Asianet Suvarna News Asianet Suvarna News

karnataka politics : ಸಿದ್ದರಾಮಯ್ಯ ಮೂಲತಃ ಕಾಂಗ್ರೆಸ್‌ ವಿರೋಧಿ : ತತ್ವ ಒಪ್ಪುವುದಿಲ್ಲ

ಜನತಾ ಪರಿವಾರದಿಂದ ಬಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲತಃ ಕಾಂಗ್ರೆಸ್‌ ವಿರೋಧಿ. ಅವರು ಕಾಂಗ್ರೆಸ್‌ ವಿರೋಧಿಯಾಗಿ ಬಹುತೇಕ ರಾಜಕಾರಣಕ್ಕೆ ಬಂದವರು. ಹೀಗಾಗಿ, ಕಾಂಗ್ರೆಸ್‌ ಪಕ್ಷದ ತತ್ವ-ಸಿದ್ಧಾಂತಗಳನ್ನು ಅವರು ಮೈಗೂಡಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

Congress philosophy does not agree with Siddaramaiah snr
Author
First Published Dec 10, 2022, 6:06 AM IST

  ಬಾಗಲಕೋಟೆ : ಜನತಾ ಪರಿವಾರದಿಂದ ಬಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲತಃ ಕಾಂಗ್ರೆಸ್‌ ವಿರೋಧಿ. ಅವರು ಕಾಂಗ್ರೆಸ್‌ ವಿರೋಧಿಯಾಗಿ ಬಹುತೇಕ ರಾಜಕಾರಣಕ್ಕೆ ಬಂದವರು. ಹೀಗಾಗಿ, ಕಾಂಗ್ರೆಸ್‌ ಪಕ್ಷದ ತತ್ವ-ಸಿದ್ಧಾಂತಗಳನ್ನು ಅವರು ಮೈಗೂಡಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಜಿಲ್ಲೆಯ ಹುನಗುಂದದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಇಂದು ಒತ್ತಾಯಪೂರ್ವಕವಾಗಿ ಕಾಂಗ್ರೆಸ್‌ ಪರವಾಗಿ ಮಾತನಾಡುವಂತಾಗಿದೆ. ಇನ್ನು ಮುಂದೆ ದೇಶದಲ್ಲಿ ಕಾಂಗ್ರೆಸ್‌ (Congress ) ಪಕ್ಷ ಉಳಿಯಲು ಸಾಧ್ಯವಿಲ್ಲ. ಗುಜರಾತನಲ್ಲಿ ಬಂದಿರುವ ದಯನೀಯ ಸ್ಥಿತಿಯೇ ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲೂ ಕಾಂಗ್ರೆಸ್‌ ಪಕ್ಷಕ್ಕೆ ಬರಲಿದೆ ಎಂದರು.

ಬಿಜೆಪಿ ಸೇರಲು ಜನ ಸಾಲಿನಲ್ಲಿದ್ದಾರೆ:

ಆಪರೇಷನ್‌ ಕಮಲದ ಪ್ರಯೋಗ ಹಿಮಾಚಲ ಪ್ರದೇಶದ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಅವರು, ಜನರು ಬಯಸಿ ಬಿಜೆಪಿಗೆ ಬರುತ್ತಿದ್ದಾರೆ. ದೇಶದ ಸುರಕ್ಷತೆ, ಅಭಿವೃದ್ಧಿಗೆ ಬಿಜೆಪಿ ಬೇಕೇಬೇಕು ಎಂಬ ಅರಿವು ಜನರಿಗಿದೆ. ಅದಕ್ಕಾಗಿ ಬಿಜೆಪಿ ಸೇರಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಗುಲಾಮ್‌ನಬಿ ಆಜಾದರಂಥ ಹಿರಿಯ ನಾಯಕರೇ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಗೆ ಬಂದಿದ್ದಾರೆ. ಇದನ್ನು ಗಮನಿಸಿದರೆ ಆ ಪಕ್ಷದ ಪರಿಸ್ಥಿತಿ ಹೇಗಿರಬಹುದು ಎಂದು ಗೊತ್ತಾಗುತ್ತದೆ ಎಂದು ವಿಶ್ಲೇಷಿಸಿದರು.

