Asianet Suvarna News Asianet Suvarna News

ಅನರ್ಹ ಶಾಸಕರ ಕ್ಷೇತ್ರಕ್ಕಾಗಿ ಸಿಎಂಗೆ ಬಂತು ಹೊಸ ಬೇಡಿಕೆ

ಅನರ್ಹ ಶಾಶಕರೋರ್ವರು ತಮ್ಮ ಕ್ಷೇತ್ರಕ್ಕೆ ಹುದ್ದೆಯೊಂದನ್ನು ನೀಡಬೇಕು ಎಂದು ಸಿಎಂ ಯಡಿಯೂರಪ್ಪ ಬಳಿ ಬೇಡಿಕೆ ಸಲ್ಲಿಸಿದ್ದಾರೆ. 

Disqualified MLA Wants Mayor Post For His Constituency
Author
Bengaluru, First Published Sep 18, 2019, 8:09 AM IST

ಬೆಂಗಳೂರು [ಸೆ.18]:  ನಗರದ ಅನರ್ಹ ಶಾಸಕರು ತಾವು ಪ್ರತಿನಿಧಿಸುತ್ತಿದ್ದ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಸದಸ್ಯರೊಬ್ಬರಿಗೆ ಮೇಯರ್‌ ಪಟ್ಟನೀಡುವಂತೆ ಮುಖ್ಯಮಂತ್ರಿಗಳ ಬಳಿ ಬೇಡಿಕೆ ಇಟ್ಟಿದ್ದಾರೆ.

ಅನರ್ಹ ಶಾಸಕ ಮುನಿರತ್ನ ಅವರೇ ಖುದ್ದು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮೂರು ಕ್ಷೇತ್ರಗಳ (ರಾಜರಾಜೇಶ್ವರಿನಗರ, ಯಶವಂತಪುರ ಮತ್ತು ಕೆ.ಆರ್‌.ಪುರ) ಬಿಬಿಎಂಪಿ ಸದಸ್ಯರ ಪೈಕಿ ಒಬ್ಬರನ್ನು ಮೇಯರ್‌ ಮಾಡಿ ಎಂಬ ಮನವಿಯನ್ನು ಇಟ್ಟಿದ್ದೇವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೇಳುವುದರಲ್ಲಿ ತಪ್ಪೇನಿದೆ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಳಿದ್ದೇವೆ. ಕೊಡುವುದು ಅಥವಾ ಬಿಡುವುದು ವರಿಷ್ಠರಿಗೆ ಬಿಟ್ಟವಿಚಾರ ಎಂದರು.

Follow Us:
Download App:
  • android
  • ios