Asianet Suvarna News Asianet Suvarna News

Ramanagara: ರಾಗಿ ಬೆಂಬಲ ಬೆಲೆ ನೋಂದ​ಣಿ​ಯಲ್ಲಿ ಕುಸಿತ!

ನಿರಂತರ ಮಳೆ​ಯಿಂದಾಗಿ ಸಾಕಷ್ಟುಬೆಳೆ ಕಳೆ​ದು​ಕೊಂಡಿ​ರುವ ರೈತ​ರಿಗೆ ಈ ಬಾರಿ ಕೇಂದ್ರ ಸರ್ಕಾ​ರದ ಕನಿಷ್ಠ ಬೆಂಬಲ ಬೆಲೆ ಯೋಜ​ನೆ​ಯಡಿ ಲಾಭ ಸಿಗು​ವುದು ಕೂಡ ಅನು​ಮಾನ​ವಾ​ಗಿದೆ. ಜಿಲ್ಲೆ​ಯಾ​ದ್ಯಂತ ಆರಂಭ​ಗೊಂಡಿ​ರುವ ರಾಗಿ ಬೆಳೆ​ಗಾ​ರರ ನೋಂದಣಿ ಪ್ರಕ್ರಿ​ಯೆಯಲ್ಲಿ ಕುಸಿತ ಕಂಡಿದೆ.

Decline in millet support price register at ramanagara gvd
Author
First Published Dec 28, 2022, 8:04 AM IST

ಎಂ.ಅಫ್ರೋಜ್‌ ಖಾನ್‌

ರಾಮ​ನ​ಗರ (ಡಿ.28): ನಿರಂತರ ಮಳೆ​ಯಿಂದಾಗಿ ಸಾಕಷ್ಟು ಬೆಳೆ ಕಳೆ​ದು​ಕೊಂಡಿ​ರುವ ರೈತ​ರಿಗೆ ಈ ಬಾರಿ ಕೇಂದ್ರ ಸರ್ಕಾ​ರದ ಕನಿಷ್ಠ ಬೆಂಬಲ ಬೆಲೆ ಯೋಜ​ನೆ​ಯಡಿ ಲಾಭ ಸಿಗು​ವುದು ಕೂಡ ಅನು​ಮಾನ​ವಾ​ಗಿದೆ. ಜಿಲ್ಲೆ​ಯಾ​ದ್ಯಂತ ಆರಂಭ​ಗೊಂಡಿ​ರುವ ರಾಗಿ ಬೆಳೆ​ಗಾ​ರರ ನೋಂದಣಿ ಪ್ರಕ್ರಿ​ಯೆಯಲ್ಲಿ ಕುಸಿತ ಕಂಡಿದೆ. ಡಿ.15 ರಿಂದಲೇ ನೋಂದಣಿ ಶುರು​ವಾ​ದರೂ ಜಿಲ್ಲೆ​ಯಲ್ಲಿ ಇಲ್ಲಿ​ವ​ರೆಗೆ ಕೇವಲ 12,503 ಮಂದಿ ರಾಗಿ ಬೆಳೆ​ಗಾ​ರರು ಮಾತ್ರ ಹೆಸರು ನೋಂದಣಿ ಮಾಡಿ​ಕೊಂಡಿ​ದ್ದಾರೆ. ಇನ್ನು 43 ಭತ್ತ ಬೆಳೆ​ಗಾ​​ರ​ರ ಹೆಸರು ನೋಂದಣಿ ಮಾಡಿ​ಕೊಂಡ​ವ​ರ ಪಟ್ಟಿ​ಯ​ಲ್ಲಿ​ದೆ. 

ಕಳೆದ ವರ್ಷ 20,547 ಮಂದಿ ರಾಗಿ ಬೆಳೆ​ಗಾ​ರರು ಹೆಸರು ನೋಂದಣಿ ಮಾಡಿ​ಕೊಂಡು 337598 ಕ್ವಿಂಟಾಲ್‌ ರಾಗಿ​ಯನ್ನು ಖರೀದಿ ಕೇಂದ್ರ​ಗ​ಳಲ್ಲಿ ಮಾರಾಟ ಮಾಡಿ​ದ್ದರು. ಈಗ ನೋಂದಣಿ ಮಾಡಿ​ಕೊಂಡಿ​ರುವ 12,503 ರೈತರು 1,89,890 ಕ್ವಿಂಟಲ್‌ ರಾಗಿ ಮಾರಾಟ ಮಾಡು​ವು​ದಾಗಿ ತಿಳಿ​ಸಿ​ದ್ದಾರೆ. ಕೇಂದ್ರ ಸರ್ಕಾರ ಕ್ವಿಂಟಾಲ್‌ ರಾಗಿಗೆ 3,758 ರುಪಾಯಿ ಬೆಂಬಲ ಬೆಲೆ ಘೋಷಿ​ಸಿ​ದ್ದರೂ ಈ ವರ್ಷ ಮಳೆಯ ಕಾರ​ಣಕ್ಕೆ ಅಪಾರ ಪ್ರಮಾ​ಣದ ರಾಗಿ ಕಳೆ​ದು​ಕೊಂಡಿ​ರುವ ರೈತ​ರಿಗೆ ಕೇಂದ್ರ ಸರ್ಕಾ​ರದ ಬೆಲೆ ಲಾಭ ಸಿಗದೇ ದೂರ ಉಳಿ​ಯು​ವಂತಾ​ಗಿ​ದೆ.