ದೇಶದ ಇತಿಹಾಸದಲ್ಲಿಯೇ ಗುಜರಾತ್‌ ಚುನಾವಣೆ ಫಲಿತಾಂಶ ಐತಿಹಾಸಿಕವಾಗಿದೆ. 120 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಇಂದು ಗುಜರಾತನಲ್ಲಿ ಕೇವಲ 16 ಸ್ಥಾನವನ್ನು ಗೆಲ್ಲುವ ಮೂಲಕ ಅಧಿಕೃತ ಪ್ರತಿಪಕ್ಷದ ಸ್ಥಾನ ಕೂಡ ಅವರಿಗೆ ಸಿಕ್ಕಿಲ್ಲ ಎಂದರೆ ಆ ಪಕ್ಷ ಯಾವ ಸ್ಥಿತಿಯಲ್ಲಿರಬಹುದು ಎಂದು ಗೊತ್ತಾಗುತ್ತದೆ. 10 ವರ್ಷಗಳ ಹಿಂದೆಯೇ ಪ್ರಧಾನಿ ಮೋದಿ ಶೀಘ್ರವೇ ಭಾರತ ಕಾಂಗ್ರೆಸ್‌ ಮುಕ್ತ ಆಗಲಿದೆ ಎಂದು ಹೇಳಿದ್ದರು. ದೇಶದ ಜನರು ಮೋದಿ ಆಡಳಿತವನ್ನು ಮೆಚ್ಚಿದ್ದಾರೆ. ದೇಶ ಸುರಕ್ಷಿತವಾಗಿ ಇರಬೇಕು ಎಂದರೆ ಮೋದಿ ಆಡಳಿತವೇ ಇರಬೇಕು ಎನ್ನುವುದು ಜನರ ಬಯಕೆಯಾಗಿದೆ. ವಿಶ್ವವೇ ಮೋದಿ ಅವರೇ ವಿಶ್ವ ನಾಯಕರಾಗಬೇಕು ಎಂದು ಬಯಸುತ್ತಿದೆ. ದೇಶದಲ್ಲಿ ಅಷ್ಟೇ ಅಲ್ಲ, ವಿಶ್ವದಲ್ಲಿ ಭಾರತದ ಕೀರ್ತಿ, ಗೌರವವನ್ನು ಹೆಚ್ಚಿಸುವ ಕೆಲಸ ಮೋದಿ ಆಡಳಿತದಲ್ಲಿ ಆಗಿದೆ ಎಂದರು.

Karnataka Politics : ಸಿದ್ದರಾಮಯ್ಯ ಭಾವಿ ಮುಖ್ಯಮಂತ್ರಿ : ಸ್ವಾಮೀಜಿ

ಹಿಮಾಚಲ ಪ್ರದೇಶದಲ್ಲಿನ ಸೋಲಿಗೆ ಪ್ರತಿಕ್ರಿಯಿಸಿದ ಸಚಿವ ಕಾರಜೋಳ, ಅಲ್ಲಿ ಪ್ರತಿ ಸಾರಿ ಬೇರೆಬೇರೆ ಪಕ್ಷದ ಸರ್ಕಾರವನ್ನು ಆಯ್ಕೆ ಮಾಡುವುದು ಸಾಮಾನ್ಯವಾಗಿದೆ. ಅದು ಅಲ್ಲಿನ ಜನರ ಪರಮಾಧಿಕಾರವಾಗಿದೆ. ನಾವು ಅದನ್ನು ಗೌರವಿಸುತ್ತೇವೆ ಎಂದರು.

ಹಿರಿಯರನ್ನು ಕೈಬಿಡುತ್ತಾರೆ ಎಂಬುದು ಗಾಳಿಸುದ್ದಿ

ಮುಂಬರುವ ರಾಜ್ಯದ ಸಾರ್ವತ್ರಿಕ ಚುನಾವಣೆಯಲ್ಲಿ ಈ ಬಾರಿ ರಾಜ್ಯದ ಬಿಜೆಪಿಯಲ್ಲಿಯೂ ಗುಜರಾತ್‌ ಮಾದರಿಯನ್ನು ಇಟ್ಟುಕೊಂಡು ಯುವಕರಿಗೆ ಮಣೆ ಹಾಕಲಾಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ಕಾರಜೋಳ, ನಮ್ಮ ಪಕ್ಷದ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬದಲಾವಣೆ ಮಾಡುವ ಅನಿವಾರ್ಯತೆ ಇದ್ದರೆ, ಖಂಡಿತ ಬದಲಾವಣೆ ಮಾಡುತ್ತಾರೆ. ಹಿರಿಯರನ್ನು ಕೈ ಬಿಡುತ್ತಾರೆ ಅನ್ನುವುದೆಲ್ಲ ಕೇವಲ ಗಾಳಿ ಸುದ್ದಿ. ಅಂತಹ ಯಾವುದೇ ಪ್ರಕ್ರಿಯೆ ರಾಜ್ಯ ಬಿಜೆಪಿಯಲ್ಲಿ ನಡೆದಿಲ್ಲ ಎಂದು ಇದೇ ಸಂದರ್ಭದಲ್ಲಿ ಸಚಿವ ಕಾರಜೋಳ ಸ್ಪಷ್ಟಪಡಿಸಿದರು.

