Asianet Suvarna News Asianet Suvarna News

ಸಂಸದರು, ಸಚಿವರು ಮೋದಿ ಮುಂದೆ ಮಾತನಾಡಲು ಹೆದುರುತ್ತಿದ್ದಾರೆ : ಡಿಕೆಶಿ

  • ಬಿಜೆಪಿ ನೇತೃ​ತ್ವದ ರಾಜ್ಯ ಸರ್ಕಾ​ರ​ದ ಸಚಿ​ವರು ಹಾಗೂ ಸಂಸ​ದ​ರಿಗೆ ಧೈರ್ಯ ಮತ್ತು ಬದ್ಧತೆ ಇಲ್ಲ
  • ಮೇಕೆ​ದಾಟು ಯೋಜನೆ ವಿಚಾ​ರ​ವಾಗಿ ಪ್ರಧಾನಿ ಮತ್ತು ಕೇಂದ್ರ ನೀರಾ​ವರಿ ಸಚಿ​ವ​ರನ್ನು ಭೇಟಿ ಮಾಡಿ ಒಪ್ಪಿಗೆ ಕೊಡಿ​ಸಲಿ
  • ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಸವಾಲು 
DK Shivakumar Slams BJP leaders on Mekedatu issue snr
Author
Bengaluru, First Published Aug 16, 2021, 7:51 AM IST

ರಾಮನಗರ (ಆ.16): ಬಿಜೆಪಿ ನೇತೃ​ತ್ವದ ರಾಜ್ಯ ಸರ್ಕಾ​ರ​ದ ಸಚಿ​ವರು ಹಾಗೂ ಸಂಸ​ದ​ರಿಗೆ ಧೈರ್ಯ ಮತ್ತು ಬದ್ಧತೆ ಇದ್ದರೆ ಮೇಕೆ​ದಾಟು ಯೋಜನೆ ವಿಚಾ​ರ​ವಾಗಿ ಪ್ರಧಾನಿ ಮತ್ತು ಕೇಂದ್ರ ನೀರಾ​ವರಿ ಸಚಿ​ವ​ರನ್ನು ಭೇಟಿ ಮಾಡಿ ಒಪ್ಪಿಗೆ ಕೊಡಿ​ಸಲಿ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಸವಾಲು ಹಾಕಿದ್ದಾರೆ.

ಕನ​ಕ​ಪು​ರ​ದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಸಂಸದರು ಹಾಗೂ ಸಚಿವರು ಮೋದಿ ಮುಂದೆ ಮಾತನಾಡಲು ಹೆದುರುತ್ತಿದ್ದಾರೆ. ಎಲ್ಲಿ ನಮ್ಮ ಸ್ಥಾನಗಳು ಅಧಿಕಾರ ಹೋಗುತ್ತದೆಯೊ ಎಂಬ ಆತಂಕ ಅವ​ರನ್ನು ಕಾಡು​ತ್ತಿದೆ.

ಸ್ವಾತಂತ್ರ್ಯ ದಿನಾಚರಣೆ ಭಾಷಣದ ವೇಳೆ ಯಡವಟ್ಟು ಮಾಡಿಕೊಂಡ ಡಿಕೆಶಿ, ಜಮೀರ್ ಅಹ್ಮದ್

ಹೀಗಾ​ಗಿಯೇ ಮೇಕೆ​ದಾಟು, ಮಹಾ​ದಾಯಿ ಸೇರಿ​ದಂತೆ ಯಾವುದೇ ವಿಚಾರವಾಗಲಿ ಮಾತ​ನಾ​ಡು​ವು​ದಿ​ಲ್ಲ ಎಂದ​ರು.

Follow Us:
Download App:
  • android
  • ios