ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದರೆ ಹಲವು ಜಿಲ್ಲೆಗಳಲ್ಲಿ ಶೂನ್ಯಕ್ಕೆ ಉಡುಪಿಯಲ್ಲಿ ಈಗಲೂ ಎರಡಂಕಿ, ಮೂರಂಕಿ ಕೊರೋನಾ ಪಾಸಿಟಿವ್ ಕೇಸ್ ಜಿಲ್ಲೆಯಲ್ಲಿ ಡೆಂಗ್ಯೂ ಮಾರಿ ಅಬ್ಬರ ಹೆಚ್ಚಳ
ಉಡುಪಿ (ಸೆ.16): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದರೆ ಹಲವು ಜಿಲ್ಲೆಗಳಲ್ಲಿ ಶೂನ್ಯಕ್ಕೆ ಇಳಿದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಉಡುಪಿಯಲ್ಲಿ ಈಗಲೂ ಎರಡಂಕಿ, ಮೂರಂಕಿ ಕೊರೋನಾ ಪಾಸಿಟಿವ್ ಕೇಸ್ ದಾಖಲಾಗುತ್ತಿದ್ದು, ಆದರೆ ಡೆಂಗ್ಯೂ ಮಾರಿ ಅಬ್ಬರಿಸಲಾರಂಭಿಸಿದೆ.
3ನೇ ಅಲೆ ಆರಂಭದ ಸೂಚನೆ : ಕೋವಿಡ್ ಮಹಾಸ್ಫೋಟ
ಈ ವರ್ಷ ಸೆಪ್ಟೆಂಬರ್ ವೇಳೆಗೆ 302 ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಕಳೆದ ವರ್ಷ ಈ ಸಮಯಕ್ಕೆ ಕೇವಲ 139 ಪ್ರಕರಣ ಕಂಡು ಬಂದಿತ್ತು.
ನಿರಂತರ ಮಳೆಯ ಕಾರಣಕ್ಕೆ ಡೆಂಗ್ಯೂ ಹೆಚ್ಚಳವಾಗಿದ್ದು, ಸೆಪ್ಟೆಂಬರ್ ಮಧ್ಯಭಾಗದಲ್ಲೂ ನಿರಂತರ ಮಳೆಯಿದ್ದು ಜೂನ್, ಜುಲೈ, ಆಗಸ್ಟ್ ತಿಂಗಳಲ್ಲೇ ಅತೀಹೆಚ್ವು ಪ್ರಕರಣ ಪತ್ತೆಯಾಗಿವೆ.
ಜೂನ್-108, ಜುಲೈ- 107, ಆಗಸ್ಟ್ - 76 ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ. 2017 ರ ನಂತರ ಈ ವರ್ಷವೇ ಹೆಚ್ಚಿನ ಡೆಂಗ್ಯೂ ಪ್ರಕರಣ ಪತ್ತೆಯಾಗಿವೆ.
