ವಿಜಯನಗರ ಕ್ಷೇತ್ರದ ಮತದಾರರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಘೋರ್ಪಡೆಗೆ ಮತ ನೀಡಿ|ಆಂಗ್ಲ ಭಾಷೆಯಲ್ಲಿ Disqualified ಅನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ರೆ ಅದು ಅಯೋಗ್ಯ ಎಂದು ಆಗುತ್ತದೆ| ಆನಂದ್ ಸಿಂಗ್ ಅಯೋಗ್ಯರಾಗಿದ್ದಾರೆ ಅವರಿಗೆ ಮತ ನೀಡಬೇಡಿ| ಗಣಿ ಅಕ್ರಮದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಜತೆ ಇವರೂ ಕೂಡ ಭಾಗಿಯಾಗಿದ್ದರು| ಅಂಥವರನ್ನು ಆಯ್ಕೆ ಮಾಡಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಹರಿಬಿಟ್ಟ ಟಪಾಲ್ ಗಣೇಶ್|   

"

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಳ್ಳಾರಿ(ನ.24): ಅನರ್ಹ ಹಾಗೂ ಅಯೋಗ್ಯರಿಗೆ ಮತ ನೀಡಬೇಡಿ. ಸುಪ್ರೀಂಕೋರ್ಟ್ ಕೂದ ಅನರ್ಹ ಶಾಸಕ ಎಂದು ಹೇಳಿದೆ ಹೀಗಾಗಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಬಿಜೆಪಿ ಆನಂದ್ ಸಿಂಗ್ ಅವರಿಗೆ ಮತ ಹಾಕಬೇಡಿ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ಮನವಿ ಮಾಡಿಕೊಂಡಿದ್ದಾರೆ. 

ಆಂಗ್ಲ ಭಾಷೆಯಲ್ಲಿ Disqualified ಅನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ರೆ ಅದು ಅಯೋಗ್ಯ ಎಂದೂ ಆಗುತ್ತದೆ.ಹೀಗಾಗಿ ಆನಂದ್ ಸಿಂಗ್ ಅಯೋಗ್ಯರಾಗಿದ್ದಾರೆ ಅವರಿಗೆ ಮತ ನೀಡಬೇಡಿ. ಗಣಿ ಅಕ್ರಮದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಜತೆ ಇವರೂ ಕೂಡ ಭಾಗಿಯಾಗಿದ್ದರು. ಅಂಥವರನ್ನು ಆಯ್ಕೆ ಮಾಡಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಹರಿಬಿಟ್ಟಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಿಜಯನಗರ ಕ್ಷೇತ್ರದ ಮತದಾರರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಘೋರ್ಪಡೆ ಅವರಿಗೆ ಮತ ನೀಡಿ ಎದು ವಿಡಿಯೋ ಮಾಡಿ ಟಪಾಲ್ ಗಣೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.<br/>ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.<br/>