾಮಿ ವಯ​ಸ್ಸಿ​ನಲ್ಲಿ ನನ​ಗಿಂತಲೂ ಚಿಕ್ಕ​ವನು. ಆದರೂ, ನನ್ನನ್ನು ಶಿಖಂಡಿ​ಯಂತಲ್ಲ ಏಕ​ವ​ಚ​ನ​ದಲ್ಲಿ ಟೀಕಿ​ಸಿ​ದ್ದಾನೆ. ನಾನೆಂದೂ ಶಿಖಂಡಿ ರೀತಿ ಬಾಳಿ​ದ​ವ​ನಲ್ಲ. ಅವನ ಎಲ್ಲಾ ಟೀಕೆ​ ಟಿಪ್ಪ​ಣಿ​ಗ​ಳಿಗೆ ಬಹಿ​ರಂಗ ಸಭೆ​ಯ​ಲ್ಲಿಯೇ ಸೂಕ್ತ ಉತ್ತರ ನೀಡು​ತ್ತೇನೆ ಎಂದರು.

ನಾನು ಶಾಸ​ಕ​ನಾ​ಗಿದ್ದಾಗ ಬಗರ್‌ಹುಕುಂನಲ್ಲಿ 2 ಸಾವಿರ ರೈತ​ರಿಗೆ ಸಾಗು​ವ​ಳಿ ಚೀಟಿ ಕೊಡಿ​ಸಿದೆ. ನಗರ ಸೇರಿ ತಾಲೂಕು ಗ್ರಾಮೀಣ ಪ್ರದೇ​ಶ​ಗ​ಳ​ಲ್ಲಿನ ಬಡ​ವ​ರಿಗೆ ನಿವೇ​ಶನ, ಸೂರು ಕಲ್ಪಿ​ಸಿ​ಕೊ​ಟ್ಟಿ​ದ್ದೇನೆ. ಇವ​ರೆ​ಡ​ರಲ್ಲಿ ಒಂದೇ ಒಂದು ಕೆಲಸ ಮಾಡಿ​ರು​ವು​ದನ್ನು ಕುಮಾ​ರ​ಸ್ವಾಮಿ ತೋರಿ​ಸಿ​ದರೆ ಕೈ ಮುಗಿ​ಯು​ತ್ತೇನೆ ಎಂದು ಸವಾಲು ಹಾಕಿ​ದರು.

ವಡ್ಡ​ರ​ಹಳ್ಳಿ ಕೆರೆಗೆ ನೀರು ತುಂಬಿ​ಸುವ ಆಲೋ​ಚನೆ ನಾನು ಶಾಸ​ಕ​ನಾ​ಗಿದ್ದಲೇ ನಡೆ​ದಿತ್ತು. ಈಗ ವಡ್ಡ​ರ​ಹಳ್ಳಿಯಲ್ಲಿ ಅರ್ಕಾ​ವತಿ ನದಿಗೆ ಅಡ್ಡ​ಲಾಗಿ ಚೆಕ್‌ ಡ್ಯಾಂ/ಬ್ಯಾ​ರೇಜ್‌ ನಿರ್ಮಿ​ಸುವ ಯೋಚನೆಯೂ ಬಂದಿ​ತು. ಕಾಂಗ್ರೆಸ್‌ ನಾಯ​ಕರ ಕನ​ಸಿನ ಕೂಸಾಗಿರುವ ಅದನ್ನು ಜೆಡಿ​ಎಸ್‌ ನಾಯ​ಕ​ರನ್ನು ತಮ್ಮ ಕೊಡುಗೆಯೆಂದು ಹೇಳಿ​ಕೊ​ಳ್ಳು​ತ್ತಿ​ದ್ದಾರೆ ಎಂದು ಟೀಕಿ​ಸಿ​ದರು.

ಈ ಯೋಜನೆ ಬಗ್ಗೆ ಶಾಸಕಿ ಅನಿ​ತಾ​ರ​ವ​ರಿಗೆ ಎಳ್ಳಷ್ಟುತಿಳು​ವ​ಳಿಕೆ ಇಲ್ಲ. ತಮ್ಮ ಮನೆ​ಯಲ್ಲಿ ಹುಟ್ಟಿದ ಮಗು​ವಿಗೆ ನಾಮ​ಕ​ರಣ ಮಾಡು​ವು​ದನ್ನು ಬಿಟ್ಟು, ಇನ್ಯಾ​ರದೊ ಮನೆ​ಯಲ್ಲಿ ಹುಟ್ಟಿದ ಮಗು​ವಿಗೆ ನಾಮ​ಕ​ರಣ ಮಾಡಲು ಹೊರ​ಟಿ​ದ್ದಾರೆ ಎಂದು ಲಿಂಗಪ್ಪ ಲೇವಡಿ ಮಾಡಿ​ದರು.

Follow Us:
Download App:
  • android
  • ios