Asianet Suvarna News Asianet Suvarna News

ಧಾರವಾಡ: ಕರ್ನಾಟಕ ವಿವಿಗೆ ಆಗಮಿಸಿದ ಗಜರಾಜ, ಹೌಹಾರಿದ ಜನ..!

ವಿವಿ ಆವರಣದಲ್ಲಿ ಅನೆ ಕಂಡು ಭಯಭೀತರಾದ ಜನರು| ಧಾರವಾಡ ನಗರದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯ| ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು| ಆನೆ ಬಂದಿರುವ ಸುದ್ದಿ ಕೇಳಿ ಕ್ವಾಟರ್ಸ್‌ನಿಂದ ಹೊರಬರದ ಜನ| 

Elephant Came to Karnataka University Campus at Dharwad grg
Author
Bengaluru, First Published Apr 18, 2021, 12:58 PM IST

ಧಾರವಾಡ(ಏ.18): ನಗರದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಆನೆಯೊಂದು ಕಾಣಿಸಿಕೊಂಡಿದೆ. ವಿವಿಯ ಹಿಂಭಾಗದಲ್ಲಿರುವ ಗೆಸ್ಟ್‌ ಹೌಸ್ ಬಳಿ ಆನೆಯೊಂದು ಓಡಾಡುತ್ತಿದೆ. ಇಂದು(ಭಾನುವಾರ) ಬೆಳಿಗ್ಗೆಯಿಂದ ಆನೆ ನೋಡಿದ ಜನರು ಆತಂಕಗೊಂಡಿದ್ದಾರೆ.

ಆನೆ ಕಾಡಿನಿಂದ ನಾಡಿಗೆ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಆನೆಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.

Elephant Came to Karnataka University Campus at Dharwad grg

ಕಾಡಾನೆ ಮತ್ತು ಮರಿ ಹಳಿ ದಾಟಲು ರೈಲು ನಿಲ್ಲಿಸಿದ ಚಾಲಕ : ವಿಡಿಯೋ ವೈರಲ್

ವಿಶ್ವವಿದ್ಯಾಲಯದ ಆವರಣದಲ್ಲಿ ಆನೆ ಬಂದಿರುವ ಸುದ್ದಿ ಕೇಳಿ ಕ್ವಾಟರ್ಸ್‌ನಿಂದ ಜನರು ಹೊರಬರೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. 
 

Follow Us:
Download App:
  • android
  • ios