Asianet Suvarna News Asianet Suvarna News

ಮಠದ ಆಸ್ತಿ ಮರ​ಳಿ​ಸ​ದಿ​ದ್ದರೆ ಕಾವಿ ಬಟ್ಟೆ ತೊರೆ​ಯು​ವೆ: ದಿಂಗಾ​ಲೇ​ಶ್ವರ ಶ್ರೀ

ಎರಡು ದಶ​ಕ​ಗ​ಳಿಂದ ಮಠ​ದಲ್ಲಿ ಯಾವುದೇ ಅಭಿ​ವೃದ್ಧಿ ಕೆಲ​ಸ​ವಾ​ಗದೆ ಆಸ್ತಿ ಪರ​ಭಾರೆಯೇ ಸಮಿ​ತಿಯ ದೊಡ್ಡ ಸಾಧನೆಯಾಗಿದೆ ಎಂದು ಕಿಡಿ​ಕಾ​ರಿ​ದ ಸ್ವಾಮೀಜಿ| ರಾಜ್ಯ​ದ​ಲ್ಲಿ​ರುವ ಸಾವಿ​ರಾರು ಮಠ​ಗಳು ಮೂಲ ಆಸ್ತಿ ಕಳೆ​ದು​ಕೊಂಡು ನಿರ್ಗ​ತಿ​ಕ​ವಾ​ಗಿವೆ| ದೊಡ್ಡ ದೊಡ್ಡ ಮಠ​ಗಳು ಸಹ ಈಗ ಅನ್ನ​ಪ್ರ​ಸಾದ, ಶಿಕ್ಷಣ ನೀಡ​ದಂತಹ ಸ್ಥಿತಿಗೆ ಬಂದಿವೆ| 

Dingaleshwara Shri Talks Over Murusaviramutt Property grg
Author
Bengaluru, First Published Jan 13, 2021, 12:41 PM IST

ಧಾರ​ವಾಡ(ಜ.13):  ಪರ​ಭಾ​ರೆ​ಯಾ​ಗಿ​ರುವ ಮೂರು ಸಾವಿರ ಮಠದ ಆಸ್ತಿ​ಯನ್ನು ಮರಳಿ ಪಡೆ​ಯುವ ವರೆಗೂ ವಿಶ್ರ​ಮಿ​ಸು​ವು​ದಿಲ್ಲ. ಆಸ್ತಿ ಮರ​ಳಿ​ಸದೆ ಹೋದಲ್ಲಿ ಕಾವಿ ಬಟ್ಟೆತೊರೆ​ಯುವೆ ಎಂದು ಬಾಲೆ ಹೊಸೂ​ರಿನ ದಿಂಗಾ​ಲೇ​ಶ್ವರ ಶ್ರೀ ಸವಾಲು ಹಾಕಿ​ದ್ದಾರೆ.

ಇಲ್ಲಿಯ ಗಾಂಧಿ ನಗರ ಈಶ್ವರ ದೇವ​ಸ್ಥಾ​ನ​ದಲ್ಲಿ ಮಂಗ​ಳ​ವಾರ ನಡೆದ ಶ್ರೀಮಠದ ಭಕ್ತರ ಸಭೆ​ಯಲ್ಲಿ ಮಾತ​ನಾ​ಡಿದ ಅವರು, ಎರಡು ದಶ​ಕ​ಗ​ಳಿಂದ ಮಠ​ದಲ್ಲಿ ಯಾವುದೇ ಅಭಿ​ವೃದ್ಧಿ ಕೆಲ​ಸ​ವಾ​ಗದೆ ಆಸ್ತಿ ಪರ​ಭಾರೆಯೇ ಸಮಿ​ತಿಯ ದೊಡ್ಡ ಸಾಧನೆಯಾಗಿದೆ ಎಂದು ಕಿಡಿ​ಕಾ​ರಿ​ದ್ದಾರೆ. ರಾಜ್ಯ​ದ​ಲ್ಲಿ​ರುವ ಸಾವಿ​ರಾರು ಮಠ​ಗಳು ಮೂಲ ಆಸ್ತಿ ಕಳೆ​ದು​ಕೊಂಡು ನಿರ್ಗ​ತಿ​ಕ​ವಾ​ಗಿವೆ. ದೊಡ್ಡ ದೊಡ್ಡ ಮಠ​ಗಳು ಸಹ ಈಗ ಅನ್ನ​ಪ್ರ​ಸಾದ, ಶಿಕ್ಷಣ ನೀಡ​ದಂತಹ ಸ್ಥಿತಿಗೆ ಬಂದಿವೆ. ಆದ್ದ​ರಿಂದ ಬರೀ ಮೂರು ಸಾವಿರ ಮಠ​ವಲ್ಲ ರಾಜ್ಯದ ಯಾವುದೇ ಮಠ-ಮಾನ್ಯ​ಗಳ ಆಸ್ತಿ ಪರ​ಭಾರೆ ಮಾಡ​ಬಾ​ರದು ಎಂಬುದೇ ನಮ್ಮ ಹೋರಾ​ಟದ ಉದ್ದೇಶ ಎಂದರು.

