ದೇಶದಲ್ಲಿ ಕೊರೋನಾ ವೈರಸ್‌ ಭೀತಿ ನಡುವೆಯೇ ಸಾಂಕ್ರಾಮಿಕ ರೋಗಗಳಿಂದಲೂ ಜನ ಮುಕ್ತಿ ಪಡೆದಿಲ್ಲ. ಕೋಲಾರದಲ್ಲಿ ವ್ಯಕ್ತಿಯೊಬ್ಬರು ಶಂಕಿತ ಡೆಂಘೀಗೆ ಬಲಿಯಾಗಿದ್ದಾರೆ. 

ಕೋಲಾರ(ಜ.31): ದೇಶದಲ್ಲಿ ಕೊರೋನಾ ವೈರಸ್‌ ಭೀತಿ ನಡುವೆಯೇ ಸಾಂಕ್ರಾಮಿಕ ರೋಗಗಳಿಂದಲೂ ಜನ ಮುಕ್ತಿ ಪಡೆದಿಲ್ಲ. ಕೋಲಾರದಲ್ಲಿ ವ್ಯಕ್ತಿಯೊಬ್ಬರು ಶಂಕಿತ ಡೆಂಘೀಗೆ ಬಲಿಯಾಗಿದ್ದಾರೆ. ಶಂಕಿತ ಡೆಂಘೀಗೆ ಯುವಕ ಬಲಿಯಾಗಿದ್ದು, ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ದೇವಗಾನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುನಿಶಿವ (35) ಶಂಕಿತ ಡೆಂಘೀಗೆ ಬಲಿಯಾದ ಯುವಕ. ಕಳೆದೊಂದು ವಾರದಿಂದ ಡೆಂಘೀ, ಟೈಫಾಯ್ಡ್‌ ಜ್ವರದಿಂದ ಬಳಲುತ್ತಿದ್ದ ಯುವಕ ಗುರುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಬೆಮೆಲ್ ಪೊಲೀಸ್ ಠಾಣಾ ವ್ಯಾಪ್ತಿಯ ದೇವಗಾನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.