ಲಿಂಗಪ್ಪರಿಗೆ ವಯ​ಸ್ಸಾಗಿದೆ ಅಭಿ​ವೃದ್ಧಿ ಕೆಲಸ ಕಾಣು​ತ್ತಿಲ್ಲ: ಅನಿತಾ ಕುಮಾರಸ್ವಾಮಿ

ಜಿಲ್ಲೆ​ಯಲ್ಲಿ 77 ಸಾವಿರ ಹೆಕ್ಟೇರ್‌ ಗುರಿ​ಯಲ್ಲಿ 66,719 ಹೆಕ್ಟೇರ್‌ ರಾಗಿ ಬೆಳೆ​ಯ​ಲಾ​ಗಿದ್ದು, ಇದ​ರಲ್ಲಿ ಶೇಕಡ 20ರಷ್ಟುರಾಗಿ ಬೆಳೆ ಮಳೆ​ಯಿಂದ ನಾಶ​ವಾ​ಗಿದೆ. ಈಗಾ​ಗಲೇ ಚನ್ನಪಟ್ಟಣ, ಕನಕಪುರ, ಮಾಗಡಿ ಹಾಗೂ ರಾಮನಗರ ತಾಲೂಕುಗಳಲ್ಲಿಯೂ ಖರೀದಿ ಕೇಂದ್ರ ತೆರೆಯಲಾಗಿದೆ. ಆದ​ರೀಗ ನೋಂದ​ಣಿ ಪ್ರಕ್ರಿ​ಯೆ​ಗೆ ಬೆಳೆ​ಗಾ​ರರು ಹಿಂದೇಟು ಹಾಕು​ತ್ತಿ​ರು​ವುದು ಕಂಡು ಬಂದಿದೆ. ಇಲ್ಲಿ​ವ​ರೆಗೆ ಚನ್ನ​ಪ​ಟ್ಟಣ ತಾಲೂ​ಕಿ​ನಲ್ಲಿ 1283, ಕನ​ಕ​ಪುರ - 3595, ಮಾಗಡಿ - 5899 ಹಾಗೂ ರಾಮ​ನ​ಗರ ತಾಲೂ​ಕಿ​ನಲ್ಲಿ 1726 ಮಂದಿ ರಾಗಿ ಬೆಳೆ​ಗಾ​ರ​ರು ನೋಂದಣಿ ಮಾಡಿ​ಸಿ​ಕೊಂಡಿ​ದ್ದಾರೆ. ಕಳೆದ ವರ್ಷಕ್ಕೆ ಹೋಲಿ​ಸಿ​ದರೆ ಈ ಬಾರಿ ರೈತರ ನೋಂದಣಿ ಪ್ರಮಾಣ ಭಾರೀ ಸಂಖ್ಯೆ​ಯಲ್ಲಿ ಕುಸಿತ ಕಂಡಿ​ರು​ವುದು ಸ್ಪಷ್ಟ​ವಾ​ಗಿದೆ.

