ಕೊರೋನಾ ವೈರಸ್ ತಗುಲಿದ್ದ ನಗರದ ಟೆಕ್ಕಿ ಗುಣಮುಖ
ಕೊರೋನಾ ವೈರಸ್ ತಗುಲಿದ್ದ ಬೆಂಗಳೂರಿನ ಟೆಕ್ಕಿ ಗುಣಮುಖರಾಗಿದ್ದಾರೆ. ಟೆಕ್ಕಿಯನ್ನು ಸರ್ಕಾರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತೆಲಂಗಾಣ ಆರೋಗ್ಯ ಸಚಿವ ಇ.ರಾಜೇಂದ್ರ ತಿಳಿಸಿದ್ದಾರೆ.
ಬೆಂಗಳೂರು [ಮಾ.14] : ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿರುವ ತೆಲಂಗಾಣ ಮೂಲದ ಎಂಜಿನಿಯರ್ ಕೊರೋನಾ ವೈರಸ್ನಿಂದ ಗುಣಮುಖನಾಗಿದ್ದಾನೆ. ಟೆಕ್ಕಿಯನ್ನು ಸರ್ಕಾರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತೆಲಂಗಾಣ ಆರೋಗ್ಯ ಸಚಿವ ಇ.ರಾಜೇಂದ್ರ ತಿಳಿಸಿದ್ದಾರೆ.
ಕೊರೋನಾ ವೈರಸ್ ದೃಢಪಟ್ಟಹಿನ್ನೆಲೆಯಲ್ಲಿ 24 ವರ್ಷದ ಟಿಕ್ಕಿಯನ್ನು ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿತ್ತು. ಎರಡು ಬಾರಿ ವೈರಸ್ ಪರೀಕ್ಷೆಯ ವೇಳೆಯೂ ನೆಗೆಟಿವ್ ಆಗಿದೆ. ಹೀಗಾಗಿ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕೊರೋನಾಗೆ ವೃದ್ಧ ಬಲಿ: ತುರ್ತು ಸಂದರ್ಭ ನಿಭಾಯಿಸುವಲ್ಲಿ ಕಲಬುರಗಿ ಜಿಲ್ಲಾಡಳಿತ ನಿರ್ಲಕ್ಷ್ಯ?
ಕಳೆದ ತಿಂಗಳು ದುಬೈಗೆ ತೆರಳಿದ್ದ ವೇಳೆ ಟಿಕ್ಕಿಗೆ ಕೊರೋನಾ ವೈರಸ್ ತಗುಲಿತ್ತು ಎಂದು ಶಂಕಿಸಲಾಗಿತ್ತು. ಬಳಿಕ ಆತ ಬೆಂಗಳೂರಿಗೆ ಬಂದು ಕೆಲಸ ನಿರ್ವಹಿಸಿ ಹೈದರಾಬಾದ್ಗೆ ಬಸ್ ಮೂಲಕ ತೆರಳಿದ್ದ. ಜ್ವರ ಹಾಗೂ ಕೊರೋನಾ ವೈರಸ್ನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಬಳಿಕ ಗಾಂಧಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೇಳೆ ಕೊರೋನಾ ವೈರಸ್ ಇರುವುದು ದೃಢಪಟ್ಟಿತ್ತು.
ಈ ಹಿನ್ನೆಲೆಯಲ್ಲಿ ಆತ ಬೆಂಗಳೂರಿನಲ್ಲಿ ವಿಮಾನ ನಿಲ್ದಾಣ ಬಂದಿದ್ದ ಕಾರು ಚಾಲಕ, ಆತ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದ ಪಿಜಿ, ಆತನೊಂದಿಗೆ ಕಾರ್ಯನಿರ್ವಹಿಸಿದ್ದ ಕಂಪನಿ ಸಿಬ್ಬಂದಿ, ಆತ ಹೈದರಾಬಾದ್ಗೆ ತೆರಳಿದ್ದ ಬಸ್ನಲ್ಲಿದ್ದ 20ಕ್ಕೂ ಹೆಚ್ಚು ಜನರನ್ನು ಪತ್ತೆ ಹಚ್ಚಿ ಅವರನ್ನೆಲ್ಲಾ ಪ್ರತ್ಯೇಕವಾಗಿರಿಸಿ, ಕಣ್ಗಾವಲು ಇಡಲಾಗಿತ್ತು.