* ಚಿತ್ರದುರ್ಗ ಜಿಲ್ಲೆಯ ಇಸಾಮುದ್ರ ಹೊಸಹಟ್ಟಿ ಗ್ರಾಮದಲ್ಲಿ ನಡೆದ ಘಟನೆ* ರಾತ್ರಿ ಊಟದ ವೇಳೆ ಮುದ್ದೆ ಸೇವಿಸಿದ ನಂತರ ಸಾವು* ಓರ್ವನನ್ನ ಆಸ್ಪತ್ರೆಗೆ ದಾಖಲು
ಸಿರಿಗೆರೆ(ಜು.14): ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿಯ ಇಸಾಮುದ್ರ ಹೊಸಹಟ್ಟಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ತಿಪ್ಪಾನಾಯ್ಕ (46), ತಾಯಿ ಗುಂಡಿಬಾಯಿ (80), ಪತ್ನಿ ಸುಧಾಬಾಯಿ (43) ಹಾಗೂ ಪುತ್ರಿ ರಮ್ಯಾ(16) ಮೃತರು. ಮತ್ತೊಬ್ಬ ಪುತ್ರಿ ರಕ್ಷಿತಾ ಪಾರಾಗಿದ್ದಾಳೆ.
ಕೋಲಾರ : ಕಾರ್ಖಾನೆ ವಿಷದ ನೀರಲ್ಲಿ ಬೆಳೆದ ಹುಲ್ಲು ತಿಂದು ಲಕ್ಷಾಂತರ ಬೆಲೆಯ ಎರಡು ಹಸು ಸಾವು
ಪುತ್ರ ರಾಹುಲ್ (18)ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ ಊಟದ ವೇಳೆ ಮುದ್ದೆ ಸೇವಿಸಿದವರು ಮೃತಪಟ್ಟಿದ್ದಾರೆ.