ಮೂರು ಸಾವಿರ ಮಠ ಆಸ್ತಿ ಪರ​ಭಾರೆ ವಿರೋ​ಧಿಸಿ ಈಗಾ​ಗಲೇ ಅಲ್ಲಲ್ಲಿ ಭಕ್ತರ ಸಭೆ ಕರೆ​ಯು​ತ್ತಿದ್ದು ಭಕ್ತರು ಸಹ ಸ್ವಾಗತ ಮಾಡು​ತ್ತಿದ್ದು ಇನ್ನೂ ಬಹು​ದೊಡ್ಡ ಚಳ​ವಳಿ ಆಗ​ಬೇ​ಕಿದೆ. ಈಗಾ​ಗಲೇ ಹುಬ್ಬ​ಳ್ಳಿ-ಧಾರ​ವಾ​ಡ​ದಲ್ಲಿ ಐದಾರು ಸಭೆ​ಗ​ಳನ್ನು ನಡೆ​ಸಿ​ದ್ದೇವೆ. ಇದು ಬಹು​ದೊಡ್ಡ ಆಂದೋ​ಲನ ಆಗುವ ವರೆಗೂ ನಾಡಿನ ನಾಯ​ಕ​ರಾ​ಗಲಿ, ಮಠದ ಆಡ​ಳಿತ ಮಂಡ​ಳಿ​ಯಾ​ಗಲಿ ಅಥವಾ ಭೂಮಿ ದಾನ ತೆಗೆ​ದು​ಕೊಂಡ​ವ​ರಾ​ಗಲಿ ಅವ​ಕಾಶ ಕೊಡದೇ ಕಾದು ನೋಡುವ ತಂತ್ರ ಕೈ ಬಿಟ್ಟು ಶೀಘ್ರಗತಿ​ಯಲ್ಲಿ ಮಠದ ಆಸ್ತಿ ಮರ​ಳಿ​ಸ​ಬೇಕು ಎಂದ​ರು.

ಮೂರುಸಾವಿರ ಮಠದ ರಕ್ಷಣೆಗೆ ಮುಂದಾಗಿದ್ದಕ್ಕೆ ಶ್ರೀಗಳಿಗೆಯೇ ಜೀವಬೆದರಿಕೆ..!

ಹೊಸೂರು, ಉಗ​ರ​ಗೋಳ ಮಠ​ಗಳ ಸ್ವಾಮೀ​ಜಿ​ಗಳು, ಮೂರು ಸಾವಿರ ಮಠದ ಭಕ್ತ​ರಾದ ಶಿವಾ​ನಂದ ಅಂಬ​ಡಗಟ್ಟಿ, ವೀರ​ಶೈವ ಮಹಾ​ಸಭಾ ಜಿಲ್ಲಾ​ಧ್ಯಕ್ಷ ಗುರು​ರ​ರಾಜ ಹುಣ​ಸಿ​ಮ​ರದ, ಈಶ್ವರ ಚಂದ್ರ​ಹೊ​ಸ​ಮನಿ, ಸದಾ​ನಂದ ಶಿವಳ್ಳಿ, ಎಂ.ಎಫ್‌. ಹಿರೇ​ಮಠ, ಅರುಣಾ ಹಳ್ಳಿ​ಕೇರಿ, ಸಿದ್ದಣ್ಣ ಕಂಬಾರ ಸ್ವಾಮೀಜಿ ಹೋರಾ​ಟಕ್ಕೆ ಕೈ ಜೋಡಿ​ಸು​ವು​ದಾಗಿ ತಿಳಿ​ಸಿ​ದ​ರು.

ಮಠ​ಗ​ಳನ್ನು ಭಕ್ತ​ರಿಗೆ ಬಿಟ್ಟು​ಕೊ​ಡಿ

ಆಡ​ಳಿತ, ವಿರೋಧ ಪಕ್ಷದ ರಾಜ​ಕಾ​ರ​ಣಿ​ಗಳೇ ಮಠದ ಸಮಿ​ತಿ​ಯ​ಲ್ಲಿ​ದ್ದಾರೆ. ಈ ಹಿನ್ನೆ​ಲೆ​ಯಲ್ಲಿ ಅವರ ಮೇಲೆ ನೇರ​ವಾಗಿ ಆರೋಪ ಮಾಡು​ತ್ತಿ​ದ್ದೇನೆ. ಇತ್ತೀ​ಚೆಗೆ ಮಠ, ದೇವ​ಸ್ಥಾ​ನ​ಗಳು ಭಕ್ತರ ಬದಲು ರಾಜ​ಕಾ​ರ​ಣಿ​ಗಳು ಕೈಯ​ಲ್ಲಿವೆ. ಎಲ್ಲ ರಂಗ​ಗ​ಳಲ್ಲಿ ಪ್ರವೇಶ ಮಾಡಿ​ದಂತೆ ಈಗ ದೇವ​ಸ್ಥಾ​ನ​ಗ​ಳಲ್ಲೂ ಅವರ ಪ್ರಭಾವ ಹೆಚ್ಚಿದೆ. ಎಲ್ಲಿಯ ವರೆಗೆ ಮಠ​ದಿಂದ ರಾಜ​ಕಾ​ರ​ಣಿ​ಗಳು ಹೊರಗೆ ಹೋಗು​ವು​ದಿ​ಲ್ಲವೋ ಅಲ್ಲಿಯ ವರೆಗೆ ಮಠ​ಗಳ ಉದ್ಧಾರ ಸಾಧ್ಯ​ವಿಲ್ಲ ಎಂದು ಬಾಲೆ​ಹೊ​ಸೂರಿನ ದಿಂಗಾ​ಲೇ​ಶ್ವರ ಸ್ವಾಮೀಜಿ ಹೇಳಿದ್ದಾರೆ. 
 

Follow Us:
Download App:
  • android
  • ios