ಭವಿಷ್ಯ ನುಡಿದಿರುವುದು ಸುಳ್ಳಾಗಲಿ

ಟಿ.ನರಸೀಪುರ (ಡಿ. 04):  ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಅವರು ತಂದೆಗೆ ಲಕ್ಕಿ ಕ್ಷೇತ್ರ ಇಲ್ಲಿ ನಿಂತು ಗೆದ್ದರೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿರುವುದು ಸುಳ್ಳಾಗಲಿದೆ ಎಂದು ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ತೋಟದಪ್ಪ ಬಸವರಾಜು ಪ್ರತಿಕ್ರಿಯಿಸಿದ್ದಾರೆ.

2018ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲ್ಲ ಅವರಪ್ಪನಾಣೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಲ್ಲ ಎಂದು ಸಿದ್ದರಾಮಯ್ಯನವರು ಭವಿಷ್ಯ ನುಡಿದಿದ್ದರು, ಆದರೆ ಕ್ರಮವಾಗಿ ಕುಮಾರಸ್ವಾಮಿಯವರು ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದರು ಎಂದು ಅವರು ತಿಳಿಸಿದ್ದಾರೆ.

ಸಿದ್ದರಾಮಯ್ಯನವರಿಗೆ (Siddaramaiah)  ಬಾದಾಮಿ ಕೋಲಾರ (Kolar)  ವರುಣ ಎಲ್ಲಿ ನಿಂತರೂ ಗೆಲ್ಲುವ ಆತ್ಮವಿಶ್ವಾಸವಿಲ್ಲ, ಆದ್ದರಿಂದಲೇ ಅವರು ಕ್ಷೇತ್ರವನ್ನು ಘೋಷಣೆ ಮಾಡಿಲ್ಲ. ವರುಣದಲ್ಲಿ 2008ರಲ್ಲಿ ಗೆದ್ದು ಪ್ರತಿಪಕ್ಷದ ನಾಯಕರಾದರು 2013ರಲ್ಲಿ ಗೆದ್ದು ಮುಖ್ಯಮಂತ್ರಿಯಾದರು, ಕ್ಷೇತ್ರದ ಜನರು ಇವರನ್ನು ಬಾದಾಮಿ ಚಾಮುಂಡೇಶ್ವರಿಗೆ ಹೋಗಿ ಎಂದು ಹೇಳಿರಲಿಲ್ಲ, ಉನ್ನತ ಸ್ಥಾನವನ್ನು ಕೊಟ್ಟಕ್ಷೇತ್ರದ ಜನರಿಗೆ ದ್ರೋಹ ಮಾಡಿ ಬೆನ್ನಿಗೆ ಬೆನ್ನಿಗೆ ಚೂರಿ ಹಾಕಿ ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತು ಬಾದಾಮಿಯಲ್ಲಿ ಉಸಿರುಗಟ್ಟಿಗೆದ್ದರು, 2023ರಲ್ಲಿ ಯತೀಂದ್ರ ರವರು ಸ್ಪರ್ಧಿಸಿದರೆ ಮಧ್ಯಾಹ್ನಕ್ಕೆ ಮುಂಚೆಯೇ ಮನೆ ಸೇರುತ್ತಾರೆ ಎಂದಿದ್ದಾರೆ.

ಸಿದ್ದರಾಮಯ್ಯನವರು ಸ್ಪರ್ಧಿಸಿದರೆ ಮಧ್ಯಾಹ್ನದ ನಂತರ ಮನೆ ಸೇರುತ್ತಾರೆ ಅಷ್ಟೇ ಹೊರತು ಕಾಂಗ್ರೆಸ್‌ ಗೆಲ್ಲುವುದಿಲ್ಲ, ಇದು ಕ್ಷೇತ್ರದ ಮತದಾರರು ತೀರ್ಮಾನಿಸಿರುವ ವಿಷಯ. ಈ ಬಾರಿ ವರುಣದಿಂದಲೇ ಕಾಂಗ್ರೆಸ್‌ ಮುಕ್ತ ಕರ್ನಾಟಕ ಆರಂಭವಾಗುತ್ತದೆ ಕಳೆದ ಬಾರಿ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಸ್ಪರ್ಧಿಸಿದರು ಚಾಮುಂಡೇಶ್ವರಿಯ ಜನ ಕೈಹಿಡಿಯಲಿಲ್ಲ, 128 ಇದ್ದ ಕಾಂಗ್ರೆಸ್‌ 78ಕ್ಕೆ ಇಳಿಯಿತು. ಈ ಬಾರಿ ವರುಣದಲ್ಲೂ ಸೋತು ಕಾಂಗ್ರೆಸ್‌ ಐವತ್ತು ಅಂಕಿಗೆ ಇಳಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ

Follow Us:
Download App:
  • android
  • ios