ರಾಗಿ ಖರೀದಿ ಮಿತಿಗೆ ಆಕ್ರೋ​ಶ: ರಾಜ್ಯ ಸರ್ಕಾರ ರಾಗಿ​ಯನ್ನು ಬೆಂಬಲ ಬೆಲೆ ಯೋಜ​ನೆ​ಯಡಿ ಖರೀ​ದಿಗೆ ಮಿತಿ ಹೇರಿ​ರು​ವುದು ರೈತರ ಆಕ್ರೋ​ಶಕ್ಕೆ ಕಾರ​ಣ​ವಾ​ಗಿದೆ. ಎಕರೆ ಕನಿಷ್ಠ 10 ರಿಂದ 20 ಕ್ವಿಂಟಲ್‌ ರಾಗಿ ಮಾರಾ​ಟಕ್ಕೆ ಮಾತ್ರ ರೈತ​ರಿಗೆ ಅವ​ಕಾಶ ನೀಡಿದ್ದು, ಈ ಯೋಜ​ನೆ​ಯಡಿ ದೊಡ್ಡ ರೈತ​ರನ್ನು ಸರ್ಕಾರ ದೂರ ಇಟ್ಟಿ​ದೆ ಎಂಬ ಆರೋಪ ರೈತ​ರಿಂದ ಕೇಳಿ ಬರುತ್ತಿದೆ. ಅಲ್ಲದೆ, 5 ಲಕ್ಷ ಮೆಟ್ರಿಕ್‌ ರಾಗಿ ಖರೀದಿ ಬಳಿಕ ರಾಗಿ ಖರೀದಿ ಪ್ರಕ್ರಿ​ಯೆ​ಯನ್ನು ಸರ್ಕಾರ ಸ್ಥಗಿ​ತ​ಗೊ​ಳಿ​ಸುವ ಬಗ್ಗೆ ಸರ್ಕಾರ ಆದೇ​ಶಿ​ಸಿ​ರು​ವುದು ಕೂಡ ರಾಗಿ ಬೆಳೆ​ಗಾ​ರರು ಕಣ್ಣು ಕೆಂಪಾ​ಗಿ​ಸಿದೆ. ಸರ್ಕಾರ ಯಾವುದೇ ಮಿತಿ ಹೇರದೆ ರಾಗಿ​ಯನ್ನು ರೈತ​ರಿಂದ ಬೆಂಬಲ ಯೋಜ​ನೆ​ಯಡಿ ಖರೀ​ದಿ​ಸ​ಬೇ​ಕೆಂಬ ಆಗ್ರಹ ಕೇಳಿ ಬರು​ತ್ತಿದೆ.

2023ರ ಮಾರ್ಚ್‌ಗೆ ಖರೀದಿ ಕಾರ್ಯ ಪೂರ್ಣ: ಪ್ರತಿ ಕ್ವಿಂಟಾಲ್‌ಗೆ 3578 ​ರು.ಗಳು ರಾಗಿ, ಪ್ರತಿ ಕ್ವಿಂಟಾಲ್‌ಗೆ 2040 ರು.ಗಳು ಸಾಮಾನ್ಯ ಭತ್ತ ಹಾಗೂ 2060 ರು.ಗಳು ಗ್ರೇಡ್‌-ಎ ಭತ್ತ ಖರೀದಿಸಲು ನಿಗದಿ ಪಡಿಸಲಾಗಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತರವರು ಖರೀದಿ ಏಜೆನ್ಸಿಯಾಗಿದ್ದು, 2023ರ ಜನವರಿ 1 ರಿಂದ 2023ರ ಮಾ.31ರ ವರೆಗೆ ಖರೀದಿ ಕಾರ್ಯ ಪೂರ್ಣಗೊಳ್ಳಲಿದೆ. ಭತ್ತವನ್ನು ರೈತರ ಉತ್ಪಾದನೆಗನುಗುಣವಾಗಿ ಪ್ರತಿ ಎಕರೆಗೆ 25 ಕ್ವಿಂಟಾಲ್‌ನಂತೆ ಗರಿಷ್ಠ 40 ಕ್ವಿಂಟಾಲ…ವರೆಗೆ ಖರೀದಿಸಲಾಗುವುದು. ರಾಗಿಯನ್ನು ರೈತರ ಉತ್ಪಾದನೆಗನುಗುಣವಾಗಿ ಸಣ್ಣ ಮತ್ತು ಅತೀ ಸಣ್ಣ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್‌ ರಾಗಿ ಖರೀದಿಸಲಾಗುವುದು.

Ramanagara: ಕ್ಷೇತ್ರಕ್ಕೆ ಉತ್ಸವ ಮೂರ್ತಿಯಂತೆ ಬರುವ ಎಚ್ಡಿಕೆ: ಯೋಗೇಶ್ವರ್‌ ಆರೋಪ

ತಾಲೂಕು ನೋಂದ​ಣಿ​ಯಾದ ರಾಗಿ ಬೆಳೆ​ಗಾ​ರರು ರಾಗಿ ಪ್ರಮಾಣ (ಕ್ವಿಂಟಾಲ್‌)
ಚನ್ನ​ಪ​ಟ್ಟಣ 1283 19866
ಕನ​ಕ​ಪುರ 3595 52794
ಮಾಗಡಿ 5899 92080
ರಾಮ​ನ​ಗರ 1726 25150

Follow Us:
Download App:
  • android
  • ios