ಧರ್ಮಸ್ಥಳಕ್ಕೆ ಮತ್ತೆರಡು ಮಾರ್ಗವಾಗಿ ಸರ್ಕಾರಿ ಬಸ್ ಸೇವೆ ಒದಗಿಸಲು ಆಗ್ರಹಿಸಲಾಗಿದೆ.

ಚನ್ನಗಿರಿ (ಸೆ.23): ದಾವಣಗೆರೆಯಿಂದ ಚನ್ನಗಿರಿ ಮಾರ್ಗವಾಗಿ ಹಾಗೂ ಶಿವಮೊಗ್ಗದಿಂಧ ಚನ್ನಗಿರಿ ಮಾರ್ಗವಾಗಿ ಧರ್ಮಸ್ಥಳಕ್ಕೆ ಸರ್ಕಾರಿ ಬಸ್ ಸಂಚಾರ ಮಾಡಲು ಮನವಿ ಮಾಡಲಾಗಿದೆ.

Add Asianetnews Kannada as a Preferred SourcegooglePreferred

ನಿವೃತ್ತ ಶಿಕ್ಷಕ ಜವಳಿ ಮಲ್ಲಿಕಾರ್ಜುನ್, ಶ್ರೀನಿವಾಸ್ ರಾಕೇಶ್, ರುದ್ರಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದಾವಣಗೆರೆಯಿಂದ ಬಾಡ, ತಣಿಗೆರೆ, ಸಂತೆಬೆನ್ನೂರು, ದೇವರಹಳ್ಳಿ ಮಾರ್ಗವಾಗಿ ಚನ್ನಗಿರಿಯಿಂದ ಪಾಂಡೋಮಟ್ಟಿ, ತಾವರೆಕರೆ ಮಾರ್ಗವಾಗಿ ಬೀರೂರು ಮೂಲಕ ಧರ್ಮಸ್ಥಳಕ್ಕೆ ಸಂಚರಿಸುವ ಬಸ್ ಅವಶ್ಯಕತೆ ಇದ್ದು, ಈ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದರು.

ಕೊರೋನಾ ಭೀತಿ ನಡುವೆ ಮಹಾರಾಷ್ಟ್ರಕ್ಕೆ KSRTC ಬಸ್‌ ಸೇವೆ ...

1994ರಲ್ಲಿ ದಾವಣಗೆರೆಯಿಂದ ಚನ್ನಗಿರಿ ಮಾರ್ಗವಾಗಿ ಧರ್ಮಸ್ಥಳಕ್ಕೆ ಬಸ್ ಸಂಚರಿಸುತಿತ್ತು. ಆದರೆ 2 ವರ್ಷವಷ್ಟೇ ಈ ಮಾರ್ಗವಾಗಿ ಬಸ್ ಸಂಚಾರ ಮಾಡುತ್ತಿದ್ದವು.ಆದರೆ ಬಳಿಕ ಸಂಚಾರ ಬಂದ್ ಮಾಡಲಾಯಿತು.