ವಿಶಾಖಪಟ್ಟಣದ ಬಳಿ ವಿಷಾನಿಲ ಸೋರಿಕೆ| ಘಟನೆ ನಡೆದ ಪ್ರದೇಶದಲ್ಲಿ ಕರ್ನಾಟಕದವರು ಸಿಲುಕಿದ್ದರೆ ಪತ್ತೆ ಮಾಡಲು ಸಹಾಯವಾಣಿ ಆರಂಭ| ರಾಯಚೂರು ಜಿಲ್ಲಾಡಳಿತದಿಂದ ಸಹಾಯವಾಣಿ ಸಂಖ್ಯೆ (08532 228559 ಮತ್ತು 8660761866)|

ಬೆಂಗಳೂರು(ಮೇ.08): ಆಂಧ್ರಪ್ರದೇಶದ ವಿಶಾಖಪಟ್ಟಣದ ಬಳಿ ವಿಷಾನಿಲ ಸೋರಿಕೆ ಘಟನೆ ನಡೆದ ಪ್ರದೇಶದಲ್ಲಿ ಕರ್ನಾಟಕದವರು ಸಿಲುಕಿದ್ದರೆ ಪತ್ತೆ ಮಾಡಲು ಹಾಗೂ ಸಹಾಯ ಒದಗಿಸುವ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಸಹಾಯವಾಣಿ ಆರಂಭಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಯಚೂರು ಜಿಲ್ಲಾಡಳಿತದಿಂದ ಈ ಸಹಾಯವಾಣಿ (08532 228559 ಮತ್ತು 8660761866) ಆರಂಭಿಸಲಾಗಿದೆ. ಸಂತ್ರಸ್ತರು ಈ ಸಹಾಯವಾಣಿಯ ಪ್ರಯೋಜನ ಪಡೆಯಬಹುದು ಎಂದು ಸವದಿ ಹೇಳಿದ್ದಾರೆ.

ವಿಷಾನಿಲ ಸೋರಿಕೆ, 11 ಸಾವು, 200ಕ್ಕೂ ಹೆಚ್ಚು ಮಂದಿ ಗಂಭೀರ!

ಈ ವಿಷಾನಿಲ ಸೋರಿಕೆ ಪ್ರಕರಣದಿಂದ ಅಪಾರ ಸೋವು-ನೋವು ಉಂಟಾಗಿರುವುದು ದುರ್ದೈವ. ಈ ದುರ್ಘಟನೆಯಿಂದ ನೊಂದವರಿಗೆ ಸಾಂತ್ವನ ಹೇಳಿರುವ ಸಚಿವರು, ಘಟನೆಯಿಂದ ತೊಂದರೆಗೆ ಒಳಗಾದ, ಅನಾರೋಗ್ಯಕ್ಕೆ ಈಡಾಗಿರುವ ಹಾಗೂ ಗಾಯಗೊಂಡಿರುವವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.